janadhvani

Kannada Online News Paper

ಎಸ್ಸೆಸ್ಸೆಫ್ ಅರಬನ ವಳವೂರು: ನೂತನ ಸುನ್ನೀ ಸೆಂಟರ್ ಉದ್ಘಾಟನೆ

ವಳವೂರು: ಎಸ್ಸೆಸ್ಸೆಫ್ ಅರಬನ ವಳವೂರು ಶಾಖೆಯ ನೂತನ ಸುನ್ನೀ ಸೆಂಟರ್ ಉದ್ಟಾಟನೆ ಮತ್ತು ಮಾಸಿಕ ಮಹ್ಳರತುಲ್ ಬದ್ರಿಯಾ ಆಧ್ಯಾತ್ಮಿಕ ಸಂಗಮವು ಸೆ.28ರಂದು ಮಗ್ರಿಬ್ ನಮಾಝ್ ನ ನಂತರ ನಡೆಯಿತು.ಎಸ್ಸೆಸ್ಸೆಫ್ ಅರಬನ ವಳವೂರು ಶಾಖೆ ಇದರ ನೂತನ ಸುನ್ನೀ ಸೆಂಟರ್ ಉದ್ಘಾಟನೆಯನ್ನು ದಾರುಲ್ ಇರ್ಶಾದ್ ಮಾಣಿ ಇದರ ನೇತಾರರಾಗಿರುವ ಝೈನುಲ್ ಉಲಮಾ ಮಾಣಿ ಉಸ್ತಾದ್ ನಿರ್ವಹಿಸಿದರು.

ಮಾಸಿಕ ಮಹ್ಳರತುಲ್ ಬದ್ರಿಯಾ ಆಧ್ಯಾತ್ಮಿಕ ಸಂಗಮವು ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷರಾದ ಬಹು ವಳವೂರು ಉಸ್ತಾದ್ ರವರ ನೇತೃತ್ವದಲ್ಲಿ ನಡೆಯಿತು.ಪ್ರಸ್ತುತ ಆತ್ಮೀಯ ಸಂಗಮಕ್ಕೆ ವಳವೂರು ಜಮಾಅತ್ ಖತೀಬರಾದ ಅಬೂಬಕ್ಕರ್ ಸಅದಿ ಉಸ್ತಾದ್ ಊರಿನ ಹಿರಿಯ ಉಲಮಾ ನೇತಾರ ಅಕ್ಕರಂಗಡಿ ಉಸ್ತಾದ್ ಹಾಗೂ ಹಲವಾರು ಊರಿನ ಪ್ರಮುಖ ಉಮರಾ ನೇತಾರರು ಭಾಗವಹಿಸಿದ್ದರು.ಸುನ್ನಿ ಕರ್ನಾಟಕದ ಪ್ರಮುಖ ಉಮರಾ ನಾಯಕ ಗೋಲ್ಡನ್ ಲತೀಫ್ ಹಾಜಿ ಕೆ.ಎಸ್ ಸಾವುಞ್ಞಿ ಹಾಜಿ ಉಮರ್ ಹಾಜಿ ಎಸ್.ಬಿ.ಇಖ್ಬಾಲ್ ಹಾಜಿ ಹಾಗು ಇನ್ನಿತರ ಜಮಾಅತಿನ ಮುಖ್ಯ ಪದಾಧಿಕಾರಿಗಳು ಮತ್ತು
ಊರಿನ ಎಲ್ಲಾ ಸುನ್ನೀ ಉಲಮಾ ಉಮರಾ ನೇತಾರರು ಸುನ್ನೀ ಯುವ ಕಾರ್ಯಕರ್ತರು ಪ್ರಸ್ತುತ ಸಂಗಮಕ್ಕೆ ಹಾಜರಿದ್ದರು.

error: Content is protected !! Not allowed copy content from janadhvani.com