ಮಂಗಳೂರು: ವ್ಯಸನ ಮುಕ್ತಿ ದಾರಿಗೆ ಅರಿವಿನ ಮೊಂಬತ್ತಿ ಎಂಬ ದ್ಯೇಯವಾಕ್ಯದೊಂದಿಗೆ ಅಲ್ ಸಲಾಮ ಖಿದ್ಮ ಫೌಂಡೇಶನ್ ವತಿಯಿಂದ ಇಸ್ಲಾಮಿಕ್ ಕೌನ್ಸಿಲಿಂಗ್ ಸೆಂಟರ್ ಆಗಸ್ಟ್ 9ರಂದು ಉದ್ಘಾಟನೆಗೊಳಿಸಲಾಯಿತು.
ಕಚೇರಿಯನ್ನು ಸಂಸ್ಥೆಯ ನಿರ್ದೇಶಕರಾದ ಎಸ್ ಎಂ ಆರ್ ರಶೀದ್ ಹಾಜಿ ಉದ್ಘಾಟಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಮಾತನಾಡಿ ಇದು ಕೇವಲ ವ್ಯಸನ ಮುಕ್ತಿ ಮಾತ್ರವಲ್ಲ, ಸ್ಕಿಲ್ ಡೆವಲಪ್ಮೆಂಟ್ ಕಾರ್ಯಕ್ರಮವು ನಡೆಯುವ ಮೂಲಕ ಸಮಾಜಕ್ಕೆ ಮಾದರಿಯಗಲಿವೆ.
ಒಳ್ಳೆಯ ಟೀಮ್ ಕಟ್ಟಿಕೊಂಡು ಮುನ್ನಡೆಯುವ ಈ ತಂಡಕ್ಕೆ ಎಲ್ಲಾ ರೀತಿಯ ಸಹಕಾರ ದೊರೆಯುತ್ತದೆ. ಮುಂದಕ್ಕೆ ಸರಕಾರದಿಂದ ಸ್ಥಳವನ್ನು ಖರೀದಿಸುವ ಬಗ್ಗೆ ಆಲೋಚಿಸಲಾಗುವುದೆಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಜಿ ಏ ಬಾವಾ ಸಭಾಧ್ಯಕ್ಷತೆ ವಹಿಸಿದ್ದರು.
ಕಾರ್ಯಾಧ್ಯಕ್ಷ ಶರೀಫ್ ಹಾಜಿ ವೖಟ್ ಸ್ಟೋನ್ 8 ತಿಂಗಳ ಯೋಜನೆಯನ್ನು ಮಂಡಿಸಿದರು.
ಸಂಸ್ಥೆಯ ನಿರ್ದೇಶಕರಾದ ಭಾರತ್ ಮುಸ್ತಫಾ ಗ್ರಂಥಾಲಯ ಉದ್ಘಾಟಿಸಿ ಸಲಹೆ ಸೂಚನೆ ನೀಡಿದರು. ಉದ್ಯಮಿ ಆಸೀಫ್ ಹೋಂ ಪ್ಲಸ್ ಹೆಲ್ತ್ ಸೆಂಟರ್ ಉದ್ಘಾಟನೆ ನಡೆಸಿದರೆ ಡಾ.ಯು ಟಿ ಇಫ್ತಿಖಾರ್ ಅಲೀ ಕೌನ್ಸಿಲ್ ರೂಂ ಉದ್ಘಾಟಿಸಿದರು. ನಂತರ ಪ್ರಾರ್ಥನಾ ಕೊಠಡಿಯನ್ನು ಅಝ್ಗರಲೀ ಡೆಕ್ಕನ್ ನೆರವೇರಿಸಿದರು.
ತಾಜುದ್ದೀನ್ ರಹ್ಮಾನಿ,ಹೈದರ್ ಪೆರ್ತಿಪ್ಪಾಡಿ, ಉಸ್ಮಾನ್ ಹಾಜಿ ಏರ್ ಇಂಡಿಯಾ, ಸ್ವಾಗತ್ ಹಾಜಿ, ಮುಹಮ್ಮದ್ ದೇರಳಕಟ್ಟೆ,ಇಕ್ಬಾಲ್ ಕೋಲ್ಪೆ, ಅಬೂಬಕರ್ ಬೆಳ್ಳಾರೆ ಅಬ್ದುಲ್ ಖಾದರ್ ಬೆಳ್ಳಾರೆ, ಝೖನುಲ್ ಆಭಿದ್, ಮುಝಫರ್ ಅಹ್ಮದ್, ಅಡ್ವಕೇಟ್ ಇಸಾಕ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಇಕ್ಬಾಲ್ ಬಾಳಿಲ ಸ್ವಾಗತಿಸಿ ಶೖಖ್ ಮುಹಮ್ಮದ್ ಇರ್ಫಾನಿ ಫೖಝಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ