janadhvani

Kannada Online News Paper

ಕೆಸಿಎಫ್ ದುಬೈ ಸೌತ್ ಝೋನ್: ಉಮ್ರಾ ಯಾತ್ರೆಗೆ ಸುವರ್ಣಾವಕಾಶ

ದುಬೈ: ಕೆಸಿಎಫ್ ಎಂಬ ಸಂಘಟನೆಯು ಅನಿವಾಸಿ ಕನ್ನಡಿಗರ ಹೃದಯದಲ್ಲಿ ಅಹ್ಲುಸುನ್ನತಿ ವಲ್ ಜಮಾಅತ್ ತತ್ವ ಸಿದ್ದಾಂತಗಳನ್ನೊಳಗೊಂಡ ಈಮಾನ್ ದೃಢಗೊಳಿಸಲು ಪ್ರಚೋದನಕಾರಿಯಾಗಿದೆ. ಪ್ರಸ್ತುತ ಸಂಘಟನೆಯು ಧಾರ್ಮಿಕ ರಂಗದಲ್ಲಿ ಹಲವಾರು ಸ್ವಲಾತ್, ಝಿಕ್ರ್ ಮಜ್ಲಿಸ್’ಗಳು, ತಹ್ಲೀಲ್‌ ಸಮರ್ಪಣಾ ಕಾರ್ಯಕ್ರಮಗಳು, ದೀನೀ ದ’ಅವತ್ ಗಳು, ಮದ್ರಸಾ ಶಿಕ್ಷಣಗಳನ್ನು ನೀಡುತ್ತಾ ಧಾರ್ಮಿಕ ರಂಗದಲ್ಲಿ ಮುನ್ನಡೆಯುವುದರ ಜೊತೆಗೆ ಸಾಮಾಜಿಕ ರಂಗದಲ್ಲಿಯೂ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದರ ಮೂಲಕ ಮರುಭೂಮಿಯಲ್ಲಿ ಅದ್ಬುತ ಕ್ರಾಂತಿಯನ್ನೇ ಸೃಷ್ಟಿಸುತ್ತಿದೆ.

ಇದರ ಭಾಗವಾಗಿ ಕೆಸಿಎಫ್ ದುಬೈ ಸೌತ್ ಝೋನ್ ಅಧೀನದಲ್ಲಿ ದುಬೈಯ ಅನಿವಾಸಿ ಸುನ್ನೀ ಮಿತ್ರರನ್ನು ಒಟ್ಟುಗೂಡಿಸಿಕೊಂಡು ಪುಣ್ಯ ರಬೀಉಲ್ ಅವ್ವಲ್ ತಿಂಗಳಲ್ಲಿ ಪವಿತ್ರ ಉಮ್ರಾ ಯಾತ್ರೆಯನ್ನು ಕೈಗೊಳ್ಳಲು ತೀರ್ಮಾನಿಸಿದೆ.ದಿನಾಂಕ 14-11-2018 ಬುಧವಾರದಂದು ದುಬೈಯಿಂದ ನುರಿತ ಅನುಭವಿ ಅಮೀರರ ನೇತೃತ್ವದೊಂದಿಗೆ ಸುಸಜ್ಜಿತವಾದ ಬಸ್ಸಿನಲ್ಲಿ ಯಾತ್ರೆ ಹೊರಡಲಿದ್ದು ಮೊದಲು ಪವಿತ್ರ ಮಕ್ಕಾ ತೆರಳಿ ಉಮ್ರಾ ನಿರ್ವಹಿಸಿಕೊಂಡು ಅಲ್ಲಿನ ಪವಿತ್ರ ಸ್ಥಳಗಳನ್ನು ಸಂದರ್ಶಿಸುತ್ತಾ ರಬೀಉಲ್ ಅವ್ವಲ್ 12 ರಂದು ಪುಣ್ಯ ಪ್ರವಾದಿಯು ಅಂತ್ಯ ವಿಶ್ರಮಗೊಳ್ಳುತ್ತಿರುವ ಪವಿತ್ರ ಮದೀನಾ ಮಣ್ಣಿಗೆ ತಲುಪಲಿದ್ದೇವೆ ಇನ್ಷಾ ಅಲ್ಲಾಹ್..

ಪ್ರೀತಿಯ ಅನಿವಾಸಿ ಮಿತ್ರರೇ,
ಇದು ನಿಮಗೊಂದು ಸುವರ್ಣ ಅವಕಾಶ. ನಿಮಗಾಗಿ ಕಾಯ್ದಿರಿಸಿದಂತಹ ಸೀಟನ್ನು ಇಂದೇ ಬುಕ್ ಮಾಡಿ..

ನಿಮ್ಮ ಸೀಟು ಕಾದಿರಿಸಲು ಕೂಡಲೇ ಸಂಪರ್ಕಿಸಿ:
0524752729
0525632959
0555337542.

ಕೆಸಿಎಫ್ ದುಬೈ ಸೌತ್ ಝೋನ್.

error: Content is protected !! Not allowed copy content from janadhvani.com