janadhvani

Kannada Online News Paper

ಬೆಂಗಳೂರು: ಎಸ್ಸೆಸ್ಸೆಪ್ ರಾಜ್ಯ ಪ್ರತಿನಿಧಿ ಸಮಾವೇಶ ಉಂದುಲುಸ್ ಇದರ ಜಯನಗರ ಡಿವಿಷನ್ ಕನ್‌ವೆನ್ಶನ್ ಸ‌ಅ‌ದಿಯ್ಯಾ ಸಭಾಂಗಣ ಯಾರಬ್ ನಗರದಲ್ಲಿ ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ನಈಮಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿಲ್ಲಾ ಕಾರ್ಯದರ್ಶಿ ಸಂಶುದ್ದೀನ್ ಅಝ್‌ಹರಿ ಯವರು ಉದ್ಘಾಟಿಸಿದರು. ಜಿಲ್ಲಾ ಕೋಶಾಧಿಕಾರಿ ಶಾಫಿ ಸ‌ಅದಿ ಮೆಜೆಸ್ಟಿಕ್ ರವರು ಪ್ರಾಸ್ತಾವಿಕ ವಾಗಿ ಮಾತನಾಡಿದರು.ಮಿಹ್‌ರಾಜುದ್ದೀನ್ ರವರು ನ‌ಅತ್ ಮೂಲಕ ಸಭಿಕರನ್ನು ಪ್ರವಾದಿ ಪ್ರೇಮದಲ್ಲಿ ತೇಲಾಡುವಂತೆ ಮಾಡಿದರು.

ಡಿವಿಷನ್ ಪ್ರ.ಕಾರ್ಯದರ್ಶಿ ಅಲ್ತಾಫ್ ರವರು ಸ್ವಾಗತಿಸಿ ಉಂದುಲುಸ್ ಡಿವಿಶನ್ ಅಮೀರ್ ಖಾಸಿಂ ರವರು ಧನ್ಯವಾದ ಗೈದರು.

error: Content is protected !! Not allowed copy content from janadhvani.com