janadhvani

Kannada Online News Paper

ಎಸ್.ಎಸ್.ಎಫ್ ಕಾಯಾರ್ ಶಾಖಾ ಯೂನಿಟ್ ಸಮ್ಮೇಳನ

ಮುಡಿಪು : ಎಸ್.ಎಸ್.ಎಫ್ ಕಾಯಾರ್ ಶಾಖೆಯ ಯೌವ್ವನ ಮರೆಯಾಗುವ ಮುನ್ನ ಎಂಬ ಘೋಷವಾಕ್ಯದೊಂದಿಗೆ ಯೂನಿಟ್ ಸಮ್ಮೇಳನ ಮತ್ತು ಕಂಝುಲ್ ಉಲಮಾ, ನಿಬ್ರಾಸುಲ್ ಉಲಮಾ ಅನುಸ್ಮರಣೆ 07-11-2018 ಬುಧವಾರದಂದು ರಾತ್ರಿ ಎಸ್.ಎಸ್. ಎಫ್ ಕಾಯಾರ್ ಶಾಖಾದ್ಯಕ್ಷ ಆಸಿಪ್ ಕೆ.ಜಿ ರವರ ಅಧ್ಯಕ್ಸತೆಯಲ್ಲಿ ಹಿದಾಯತ್ತುಲ್ ಇಸ್ಲಾಂ ಮದರಸ ವಠಾರ ಕಾಯಾರ್ ನಲ್ಲಿ ನಡೆಯಿತು .
ಕಾರ್ಯಕ್ರಮದಲ್ಲಿ ಸಿದ್ದೀಖ್ ಸಖಾಫಿ ಕಾಯಾರ್ ಸ್ವಾಗತಿಸಿ ಉಮರ್ ಮದನಿ ಪೊಯ್ಯತ್ತಬೈಲು ಉದ್ಘಾಟಿಸಿದರು.
ಆ ಬಳಿಕ ಕರ್ನಾಟಕ ರಾಜ್ಯ ಎಸ್. ಎಸ್. ಎಫ್ ಕಾರ್ಯದರ್ಶಿ ಪ್ರಖ್ಯಾತ ವಾಗ್ಮಿ ಹಾಫಿಳ್ ಸುಫ್ಯಾನ್ ಸಖಾಫಿ ಉಸ್ತಾದ್ ಯೌವ್ವನ ಮರೆಯಾಗುವ ಮುನ್ನ ಎಂಬ ವಿಷಯದ ಕುರಿತು ಯುವಕರಿಗೆ ಮನಮುಟ್ಟುವ ರೀತಿಯಲ್ಲಿ ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಎಸ್. ಎಸ್. ಎಫ್ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಲ ಸಂದೇಶ ಭಾಷಣ ಮಾಡಿದರು, ಹಂಝ ಝುಹ್ರಿ ಇರಾಮೂಲೆ ಉಸ್ತುವಾರಿ ಎಸ್. ಎಸ್. ಎಫ್ ಕಾಯಾರ್ ಶಾಖೆ , ಹನೀಫ್ ತಚ್ಚಮಜಲು ಅದ್ಯಕ್ಷರು ಹೆಚ್.ಐ ಮದ್ರಸ ಕಾಯಾರ್ , ಮೊಯಿದಿನ್ ಹಾಜಿ ತೋಟಾಲ್ ಅದ್ಯಕ್ಷರು ಎಸ್. ವೈ.ಎಸ್ ಎಚ್ಕಲ್ಲು ಬ್ರಾಂಚ್, ಅಬ್ದುಲ್ ಅಝೀಝ್ ಎಚ್ಕಲ್ಲು ಅದ್ಯಕ್ಷರು ಎಸ್. ಎಸ್. ಎಫ್ ಬಾಳೆಪುಣಿ ಸೆಕ್ಟರ್, ಇಸ್ಹಾಖ್ ಕಾಯಾರ್ ಅದ್ಯಕ್ಷರು ಆರ್.ವೈ.ಸಿ ಕಾಯಾರ್, ಖಲೀಲ್ ಕಾಯಾರ್ ಕಾರ್ಯದರ್ಶಿ ಎಸ್. ಎಸ್. ಎಫ್ ಬಾಳೆಪುಣಿ ಸೆಕ್ಟರ್ ಅಲ್ಲದೆ ಅಬೂಬಕ್ಕರ್ ಕೆ.ಜಿ,ಅಲಿ ಕೆ.ಜಿ,ಇಪಾ೯ನ್ ಕೆ.ಜಿ,ಸಾಜಿದ್ ಕೆ.ಜಿ, ಹನೀಪ್ ಕಾಯಾರ್, ಕೆಬೀರ್,ಸವಾದ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಎಸ್. ಎಸ್. ಎಫ್ ಕಾಯಾರ್ ಶಾಖೆಯ ಪ್ರಧಾನ ಕಾರ್ಯದರ್ಶಿ ಜುನೈದ್ ಕಾಯಾರ್ ಧನ್ಯವಾದವಿತ್ತರು .
ವರದಿ : ಮುಹಮ್ಮದ್ ಹನೀಪ್ ಕಾಯಾರ್.

error: Content is protected !! Not allowed copy content from janadhvani.com