janadhvani

Kannada Online News Paper

ಪ್ರವಾದಿ(ಸ.ಅ)ರವರ ನಿಂದನೆ: ಕೆಸಿಎಫ್ ಒಮಾನ್ ಖಂಡನೆ.


ಪ್ರವಾದಿ ಮುಹಮ್ಮದ್ (ಸ.ಅ) ರವರನ್ನು ಕನ್ನಡ ಟಿವಿ ನಿರೂಪಕರೋರ್ವರು ಅನಗತ್ಯವಾಗಿ ಚರ್ಚೆಯೊಂದರಲ್ಲಿ ಎಳೆದು ತಂದು ನಿಂದನೆ ಮಾಡಿರುವುದು ಖಂಡನೀಯ ಎಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ಹೇಳಿದ್ದಾರೆ.

ಸಾಹಿತಿ ಪ್ರೊ. ಭಗವಾನ್ ರವರು ರಾಮಾಯಣಕ್ಕೆ ಸಂಭಂದಿಸಿ ಬರೆದ ಕೃತಿಯಲ್ಲಿ ಸಮುದಾಯದ ಭಾವನೆಗೆ ಧಕ್ಕೆ ತರುವಂತಹ ವಿಚಾರಗಳಿದ್ದರೆ ಅದು ಖಂಡನೀಯ. ಆದರೆ ಈ ಕುರಿತು ಚರ್ಚೆಯಲ್ಲಿ ಪ್ರವಾದಿ ಮುಹಮ್ಮದ್ (ಸ.ಅ)ರವರ ಹೆಸರನ್ನು ಎಳೆದು ತಂದು ಅನಗತ್ಯವಾಗಿ ಧರ್ಮ ಧರ್ಮ ಗಳ ನಡುವೆ ಕೋಮು ಭಾವನೆಗಳನ್ನು ಸೃಷ್ಟಿಸುವ ಹುನ್ನಾರದಿಂದ ಇಂತಹ ನಿಂದನಾತ್ಮಕ ಚರ್ಚೆಯನ್ನು ನಡೆಸುತ್ತಿದೆ. ಇಂತಹ ಮಾಧ್ಯಮದವರನ್ನು ಸಮಾಜವು ಬಹಿಷ್ಕರಿಸಬೇಕಾಗಿದೆ ಎಂದು ಅಧ್ಯಕ್ಷರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com