janadhvani

Kannada Online News Paper

ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಟೀಮ್ ಹಸನೈನ್ ಸಕ್ರೀಯ ಕಾರ್ಯಕರ್ತರ ಕ್ಯಾಂಪ್

ಕೋಣಾಜೆ: ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ವತಿಯಿಂದ ಡಿವಿಷನ್ ಮಟ್ಟದ ಟೀಮ್ ಹಸನೈನ್ ಸಕ್ರೀಯ ಕಾರ್ಯಕರ್ತರ ಕ್ಯಾಂಪ್ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ರವರ ಅಧ್ಯಕ್ಷತೆಯಲ್ಲಿ ಅಲ್- ಮದೀನಾ ಕಮ್ಯುನಿಟಿ ಹಾಲ್ ತಿಪ್ಲೆಪದವುವಿನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಉಪಾಧ್ಯಕ್ಷ ಫಾರೂಖ್ ಸಖಾಫಿ ಮದನಿ ನಗರ ದುಆ: ನೆರವೇರಿಸಿದರು

ಎಸ್ಸೆಸ್ಸೆಫ್ ರಾಜ್ಯ ನಾಯಕ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಟೀಮ್ ಹಸನೈನ್ ಉಳ್ಳಾಲ ಡಿವಿಷನ್ ಗೈಡ್ ತೌಸೀಫ್ ಸ ಅದಿ ಹರೇಕಳ ಹಾಗೂ ಡಿವಿಷನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ ತರಗತಿಯನ್ನು ನಡೆಸಿದರು.

ಕಾರ್ಯಕ್ರಮದಲ್ಲಿ ಡಿವಿಷನ್ ಕಾರ್ಯದರ್ಶಿ ಸಯ್ಯದ್ ಖುಬೈಬ್ ತಂಙಳ್,ಅಬೂಸ್ವಾಲಿಹ್ ಹರೇಕಳ,ಶಮೀರ್ ಸೇವಂತಿಗುಡ್ಡೆ,ಜಾಫರ್ ಅಳೇಕಲ,ಜಲೀಲ್ ಫರೀದ್ ನಗರ,ನೌಫಲ್ ಫರೀದ್ ನಗರ,ಜಿ.ಎ.ಇಬ್ರಾಹಿಂ ಅಜ್ಜಿನಡ್ಕ,ಮೊದಲಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಕೋಶಾಧಿಕಾರಿ ಶರೀಫ್ ಮುಡಿಪು ಸ್ವಾಗತಿಸಿದರು.ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ವಂದಿಸಿದರು.

error: Content is protected !! Not allowed copy content from janadhvani.com