janadhvani

Kannada Online News Paper

ದುಲ್ ಹಿಜ್ಜಾ ಚಂದ್ರದರ್ಶನವಾಗಿಲ್ಲ: ಮೇ 28 ರಂದು ಬಕ್ರೀದ್- ಖಾಝಿಗಳಿಂದ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೇ 28 ರಂದು ಬಕ್ರೀದ್ (ಈದುಲ್ ಅದ್ಹಾ) ಆಚರಿಸಲಾಗುವುದು. ಇಂದು (ದುಲ್ಖಅದ್ 29) ರಾಜ್ಯದ ಯಾವುದೇ ಭಾಗದಲ್ಲೂ ದುಲ್ ಹಜ್ಜ್ ತಿಂಗಳ ಚಂದ್ರದರ್ಶನವಾಗಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ, ಮೇ 18 ಸೋಮವಾರದಂದು ದುಲ್ಖಅದ್ 30 ದಿನಗಳನ್ನು ಪೂರ್ಣಗೊಳಿಸಿ, ಮೇ 19 ಮಂಗಳವಾರವನ್ನು ದುಲ್ ಹಜ್ಜ್ ತಿಂಗಳ ಮೊದಲ ದಿನವಾಗಿ ಪರಿಗಣಿಸಲಾಗುವುದು ಎಂದು ಖಾಝಿಗಳು ತಿಳಿಸಿದ್ದಾರೆ. ಮೇ.27 ರಂದು ಅರಫಾ ದಿನ ಆಗಿರಲಿದೆ. ಅಂದು ಉಪವಾಸ ಸುನ್ನತ್ ಇದೆ.

ಉಳ್ಳಾಲ ಮತ್ತು ಕೊಡಗು ಸಂಯುಕ್ತ ಮೊಹಲ್ಲಾ ಖಾಝಿಗಳಾದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್, ಮಂಗಳೂರು ಹಾಗೂ ಸಂಯುಕ್ತ ಮೊಹಲ್ಲಾ ಜಮಾಅತ್ ಖಾಝಿಗಳಾದ ತ್ವಾಖಾ ಅಹ್ಮದ್ ಮುಸ್ಲಿಯಾರ್, ಉಡುಪಿ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಮೊಹಲ್ಲಾ ಖಾಝಿಗಳಾದ ಝೈನುಲ್ ಉಲಮಾ ಮಾಣಿ ಉಸ್ತಾದ್ ಅವರು ಚಂದ್ರದರ್ಶನವಾಗದ ಬಗ್ಗೆ ಖಚಿತಪಡಿಸಿ ಅಧಿಕೃತ ಘೋಷಣೆ ಹೊರಡಿಸಿದ್ದಾರೆ.

ಇದನ್ನೂ ಓದಿರಿ...