janadhvani

Kannada Online News Paper

ಕೆ.ಸಿ.ಎಫ್ ಬಹರೈನ್ ಬೃಹತ್ ದಫ್ ರಾತೀಬ್ ಮಜ್ಲಿಸ್ ಪೋಸ್ಟರ್ ಬಿಡುಗಡೆ

”ಆದ್ಯಾತ್ಮಿಕತೆಯಿಂದ ಉನ್ನತಿಗೆ”’ ಎಂಬ ಘೋಷ ವಾಕ್ಯದೊಂದಿಗೆ ಆತ್ಮ ಜ್ಞಾನಿಗಳ ಚಕ್ರವರ್ತಿ ಶೈಖ್ ರಿಫಾಈ (ಖ.ಸಿ) ರವರ ಹೆಸರಿನಲ್ಲಿ ದಿನಾಂಕ 05-12-2025 ರಂದು ಸಂಜೆ 6-30 ಕ್ಕೆ ಮನಾಮ ಪಾಕಿಸ್ತಾನ್ ಕ್ಲಬ್ ಮೈದಾನದಲ್ಲಿ ನಡೆಯಲಿರುವ ಬ್ರಹತ್ ದಫ್ ರಾತೀಬ್ ಮಜ್ಲಿಸ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಕೆ.ಸಿ.ಎಫ್ ಸೆಂಟರ್ ಗುದೈಬಿಯಾದಲ್ಲಿ ನಡೆಯಿತು.

ಮಲಪ್ಪುರಂ ಜಿಲ್ಲಾ ಕೇರಳ ಮುಸ್ಲಿಂ ಜಮಾಅತ್ ಉಪಾಧ್ಯಕ್ಷರೂ ಹಾಗೂ ಪ್ರಮುಖ ಪಂಡಿತರೂ ಬಹುಮಾನ್ಯರಾದ ವಡಶೇರಿ ಹಸನ್ ಮುಸ್ಲಿಯಾರ್ ಉಸ್ತಾದರು ಪೋಸ್ಟರ್ ಬಿಡುಗಡೆಗೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಲ, ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ, ರಿಫಾಈ ದಫ್ ಸಮಿತಿ ಚೇರ್ಮಾನ್ ಇಕ್ಬಾಲ್ ಮಂಜನಾಡಿ, ಕನ್ವೀನರ್ ಕಲಂದರ್ ಉಸ್ತಾದ್, ಕೋಶಾಧಿಕಾರಿ ಮನ್ಸೂರ್ ಬೆಳ್ಮ, ಕೆ.ಸಿ.ಎಫ್ ಬಹರೈನ್ ನ್ಯಾಷನಲ್, ಝೋನಲ್ ಹಾಗೂ ಸೆಕ್ಟರ್ ಪ್ರತಿನಿಧಿಗಳು ಉಪಸ್ಥಿತರಿದ್ದರು.