ಮಂಗಳೂರು: ವ್ಯಸನ ಮುಕ್ತಿ ದಾರಿಗೆ ಅರಿವಿನ ಮೊಂಬತ್ತಿ ಎಂಬ ದ್ಯೇಯವಾಕ್ಯದೊಂದಿಗೆ ಅಲ್ ಸಲಾಮ ಖಿದ್ಮ ಫೌಂಡೇಶನ್ ವತಿಯಿಂದ ಇಸ್ಲಾಮಿಕ್ ಕೌನ್ಸಿಲಿಂಗ್ ಸೆಂಟರ್ ಆಗಸ್ಟ್ 9ರಂದು ಉದ್ಘಾಟನೆಗೊಳಿಸಲಾಯಿತು.
ಕಚೇರಿಯನ್ನು ಸಂಸ್ಥೆಯ ನಿರ್ದೇಶಕರಾದ ಎಸ್ ಎಂ ಆರ್ ರಶೀದ್ ಹಾಜಿ ಉದ್ಘಾಟಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಮಾತನಾಡಿ ಇದು ಕೇವಲ ವ್ಯಸನ ಮುಕ್ತಿ ಮಾತ್ರವಲ್ಲ, ಸ್ಕಿಲ್ ಡೆವಲಪ್ಮೆಂಟ್ ಕಾರ್ಯಕ್ರಮವು ನಡೆಯುವ ಮೂಲಕ ಸಮಾಜಕ್ಕೆ ಮಾದರಿಯಗಲಿವೆ.
ಒಳ್ಳೆಯ ಟೀಮ್ ಕಟ್ಟಿಕೊಂಡು ಮುನ್ನಡೆಯುವ ಈ ತಂಡಕ್ಕೆ ಎಲ್ಲಾ ರೀತಿಯ ಸಹಕಾರ ದೊರೆಯುತ್ತದೆ. ಮುಂದಕ್ಕೆ ಸರಕಾರದಿಂದ ಸ್ಥಳವನ್ನು ಖರೀದಿಸುವ ಬಗ್ಗೆ ಆಲೋಚಿಸಲಾಗುವುದೆಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಜಿ ಏ ಬಾವಾ ಸಭಾಧ್ಯಕ್ಷತೆ ವಹಿಸಿದ್ದರು.
ಕಾರ್ಯಾಧ್ಯಕ್ಷ ಶರೀಫ್ ಹಾಜಿ ವೖಟ್ ಸ್ಟೋನ್ 8 ತಿಂಗಳ ಯೋಜನೆಯನ್ನು ಮಂಡಿಸಿದರು.
ಸಂಸ್ಥೆಯ ನಿರ್ದೇಶಕರಾದ ಭಾರತ್ ಮುಸ್ತಫಾ ಗ್ರಂಥಾಲಯ ಉದ್ಘಾಟಿಸಿ ಸಲಹೆ ಸೂಚನೆ ನೀಡಿದರು. ಉದ್ಯಮಿ ಆಸೀಫ್ ಹೋಂ ಪ್ಲಸ್ ಹೆಲ್ತ್ ಸೆಂಟರ್ ಉದ್ಘಾಟನೆ ನಡೆಸಿದರೆ ಡಾ.ಯು ಟಿ ಇಫ್ತಿಖಾರ್ ಅಲೀ ಕೌನ್ಸಿಲ್ ರೂಂ ಉದ್ಘಾಟಿಸಿದರು. ನಂತರ ಪ್ರಾರ್ಥನಾ ಕೊಠಡಿಯನ್ನು ಅಝ್ಗರಲೀ ಡೆಕ್ಕನ್ ನೆರವೇರಿಸಿದರು.
ತಾಜುದ್ದೀನ್ ರಹ್ಮಾನಿ,ಹೈದರ್ ಪೆರ್ತಿಪ್ಪಾಡಿ, ಉಸ್ಮಾನ್ ಹಾಜಿ ಏರ್ ಇಂಡಿಯಾ, ಸ್ವಾಗತ್ ಹಾಜಿ, ಮುಹಮ್ಮದ್ ದೇರಳಕಟ್ಟೆ,ಇಕ್ಬಾಲ್ ಕೋಲ್ಪೆ, ಅಬೂಬಕರ್ ಬೆಳ್ಳಾರೆ ಅಬ್ದುಲ್ ಖಾದರ್ ಬೆಳ್ಳಾರೆ, ಝೖನುಲ್ ಆಭಿದ್, ಮುಝಫರ್ ಅಹ್ಮದ್, ಅಡ್ವಕೇಟ್ ಇಸಾಕ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಇಕ್ಬಾಲ್ ಬಾಳಿಲ ಸ್ವಾಗತಿಸಿ ಶೖಖ್ ಮುಹಮ್ಮದ್ ಇರ್ಫಾನಿ ಫೖಝಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ