ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಇದರ 2018ನೇ ಸಾಲಿನ ಚುನಾವಣಾ ಪ್ರಕ್ರಿಯೆಯು ಪ್ರಾರಂಭವಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಘಟಕಗಳ ಅಧಿಕಾರಿಗಳು, ಮತ್ತು ನಾಯಕರಿಗೆ ಎಲೆಕ್ಷನ್ ವರ್ಕ್ ಶಾಪ್-18 ಕಾರ್ಯಕ್ರಮವನ್ನು ಬಾಳೆಹೊಣ್ಣೂರಿನಲ್ಲಿರುವ ಅಲ್ ಮಂಝಿಲ್ ಅಕಾಡೆಮಿಯಲ್ಲಿ ಜಿಲ್ಲಾಧ್ಯಕ್ಷ ಸಯ್ಯಿದ್ ಹಾಮೀಂ ಶಿಹಾಬ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಮೀದ್ ಉಸ್ತಾದ್ ನಗರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರಾಜ್ಯ ಚುನಾವಣಾ ಮಂಡಳಿ ಕಾರ್ಯದರ್ಶಿ ಹಾಫಿಳ್ ಯಾಕೂಬ್ ಸಅದಿ ಅಲ್ ಅಫ್ಳಲಿ ವರ್ಕ್ ಶಾಪ್ ನಡೆಸಿ ಕೊಟ್ಟರು.
ರಾಜ್ಯ ತಾಂತ್ರಿಕ ಅಧಿಕಾರಿ ರವೂಫ್ ಉಡುಪಿ ತಾಂತ್ರಿಕ ಮಾಹಿತಿ ನೀಡಿದರು.ಹುಸೈನ್ ಸಅದಿ ಹೊಸ್ಮಾರ್ ಯುನಿಟ್ ಕಾನ್ಫರೆನ್ಸ್ ಬಗ್ಗೆ ಮಾಹಿತಿ ನೀಡಿದರು.
ರಾಜ್ಯ ನಾಯಕರಾದ ಉಸ್ಮಾನ್ ಉಪ್ಪಳ್ಳಿ, ಇಬ್ರಾಹಿಮ್ ಮೂಡಿಗೆರೆ ಜಿಲ್ಲಾ ನಾಯಕರಾದ ಮುನೀರ್ ಚಿಕ್ಕಮಗಳೂರು, ಆಬಿದ್ ಸಖಾಫಿ ಮಾಗುಂಡಿ, ಸುಲೈಮಾನ್ ಶೆಟ್ಟಿ ಕೊಪ್ಪ, ಅಝೀಝ್ ಮಾಗುಂಡಿ , ಸೈದಲವಿ ಚಿಕ್ಕಮಗಳೂರು, ನಸೀರ್ ಅಹ್ಮದ್ ಉಪ್ಪಳ್ಳಿ, ಅಬ್ದುಲ್ ರಹಿಮಾನ್ ಕೊಪ್ಪ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಸ್ತಫ ಝುಹ್ರಿ ಕಲ್ದೊಡ್ಡಿ ಸ್ವಾಗತಿಸಿ ಸಫ್ವಾನ್ ಸಖಾಫಿ ವಂದಿಸಿದರು.