janadhvani

Kannada Online News Paper

ಬೋಳಂತೂರು: SSF N.C ರೋಡ್ ಶಾಖೆ ವತಿಯಿಂದ 72 ನೇ ಸ್ವಾತಂತ್ರ್ಯೋವವನ್ನು ಬಹಳ ಸಡಗರದಿಂದ ಆಚರಿಸಲಾಯಿತು. ಶಾಖಾ ಅಧ್ಯಕ್ಷ ಮುಹಮ್ಮದ್ ಮಜೀದ್ ಕದ್ಕಾರ್ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಮುತ್ತಲಿಬ್ ಹಾಜಿ ನಾರ್ಶ (ಕೋಶಾಧಿಕಾರಿ SYS ಬಂಟ್ವಾಳ ಝೋನ್)ಧ್ವಜಾರೋಹಣಕ್ಕೆ ನೇತೃತ್ವ ನೀಡಿದರಿ.

ಬಹು: ಮುಹಮ್ಮದಲಿ ಸಖಾಫಿ ದಾರುಲ್ ಅಶ್ – ಅರಿಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹುಸೈದ್ ಕುಡುಂಬಕೋಡಿ ಪ್ರಾಸ್ತಾವಿಕ ಭಾಷಣ ಮಾಡಿದರು.ಕೆಬೀರ್ ಸಅದಿ ಸೇರ್ಕಳ ಮುಖ್ಯ ಪ್ರಭಾಷಣ ನಡೆಸಿದರು.1ಮುಖ್ಯ ಅತಿಥಿಗಳಾಗಿ ಅಬ್ದುಲ್ ಹಮೀದ್ ಮದನಿ (ಅಂಗಡಿ) ಸುರಿಬೈಲ್, ಇಬ್ರಾಹಿಂ ಖಂಡಿಗ, (ಸದಸ್ಯರು SYS ಮಂಚಿ ಸಂಟರ್), ರಫೀಕ್ ಮಾಡದ ಬಳಿ(ಅಧ್ಯಕ್ಷರು ತಾಜುಲ್ ಉಲಮಾ ಸುನ್ನೀ ಸೆಂಟರ್ ) ಅಬ್ದುಲ್ಲಾ ನಾರಂಕೋಡಿ (ಅಧ್ಯಕ್ಷರು ತಾಜುಲ್ ಉಲಮಾ ಮದ್ರಸ ನಾರಂಕೋಡಿ) ಅಬ್ದುಲ್ ಕಾದರ್ ಕೊಕ್ಕಪುಣಿ, ಅಬ್ಬಾಸ್ ಹಾಜಿ ಕುಡುಂಬಕೋಡಿ , ರಫೀಕ್ ಕೆ.ಪಿ ಬೈಲ್ ಪವಿತ್ರ ಗ್ರೂಪ್ ಉಪಸ್ಥಿತರಿದ್ದರು. ಕೆರೀಂ ಕದ್ಕಾರ್ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.

ವರದಿ: ಹಾರಿಸ್ ನರಂಕೊಡಿ (ಪ್ರ, ಕಾರ್ಯದರ್ಶಿ SSF N.C ರೋಡ್ ಯೂನಿಟ್)

1
1
1

error: Content is protected !! Not allowed copy content from janadhvani.com