janadhvani

Kannada Online News Paper

ಬಿ.ಸಿ.ರೋಡ್ ನಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿಯ ರೈಟ್ ಟೀಮ್ ನ ರೈಟ್ ಮೀಟ್

ಬಿ.ಸಿ.ರೋಡ್:ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿಯ ಭರವಸೆಯ ತಂಡವಾಗಿರುವ ರೈಟ್ ಟೀಮ್ ನ ರೈಟ್ ಮ್ಯಾನ್ ಗಳಿಗೆ ರೈಟ್ ಮೀಟ್ ಕ್ಯಾಂಪ್ ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನ ರವರ ಅಧ್ಯಕ್ಷತೆಯಲ್ಲಿ ಸ್ಪರ್ಶ ಹಾಲ್ ಬಿ.ಸಿ ರೋಡ್ ನಲ್ಲಿ ನಡೆಯಿತು.

ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಸ್.ವೈ.ಎಸ್ ಕೇರಳ ರಾಜ್ಯಾಧ್ಯಕ್ಷ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು.

ಸುಳ್ಯ ಗಾಂಧಿನಗರ ಖತೀಬ್ ಅಶ್ರಫ್ ಕಾಮಿಲ್ ಸಖಾಫಿ ವಯನಾಡ್ ತರಗತಿಯನ್ನು ನಡೆಸಿದರು.

ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮೌಲಾನ ಸುಫ್ಯಾನ್ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ,ರಾಜ್ಯ ಚುನಾವಣಾ ಮಂಡಳಿ ಚಯರ್ ಮ್ಯಾನ್ ಸಾದಿಕ್ ಮಾಸ್ಟರ್ ಮಲೆಬೆಟ್ಟು,ರಾಜ್ಯ ಸದಸ್ಯರಾದ ಹಾಫಿಳ್ ಯಾಕೂಬ್ ಸ ಅದಿ ನಾವೂರು,ಶಾಕಿರ್ ಹಾಜಿ ಮಿತ್ತೂರು,ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ರಝಾಕ್ ಸಖಾಫಿ ಮೊಡಂತ್ಯಾರ್,ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ,ಎಸ್.ವೈ.ಎಸ್ ನಾಯಕರಾದ ಅಲ್ತಾಫ್ ಕುಂಪಲ,ಇಸ್ಮಾಯಿಲ್ ಕೆ.ಎಸ್ ಆರ್ ಟಿ.ಸಿ,ಆಸಿಫ್ ಹಾಜಿ ಕೃಷ್ಣಾಪುರ,ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕಾರ್ಯದರ್ಶಿ ಶರೀಪ್ ನಂದಾವರ,ಉಪಾಧ್ಯಕ್ಷರುಗಳಾದ ಇಬ್ರಾಹಿಂ ಸಖಾಫಿ ಸೆರ್ಕಳ,ಕೆ.ಎಂ.ಎಚ್ ಝುಹ್ರಿ ಕೊಂಬಾಳಿ,ಜಿಲ್ಲಾ ಸದಸ್ಯರಾದ ಸಯ್ಯದ್ ಖುಬೈಬ್ ತಂಙಳ್,ಮುನೀರ್ ಸಖಾಫಿ,ಹಾಫಿಳ್ ಮಜೀದ್ ಸಖಾಫಿ,ಅಬ್ದುಲ್ ರಹ್ಮಾನ್ ಸಖಾಫಿ ಬೆಳ್ತಂಗಡಿ,ಅಮ್ಮುಂಜೆ ಮಜೀದ್ ಸಖಾಫಿ,ಜಮಾಲುದ್ದೀನ್ ಸಖಾಫಿ.ಶರೀಫ್ ಸಖಾಫಿ ಕುಪ್ಪೆಟ್ಟಿ,ರಶೀದ್ ಹಾಜಿ,ಇಕ್ಬಾಲ್ ಮಂಗಳಪೇಟೆ ,ಜಬ್ಬಾರ್ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕಾರ್ಯದರ್ಶಿ ಮಹಮ್ಮದಲಿ ತುರ್ಕಳಿಕೆ ಸ್ವಾಗತಿಸಿದರು,ಸಲೀಂ ಹಾಜಿ ಬೈರಿಕಟ್ಟೆ ವಂದಿಸಿದರು.

error: Content is protected !! Not allowed copy content from janadhvani.com