janadhvani

Kannada Online News Paper

ಕುದ್ಲೂರು,ಜು23: ಮರ್ಹೂಂ ಕೆ.ಸುಲೈಮಾನ್ ಹಾಜೀ &ಫ್ಯಾಮಿಲಿ ಸಮಿತಿಯಿಂದ ಕುಟುಂಬ ಪರಿಧಿಯ ಎಲ್ಲಾ ಸದಸ್ಯರನ್ನೊಳಗೊಂಡ ಫ್ಯಾಮಿಲೀ ಮುಲಾಖಾತ್ ಇಲ್ಲಿನ ಪುತ್ತು ಹಾಜೀ ಅವರ ಮನೆಯಲ್ಲಿ ನಡೆಯಿತು.

ಸಮಿತಿ ಅಧ್ಯಕ್ಷ ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸುತ್ತಾ,ಕುಟುಂಬ ಸೌಹಾರ್ದ ಹದಗೆಡುತ್ತಿರುವಾಗ ನಮ್ಮ ಕುಟುಂಬದ ನವಪೀಳಿಗೆಯನ್ನು ಐಕ್ಯದ ಸರಣಿಗೆ ಕೊಂಡೊಯ್ಯುವಲ್ಲಿ ದೊಡ್ಡ ಪ್ರಯತ್ನಮಾಡಲಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಝಕರಿಯಾ ಪೈಝಿ,ಅಬೂಬಕ್ಕರ್ ಸಅದಿ ಕೌಟುಂಬಿಕ ವಿಷಯಗಳಲ್ಲಿ ತರಗತಿಯನ್ನು ನಡೆಸಿಕೊಟ್ಟರು.ಹತ್ತು ಸೆಶನ್ ಗಳಲ್ಲಿ ನಡೆದ ವಿವಿಧ ಕಾರ್ಯಕ್ರಮಗಳು ಬಹಳ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಎಂ.ಎಚ್ ಮುಹಮ್ಮದ್ ಮದನಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಸಿರಾಜ್ ಕುದ್ಲೂರು ವಂದಿಸಿದರು

error: Content is protected !! Not allowed copy content from janadhvani.com