ಕರ್ನಾಟಕ ಮುಸ್ಲಿಂ ಜಮಾಅತ್ ಮಾಡಾವು ಸರ್ಕಲ್ ವತಿಯಿಂದ ಅಮ್ಚಿನಡ್ಕ ಬದಿಯಡ್ಕ ಮದರಸ ಸಭಾಂಗಣದಲ್ಲಿ ಸರ್ಕಲ್ ಅಧ್ಯಕ್ಷ ಎಮ್ ಎಮ್ ಅಬೂಬಕರ್ ಹಾಜಿ ಮಾಡಾವು ರವರ ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯ ಸೌಹಾರ್ದಸಂಗಮವು ಬಹಳ ವಿಜೃಂಭಣೆಯಿಂದ ನಡೆಯಿತು.

ಅಬ್ದುಲ್ ಹಮೀದ್ ಮದನಿ ಮಾಡಾವು ರವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು. ಕೆಎಂಜೆ ಪುತ್ತೂರು ಝೋನ್ ಅಧ್ಯಕ್ಷ ಉಸ್ಮಾನ್ ಮುಸ್ಲಿಯಾರ್ ಕುಂಬ್ರ ರವರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು . ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಂಬೆಟ್ಟು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು , ಪುತ್ತೂರು ನಗರ ಪ್ರಾಧಿಕಾರ ಅಧ್ಯಕ್ಷ ರಾಮಚಂದ್ರ ಅಮಲ, ಕೆಯ್ಯೂರು ಕೆಪಿಎಸ್ ಶಾಲಾ ಉಪನ್ಯಾಸಕರಾದ ಇಸ್ಮಾಯಿಲ್ ಮಾಸ್ಟರ್ ಸೌಹಾರ್ದ ಭಾರತದ ಬಗ್ಗೆ ಬಾಷಣಗಳನ್ನು ನಡೆಸಿದರು. ಸುನಿಲ್ ಡಿಸೋಜಾ ನೂಜಿ, ಹಸೈನಾರ್ ಬಿ ಎಂ, ಅಮ್ಚಿನಡ್ಕ, ಎಸ್ ವೈಎಸ್ ದ.ಕ ಈಸ್ಟ್ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಚೆನ್ನಾರ್ ಮೊದಲಾದವರು ಶುಭ ಹಾರೈಸಿದರು. ಭವ್ಯ ಭಾರತವು ಹಿಂದೆ ಹೇಗಿತ್ತು ಈಗ ಹೇಗಿದೆ ಮುಂದೆ ಏನಾಗಬೇಕೆಂಬ ಒಂದು ಚರ್ಚಾವೇದಿಕೆಯಾಗಿತ್ತು, ಅಲ್ಲದೇ ಸೌಹಾರ್ದ ಚಹಾ ಕೂಟವನ್ನೂ ಏರ್ಪಡಿಸಲಾಗಿತ್ತು.
ಪ್ರಸ್ತುತ ಸಂಗಮದಲ್ಲಿ, ಎಸ್ ವೈ ಎಸ್ ಪುತ್ತೂರು ಝೋನ್ ಉಪಾಧ್ಯಕ್ಷ ಪವಾಝ್ ಕಟ್ಟತ್ತಾರು, ಇಬ್ರಾಹಿಂ ಹಾಜಿ ಫ್ಯಾಮಿಲಿ , ಉಮರ್ ಹಾಜಿ ಕಟ್ಟತ್ತಾರು, ಹುಸೈನ್ ಮುಸ್ಲಿಯಾರ್ ಮೂಸ ಕಂಞಿ ಅಂಚಿನಡ್ಕ, ಅಬ್ದುಲ್ ಕಾದರ್ ಚೆನ್ನಾರ್ ಅಬ್ಬಾಸ್ ಚೆನ್ನಾರ್ ಅಬ್ದುಲ್ ರಹಿಮಾನ್ ಸಖಾಫಿ ಅಮ್ಚಿನಡ್ಕ ಎಸ್ ವೈಎಸ್ ಮಾಡಾವು ಸರ್ಕಲ್ ಉಪಾಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್ ಅಂಚಿನಡ್ಕ, ಸಂಘಟನಾ ಕಾರ್ಯದರ್ಶಿ ನಾಸಿರ್ ಸಖಾಫಿ ಕಟ್ಟತ್ತಾರು ಅಬೂಬಕ್ಕರ್ ನಿಡ್ಯಾಣ , ಸತ್ತಾರ್ ಚೆನ್ನಾರ್ , ಕೆಸಿಎಫ್ ಸಂಘಟಕ ಅಮೀನ್ ಸಅದಿ ಝುಹ್ರಿ ಚೆನ್ನಾರ್, ಮಹಮ್ಮದ್ ಕುಂಡಡ್ಕ, ಅಬೂಬಕ್ಕರ್ ಸಖಾಫಿ ಕೊಳ್ತಿಗೆ , ಆಲೀ ಮುಸ್ಲಿಯಾರ್ ಎಂ, ಕೆ ಇಬ್ರಾಹಿಂ ಮುಸ್ಲಿಯಾರ್ ಪುತ್ತುಕುಂಞಿ ಹಾಜಿ, ಅಬ್ದುಲ್ ರಝಾಕ್ ಸಿ ಎಂ, ಸಿದ್ದೀಕ್ ಅಮ್ಚಿನಡ್ಕ, ಹಂಝ ಅರಿಕ್ಕಿಲ, ಸತ್ತಾರ್ ಅರಿಕ್ಕಿಲ, ಖಾದರ್ ಹಾಜಿ, ಅಬ್ದುಲ್ ಖಾದರ್ ಅಂಚಿನಡ್ಕ ಎಸ್ ವೈಎಸ್ ಕೋಶಾಧಿಕಾರಿ ಮುಹಮ್ಮದ್ ಕುಂಡಡ್ಕ, ಸತ್ತಾರ್ ಅರಿಕ್ಕಿಲ ಮೊದಲಾದವರು ಉಪಸ್ಥಿತರಿದ್ದರು.
ಸರ್ಕಲ್ ಸಂಘಟನಾ ಕಾರ್ಯದರ್ಶಿ ಹಂಝ ಲತೀಫೀ ಸ್ವಾಗತಿಸಿ ಸರ್ಕಲ್ ಪ್ರ ಕಾರ್ಯದರ್ಶಿ ಮಹಮ್ಮದ್ ಬಾಯಂಬಾಡಿ ವಂದಿಸಿದರು.
ರಾಷ್ಟ್ರ ಗೀತೆಯನ್ನು ಹಾಡುವುದರೊಂದಿಗೆ ಸೌಹಾರ್ದ ಸಂಗಮವನ್ನು ಸಮಾಪ್ತಿಗೊಳಿಸಲಾಯ್ತು.
















ಇನ್ನಷ್ಟು ಸುದ್ದಿಗಳು
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?