ದುಬೈ: ಕೊಲ್ಲಿಯಿಂದ ಕಣ್ಣೂರಿಗೆ ಇನ್ನಷ್ಟು ಏರ್ ಇಂಡಿಯಾ ವಿಮಾನಗಳು ಹಾರಾಡಲಿವೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ಬಹ್ರೈನ್ ಮೂಲಕ ಮಸ್ಕತ್ ಮತ್ತು ಕುವೈತ್ ಗೆ ಹೊಸ ಸೇವೆಗಳನ್ನು ಘೋಷಿಸಿದ್ದು, ಮಾರ್ಚ್ ಅಂತ್ಯದ ವೇಳೆಗೆ ಸೇವೆ ಪ್ರಾರಂಭಿಸಲಾಗುವುದು.
ಕಣ್ಣೂರ್ – ಶಾರ್ಜಾ ಸೇವೆಯನ್ನು ದಿನನಿತ್ಯವೂ ನಡೆಸಲು ನಿರ್ಧರಿಸಲಾಗಿದೆ. ಕಣ್ಣೂರಿನಿಂದ ಅಬುಧಾಬಿ-ದೋಹಾ ಸೇವೆಗಳನ್ನು ಹೆಚ್ಚಿಸಲಾಗುವುದರೊಂದಿಗೆ ಕೋಝಿಕ್ಕೋಡ್ನಿಂದ ರಿಯಾದ್ಗೂ ಸೇವೆಗಳನ್ನು ಹೆಚ್ಚಿಸಲಾಗುವುದು.
ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಸಿಇಒ ಕೆ. ಶ್ಯಾಮ್ ಸುಂದರ್ ದುಬೈನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಘೋಷಿಸಿದ್ದಾರೆ.