janadhvani

Kannada Online News Paper

“SSF ಮರಕಡ ಯೂನಿಟ್ ಸಮ್ಮೇಳನ, ಮಹ್ಳರತುಲ್ ಬದ್ರಿಯ ಮಜ್ಲಿಸ್”

SSF ಮರಕಡ ಯೂನಿಟ್ ಸಮ್ಮೇಳನ ಹಾಗೂ ಮಹ್ಳರತುಲ್ ಬದ್ರಿಯ ಮಜ್ಲಿಸ್ 15/10/2018 (ಸೋಮವಾರ) ಮಗ್ರಿಬ್ ನಮಾಝ್ ಬಳಿಕ SSF ಮರಕಡ ಕಛೇರಿಯಲ್ಲಿ ಜರಗಿತು..
SSF ಮರಕಡ ಯೂನಿಟ್ ಅಧ್ಯಕ್ಷರಾದ ಶಕೀಬ್ ಅಧ್ಯಕ್ಷತೆ ವಹಿಸಿದ್ದರು..
SSF ಮಂಗಳೂರು ಡಿವಿಷನ್ ಕೋಶಾಧಿಕಾರಿಯೂ, SSF ಕಾವೂರು ಸೆಕ್ಟರ್ ಉಸ್ತುವಾರಿಯೂ ಆದ ನವಾಝ್ ಸಖಾಫಿ ಅಡ್ಯಾರ್ ಪದವು “ಯವ್ವನ ಮರೆಯಾಗುವ ಮುನ್ನ” ಎಂಬ ವಿಷಯದ ಬಗ್ಗೆ ಪ್ರಭಾಷಣಗೈದರು.


ಮುಖ್ಯ ಅತಿಥಿಗಳಾಗಿ SYS ಮರಕಡ ಬ್ರಾಂಚ್ ಅಧ್ಯಕ್ಷರಾದ ಹಮೀದ್, SYS ಕಾವೂರು ಸೆಂಟರ್ ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ಖಾದರ್, SSF ಕಾವೂರು ಸೆಕ್ಟರ್ ಅಧ್ಯಕ್ಷರಾದ ಅಝ್ಮಲ್ ಶಾಂತಿನಗರ, SSF ಕಾವೂರು ಸೆಕ್ಟರ್ ಮಾಜಿ ಅಧ್ಯಕ್ಷರಾದ ಶಫೀಕ್ ಬೋಂದೆಲ್ ಆಗಮಿಸಿದ್ದರು.
SSF ಮರಕಡ ಯೂನಿಟ್ ಜೊತೆ ಕಾರ್ಯದರ್ಶಿ ಮುಸ್ತಫ ಸ್ವಾಗತಿಸಿ, SSF ಕಾವೂರು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನೌಸಿಫ್ ಪಂಜಿಮೊಗರು ವಂದಿಸಿದರು.

error: Content is protected !! Not allowed copy content from janadhvani.com