ಎಉಪ್ಪಿನಂಗಡಿ ಡಿ,20:ಕರ್ನಾಟಕ ರಾಜ್ಯ ಸುನ್ನೀ ಸ್ಟೂಡಂಟ್ಸ್ ಫೆಡರೇಶನ್ ಉಪ್ಪಿನಂಗಡಿ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ಸೆಕ್ಟರ್ ಅಧ್ಯಕ್ಷರಾಗಿದ್ದ ಅಬ್ದುರ್ರಝಾಖ್ ಲತೀಫಿ ಯವರ ಅಧ್ಯಕ್ಷತೆಯಲ್ಲಿ ಇಲ್ಲಿನ ಮಠ ನೂರುಲ್ ಉಲಮಾ ಫೌಂಡೇಶನ್ ನಲ್ಲಿ ನಡೆಯಿತು.ಸಭೆಯನ್ನು ಸೆಕ್ಟರ್ ಉಪಾಧ್ಯಕ್ಷರಾಗಿದ್ದ ಬಿಳಿಯೂರು ಅಶ್ರಫ್ ಸಅದಿ ಉದ್ಘಾಟನೆ ಮಾಡಿದರು.ಸೆಕ್ಟರ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ.ಎಂ ಮಹ್ ರೂಫ್ ಆತೂರು ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.ಇದೇ ಸಂದರ್ಭ
ವೀಕ್ಷಕರಾಗಿ ಆಗಮಿಸಿದ ಉಪ್ಪಿನಂಗಡಿ ಡಿವಿಶನ್ ನಾಯಕರಾದ ಮುಹಮ್ಮದ್ ಮಿಸ್ಭಾಹಿ ಕಡಬ,ಮಸೂದ್ ಸಅದಿ ಗಂಡಿಬಾಗಿಲು,ರಹ್ಮಾನ್ ಪದ್ಮುಂಜ ರವರ ನೇತೃತ್ವದಲ್ಲಿ ಹಾಲಿ ಸಮಿತಿಯನ್ನು ಬರ್ಕಾಸ್ತು ಮಾಡಿ ನೂತನ ಸಾಲಿನ ಸಮಿತಿ ರಚಿಸಲಾಯಿತು.ಅವುಗಳೆಂದರೆ,
ಅಧ್ಯಕ್ಷರಾಗಿ ಹಾರಿಸ್ ಸಖಾಫಿ ಕೆಮ್ಮಾರ,ಉಪಾಧ್ಯಕ್ಷರಾಗಿ ನಝೀರ್ ಮುಸ್ಲಿಯಾರ್,ರಹ್ಮಾನ್ ಮಠ. ಪ್ರಧಾನ ಕಾರ್ಯದರ್ಶಿಯಾಗಿ ಉನೈಸ್ ಅಹ್ಮದ್ ಕುಂತೂರು,ಜೊತೆ ಕಾರ್ಯದರ್ಶಿಗಳಾಗಿ ಸಿರಾಜ್ ಕುದ್ಲೂರು, ಹಮೀದ್ ಕರುವೇಲ್ ಕೋಶಾಧಿಕಾರಿಯಾಗಿ ನಾಸಿರ್ ಆತೂರು ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುನವ್ವರ್ ಆತೂರು ಹಾಗೂ ಸದಸ್ಯರುಗಳಾಗಿ ರಝ್ಝಾಕ್ ಲತೀಫಿ ಕುಂತೂರು,ಎಂ.ಎಂ ಮಹ್ ರೂಫ್ ಆತೂರು,ಸಿರಾಜುದ್ದೀನ್ ಸಖಾಫಿ,ರಝಾ ಅಂಜದಿ ಉಪ್ಪಿನಂಗಡಿ,ಅಶ್ರಫ್ ಸಹದಿ ಬಿಳಿಯೂರು,ಜುನೈದ್ ಕೆಮ್ಮಾರ,ಸೈಫುಲ್ಲಾ ಗಂಡಿಬಾಗಿಲು,ಶಾಕಿರ್ ನೆಕ್ಕಿಲಾಡಿ,ಕೈಸ್ ಮಠ,ಫೈಝಲ್ ಕುಂತೂರು,ಶಾಹುಲ್ ಹಮೀದ್ ಕರುವೆಲ್,ನೌಫಲ್ ಬಂಡಾಡ್,ಇಮ್ತಿಯಾಝ್ ಬಿಳಿಯೂರು,ಅಶ್ರಫ್ ಬಿಳಿಯೂರು,ರಿಯಾಝ್ ಕರ್ವೆಲ್,ಮುಸ್ತಫಾ ಮುಸ್ಲಿಯಾರ್ ಗಂಡಿಬಾಗಿಲು,ಸಾನಿಫ್ ಕೆಮ್ಮಾರ ಇವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭ ಎಸ್ಸೆಸ್ಸೆಫ್ಫ್ ನಿಂದ ಎಸ್.ವೈ.ಎಸ್ ಗೆ ಪಾದಾರ್ಪಣೆಯಾದ ಆಸಿಫ್ ಆತೂರು ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಎಂ ಎಂ ಮಹ್ ರೂಫ್ ಆತೂರು ಸ್ವಾಗತಿಸಿ,ಸೆಕ್ಟರ್ ಪ್ರ.ಕಾರ್ಯದರ್ಶಿ ಉನೈಸ್ ಅಹ್ಮದ್ ವಂದಿಸಿದರು