ಕರ್ನಾಟಕ ಮುಸ್ಲಿಂ ಜಮಾಅತ್ ಮಾಡಾವು ಸರ್ಕಲ್ ವತಿಯಿಂದ ಅಮ್ಚಿನಡ್ಕ ಬದಿಯಡ್ಕ ಮದರಸ ಸಭಾಂಗಣದಲ್ಲಿ ಸರ್ಕಲ್ ಅಧ್ಯಕ್ಷ ಎಮ್ ಎಮ್ ಅಬೂಬಕರ್ ಹಾಜಿ ಮಾಡಾವು ರವರ ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯ ಸೌಹಾರ್ದಸಂಗಮವು ಬಹಳ ವಿಜೃಂಭಣೆಯಿಂದ ನಡೆಯಿತು.

ಅಬ್ದುಲ್ ಹಮೀದ್ ಮದನಿ ಮಾಡಾವು ರವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು. ಕೆಎಂಜೆ ಪುತ್ತೂರು ಝೋನ್ ಅಧ್ಯಕ್ಷ ಉಸ್ಮಾನ್ ಮುಸ್ಲಿಯಾರ್ ಕುಂಬ್ರ ರವರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು . ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಂಬೆಟ್ಟು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು , ಪುತ್ತೂರು ನಗರ ಪ್ರಾಧಿಕಾರ ಅಧ್ಯಕ್ಷ ರಾಮಚಂದ್ರ ಅಮಲ, ಕೆಯ್ಯೂರು ಕೆಪಿಎಸ್ ಶಾಲಾ ಉಪನ್ಯಾಸಕರಾದ ಇಸ್ಮಾಯಿಲ್ ಮಾಸ್ಟರ್ ಸೌಹಾರ್ದ ಭಾರತದ ಬಗ್ಗೆ ಬಾಷಣಗಳನ್ನು ನಡೆಸಿದರು. ಸುನಿಲ್ ಡಿಸೋಜಾ ನೂಜಿ, ಹಸೈನಾರ್ ಬಿ ಎಂ, ಅಮ್ಚಿನಡ್ಕ, ಎಸ್ ವೈಎಸ್ ದ.ಕ ಈಸ್ಟ್ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಚೆನ್ನಾರ್ ಮೊದಲಾದವರು ಶುಭ ಹಾರೈಸಿದರು. ಭವ್ಯ ಭಾರತವು ಹಿಂದೆ ಹೇಗಿತ್ತು ಈಗ ಹೇಗಿದೆ ಮುಂದೆ ಏನಾಗಬೇಕೆಂಬ ಒಂದು ಚರ್ಚಾವೇದಿಕೆಯಾಗಿತ್ತು, ಅಲ್ಲದೇ ಸೌಹಾರ್ದ ಚಹಾ ಕೂಟವನ್ನೂ ಏರ್ಪಡಿಸಲಾಗಿತ್ತು.
ಪ್ರಸ್ತುತ ಸಂಗಮದಲ್ಲಿ, ಎಸ್ ವೈ ಎಸ್ ಪುತ್ತೂರು ಝೋನ್ ಉಪಾಧ್ಯಕ್ಷ ಪವಾಝ್ ಕಟ್ಟತ್ತಾರು, ಇಬ್ರಾಹಿಂ ಹಾಜಿ ಫ್ಯಾಮಿಲಿ , ಉಮರ್ ಹಾಜಿ ಕಟ್ಟತ್ತಾರು, ಹುಸೈನ್ ಮುಸ್ಲಿಯಾರ್ ಮೂಸ ಕಂಞಿ ಅಂಚಿನಡ್ಕ, ಅಬ್ದುಲ್ ಕಾದರ್ ಚೆನ್ನಾರ್ ಅಬ್ಬಾಸ್ ಚೆನ್ನಾರ್ ಅಬ್ದುಲ್ ರಹಿಮಾನ್ ಸಖಾಫಿ ಅಮ್ಚಿನಡ್ಕ ಎಸ್ ವೈಎಸ್ ಮಾಡಾವು ಸರ್ಕಲ್ ಉಪಾಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್ ಅಂಚಿನಡ್ಕ, ಸಂಘಟನಾ ಕಾರ್ಯದರ್ಶಿ ನಾಸಿರ್ ಸಖಾಫಿ ಕಟ್ಟತ್ತಾರು ಅಬೂಬಕ್ಕರ್ ನಿಡ್ಯಾಣ , ಸತ್ತಾರ್ ಚೆನ್ನಾರ್ , ಕೆಸಿಎಫ್ ಸಂಘಟಕ ಅಮೀನ್ ಸಅದಿ ಝುಹ್ರಿ ಚೆನ್ನಾರ್, ಮಹಮ್ಮದ್ ಕುಂಡಡ್ಕ, ಅಬೂಬಕ್ಕರ್ ಸಖಾಫಿ ಕೊಳ್ತಿಗೆ , ಆಲೀ ಮುಸ್ಲಿಯಾರ್ ಎಂ, ಕೆ ಇಬ್ರಾಹಿಂ ಮುಸ್ಲಿಯಾರ್ ಪುತ್ತುಕುಂಞಿ ಹಾಜಿ, ಅಬ್ದುಲ್ ರಝಾಕ್ ಸಿ ಎಂ, ಸಿದ್ದೀಕ್ ಅಮ್ಚಿನಡ್ಕ, ಹಂಝ ಅರಿಕ್ಕಿಲ, ಸತ್ತಾರ್ ಅರಿಕ್ಕಿಲ, ಖಾದರ್ ಹಾಜಿ, ಅಬ್ದುಲ್ ಖಾದರ್ ಅಂಚಿನಡ್ಕ ಎಸ್ ವೈಎಸ್ ಕೋಶಾಧಿಕಾರಿ ಮುಹಮ್ಮದ್ ಕುಂಡಡ್ಕ, ಸತ್ತಾರ್ ಅರಿಕ್ಕಿಲ ಮೊದಲಾದವರು ಉಪಸ್ಥಿತರಿದ್ದರು.
ಸರ್ಕಲ್ ಸಂಘಟನಾ ಕಾರ್ಯದರ್ಶಿ ಹಂಝ ಲತೀಫೀ ಸ್ವಾಗತಿಸಿ ಸರ್ಕಲ್ ಪ್ರ ಕಾರ್ಯದರ್ಶಿ ಮಹಮ್ಮದ್ ಬಾಯಂಬಾಡಿ ವಂದಿಸಿದರು.
ರಾಷ್ಟ್ರ ಗೀತೆಯನ್ನು ಹಾಡುವುದರೊಂದಿಗೆ ಸೌಹಾರ್ದ ಸಂಗಮವನ್ನು ಸಮಾಪ್ತಿಗೊಳಿಸಲಾಯ್ತು.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ