janadhvani

Kannada Online News Paper

KCF ಸಹಾಫ ನೂತನ ಯೂನಿಟ್ ಅಸ್ತಿತ್ವಕ್ಕೆ

ಕೆಸಿಎಫ್ ರಿಯಾದ್ ಝೋನ್ ಗೋರ್ನಾಥ ಸೆಕ್ಟರ್ ಅಧೀನದಲ್ಲಿ ಕೆಸಿಎಫ್ ಸಹಾಫ ನೂತನ ಯೂನಿಟ್ ಸಿತಾರ್ ಮುಹಮ್ಮದ್ ಹಾಜಿಯವರ ಅಧ್ಯಕ್ಷತೆಯಲ್ಲಿ ದಿನಾಂಕ 14/3/2019 ರಂದು ನಡೆಯಿತು.

KCF ಸೌಧಿಅರೇಬಿಯಾ ರಾಷ್ಟ್ರೀಯ ಸಂಘಟನಾ ಚಯರ್ಮಾನ್ ಬಹುಮಾನ್ಯರಾದ ಸಿದ್ದೀಖ್ ಸಖಾಫಿ ಪೆರುವಾಯಿಯವರು KCF ನ್ನು ಕುರಿತು ಸವಿಸ್ತಾರವಾದ ವಿಷಯಗಳನ್ನು ಮಂಡಿಸಿ ಸಭೆಯನ್ನು ಉಧ್ಘಾಟನೆ ಮಾಡಿದರು.

KCF ಝೋನಲ್ ಕೋಶಾಧಿಕಾರಿ ಇಸ್ಮಾಯಿಲ್ ಕನ್ನಂಗಾರ್ ರವರ ಮುಖಾಂತರ KCF ಸಹಾಫ ನೂತನ ಶಾಖೆಯನ್ನು ರೂಪೀಕರಿಸಲಾಯ್ತು.

ಅಧ್ಯಕ್ಷರಾಗಿ ಮುಹಮ್ಮದ್ ಫಝಲ್ ದೇರಳಕಟ್ಟೆ, ಉಪಾಧ್ಯಕ್ಷರಾಗಿ C H ಅಬೂಬಕ್ಕರ್ ಉಸ್ತಾದ್ ಸೂರಿಂಜೆ ಹಾಗು ಉಸ್ಮಾನ್ ಪಾಣೆಮಂಗಳೂರು ರವರನ್ನು ಆಯ್ಕೆ ಮಾಡಲಾಯ್ತು. ಪ್ರ.ಕಾರ್ಯಧರ್ಶಿಯಾಗಿ ಉಬೈದ್ ಇಂದ್ರಾಜೆ, ಜೊ.ಕಾರ್ಯಧರ್ಶಿಯಾಗಿ ಸಫ್ವಾನ್ ಬಾಂಬಿಲ ಹಾಗೂ ಇರ್ಫಾನ್ ನೆಲ್ಯಾಡಿ. ಕೋಶಾಧಿಕಾರಿಯಾಗಿ ಮುಸ್ತಫ ಪೊಯ್ಯತಬೈಲ್ ರವರನ್ನು ಆಯ್ಕೆಮಾಡಲಾಯ್ತು.

ಅಧ್ಯಕ್ಷರು

ಕಾರ್ಯದರ್ಶಿ

ಖಜಾಂಜಿ

ಕಾರ್ಯಕಾರಿ ಸಮಿತಿ ಸಧಸ್ಯರಾಗಿ
ಝಾಕಿರ್ PM ಪಂಜ, ಸತ್ತಾರ್ ಕರಿಂಬಿಲ, ಸ್ವಾಧಿಕ್ ಉಳ್ಳಾಲ, ಫಾರೂಖ್ ಬೈರೆಕಟ್ಟೆ, ಅಬ್ಬಾಸ್ PH, ಲತೀಫ್ ಹಾಸನ, ಶಫೀಖ್ ಕಿಲ್ಲೂರು ಹಾಗು ಅಬ್ದುಲ್ ರಹಿಮಾನ್ ಚೇವಾರ್ ರವರನ್ನು ಆಯ್ಕೆಮಾಡಲಾಯ್ತು.
ಸೆಕ್ಟರ್ ಕೌಂಸಿಲರುಗಳಾಗಿ ಅಬ್ದುಲ್ ಅಝೀಝ್ ಮದನಿ ಕೊಕ್ಕಡ, ಸಿತಾರ್ ಮುಹಮ್ಮದ್ ಹಾಜಿ, ಝಾಕಿರ್ PM ಪಂಜ, ಸಫ್ವಿನ್ ಬಾಂಬಿಲ, ಉಸ್ಮಾನ್ ಪಾಣೆಮಂಗಳೂರು ಹಾಗು ಫಾರೂಖ್ ಬೈರಿಕಟ್ಟೆಯಲರನ್ನು ಆಯ್ಕೆಮಾಡಲಾಯ್ತು.

ಕಾರ್ಯಕ್ರಮವನ್ನು ನಝೀರ್ ಕಕ್ಕಿಂಜೆ ಸ್ವಾಗತಿಸಿದರು, ನವಾಝ್ ಚಿಕ್ಕಮಗಳೂರು ಕಾರ್ಯಕ್ರಮ ನಿರೂಪಿಸಿ ಮುಹಮ್ಮದ್ ರಮೀಝ್ ಕುಳಾಯಿ ಯವರು ಕ್ರತಜ್ಞತೆ ಸಲ್ಲಿಸಿದರು.