janadhvani

Kannada Online News Paper

ಬಜಗೋಳಿ ಯಲ್ಲಿ ಸಂಭ್ರಮದ ಮಿಲಾದುನ್ನಬಿ ಕಾರ್ಯಕ್ರಮ

ಕಾರ್ಕಳ : ನೂರುಲ್ ಹುದಾ ಜುಮ್ಮಾ ಮಸೀದಿ ಬಜಗೋಳಿ ಇದರ ಆಶ್ರಯ ದಲ್ಲಿ ಮಿಲಾದುನ್ನಬಿ ಕಾರ್ಯಕ್ರಮ ನಿನ್ನೆ ಮಗ್ರಿಬ್ ನಂತರ ಮಸೀದಿ ವಠಾರದಲ್ಲಿ ನಡೆಯಿತು.

ಮೌಲಿದ್ ಮಜ್ಲಿಸ್ ನೊಂದಿಗೆ ಆರಂಭ ಗೊಂಡ ಕಾರ್ಯಕ್ರಮ ನಂತರ ಮಕ್ಕಳ ಮಿಲಾದ್ ಕಾರ್ಯಕ್ರಮವನ್ನು ಮಸೀದಿ ಖತೀಬರಾದ ಅಬ್ದುರ್ರಹ್ಮಾನ್ ಹುಮೈದಿ ಉಸ್ತಾದ್ ಉದ್ಘಾಟಿಸಿದರು.

ಸಭಾಧ್ಯಕ್ಷತೆಯನ್ನು ಪುತ್ತಾಕ ರವರು ನೆರವೇರಿಸಿದರು. ಗೌರವಾಧ್ಯಕ್ಷರಾದ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಬಜಗೋಳಿ ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ SMA ಕಾರ್ಕಳ ರಿಜಿನಲ್ ಅಧ್ಯಕ್ಷರು ಸುಲೈಮಾನ್ ಹಾಜಿ ಬಜಗೋಳಿ, ಉಮರಬ್ಬ ಗುರ್ಗಲ್’ಗುಡ್ಡೆ, M ಉಸ್ಮಾನ್ ಗುರ್ಗಲ್’ ಗುಡ್ಡೆ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಶೈಪುಲ್ಲಾ ಸ್ವಾಗತಿಸಿದರು. ಕೋಶಾಧಿಕಾರಿ ಸ್ವಾದಿಕ್ ಕಾರ್ಯಕ್ರಮ ವನ್ನು ನಿರೂಪಿಸಿ ಧನ್ಯವಾದ ಮಾಡಿದರು..