ಕೋಝಿಕ್ಕೋಡ್ | ಇಸ್ರೇಲಿ ದೌರ್ಜನ್ಯಕ್ಕೆ ಬಲಿಯಾದ ಗಾಝಾ ನಿವಾಸಿಗಳ ಯೋಗಕ್ಷೇಮಕ್ಕಾಗಿ ಮತ್ತು ಶಾಂತಿ ಮರುಸ್ಥಾಪನೆಗಾಗಿ, ಸೋಮವಾರ ಸುನ್ನತ್ ಉಪವಾಸ ಆಚರಿಸಲು ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕರೆ ನೀಡಿದ್ದಾರೆ. ಸೋಮವಾರ ಮಗ್ರಿಬ್ ನಮಾಜ್ ನಂತರ, ಎಲ್ಲರೂ ತಮ್ಮ ಕುಟುಂಬ ಸದಸ್ಯರೊಂದಿಗೆ ಒಟ್ಟುಗೂಡಿ ವಿಶೇಷ ಪ್ರಾರ್ಥನೆ ನಡೆಸಬೇಕೆಂದು ಕಾಂತಪುರಂ ಉಸ್ತಾದರು ಫೇಸ್ಬುಕ್ ಪೋಸ್ಟ್ನಲ್ಲಿ ವಿನಂತಿಸಿದ್ದಾರೆ.
ಫೇಸ್ಬುಕ್ ಪೋಸ್ಟ್ನ ಪೂರ್ಣ ರೂಪ
الشيخ أبوبكر أحمد
ಗಾಝಾ ವಶಪಡಿಸಿಕೊಳ್ಳುವ ಯೋಜನೆಗೆ ಇಸ್ರೇಲ್ ಭದ್ರತಾ ಕ್ಯಾಬಿನೆಟ್ ಅನುಮತಿ ನೀಡಿದೆಯೆಂಬ ಸುದ್ದಿ ನೋಡಿದೆ. ಗಾಝಾ ದಲ್ಲಿ ವಂಶಹತ್ಯೆಯ ಯೋಜನೆ ಜಾರಿಗೆ ತಂದು, ಝಿಯೋನಿಸ್ಟ್ ಸೇನೆ ಈಗ ಮುನ್ನಡೆಯುತ್ತಿದೆ. ಪ್ರತಿ ಕ್ಷಣವೂ ಹಸಿವಿನ ಮರಣವೇದನೆಯಲ್ಲಿ ಕಿರುಚುವ ಗಾಝಾದ ಮಕ್ಕಳ ಚಿತ್ರಗಳು ಕಣ್ಮುಂದಿನಿಂದ ಮಾಯವಾಗುತ್ತಿಲ್ಲ.
ಎಲ್ಲಾ ಅಂತರರಾಷ್ಟ್ರೀಯ ಮಾನದಂಡಗಳನ್ನು, ಮಾನವೀಯ ಮೌಲ್ಯಗಳನ್ನು ಹಾಗೂ ಒಪ್ಪಂದಗಳನ್ನು ಉಲ್ಲಂಘಿಸಿ ಕಳೆದ 22 ತಿಂಗಳಿನಿಂದ ಇಸ್ರೇಲ್ ಗಾಝಾದಲ್ಲಿ ಮುಂದುವರಿಸ್ಸುತ್ತಿರುವ ಹತ್ಯಾಕಾಂಡ ಮತ್ತು ನಿರ್ಬಂಧದಿಂದ ಇಂದಿನವರೆಗೆ 65,000 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಅಂಕಿಅಂಶಗಳು ಹೇಳುತ್ತವೆ. ಮಹಿಳೆಯರು ಮತ್ತು ಮಕ್ಕಳು ಸೇರಿ ಈ ತನಕ 193 ಮಂದಿ ಹಸಿವಿನಿಂದ ಮೃತಪಟ್ಟಿದ್ದಾರೆ.
ಯಾವುದೇ ಕಾರಣಕ್ಕೂ ಸಮರ್ಥಿಸಲಾಗದ ವಂಶಹತ್ಯೆಯೇ ಗಾಝಾ ದಲ್ಲಿ ನಡೆಯುತ್ತಿದೆ. ಎಲ್ಲವನ್ನೂ ಕಳೆದುಕೊಂಡು ಶಿಬಿರಗಳಲ್ಲಿ ವಾಸಿಸುವವರ ಮೇಲೆ, ಹಸಿವಿನಿಂದ ಬಳಲಿ ಸ್ವಯಂ ಸೇವಾ ಸಂಸ್ಥೆಗಳು ಹಂಚುವ ಅತ್ಯಲ್ಪ ಆಹಾರದ ಪೊಟ್ಟಣಕ್ಕಾಗಿ ಕಾಯುತ್ತಾ ಸರದಿ ನಿಂತವರ ಮೇಲೆಯೂ ಗುಂಡು ಹಾರಿಸುವ ಇಸ್ರೇಲ್ ಆಕ್ರಮಣಕಾರರ ಕ್ರೂರ ಮನಸ್ಥಿತಿ ಲೋಕಕ್ಕೆ ಮನವರಿಕೆ ಮಾಡುತ್ತಿದೆ.
ನಮಗೆ ಲಭಿಸುವ ಚಿತ್ರಗಳು ಮತ್ತು ಸುದ್ದಿಗಳಿಗಿಂತಲೂ ಭೀಕರವಾಗಿದೆ ಅಲ್ಲಿ ನಡೆಯುತ್ತಿರುವುದು. ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಜನಸಂಖ್ಯೆಯ 81% ಜನರು ಆಹಾರ ಸೇವನೆಯಲ್ಲಿ ಅತ್ಯಂತ ಕೆಳಮಟ್ಟದಲ್ಲಿದ್ದಾರೆ. ಹತ್ತರಲ್ಲಿ ಒಂಬತ್ತು ಕುಟುಂಬಗಳು ಒಂದು ಹೊತ್ತಿನ ಊಟ ಸಿಗಲು ದಿನವಿಡೀ ಹರಸಾಹಸ ಪಡುತ್ತಿವೆ. ಹೃದಯವೇ ಒಡೆದು ಚೂರಾಗುವಂತಹ ಗಾಯಗಳ ದೇಶವಾಗಿ ಅದು ಮಾರ್ಪಟ್ಟಿದೆ. ತಮ್ಮ ಜನ್ಮಭೂಮಿಯಲ್ಲೇ ನಿರಾಶ್ರಿತರಾಗಿ ಹೊಟ್ಟೆ ಗೆ ಒಂದು ತುತ್ತು ಆಹಾರವಿಲ್ಲದೆ ದಯನೀಯವಾಗಿ ಅವರು ನಮ್ಮ ಕಡೆ ನೋಡುತ್ತಿದ್ದಾರೆ.
ಮಾನವೀಯ ದೃಷ್ಟಿಯಿಂದಲೂ, ಒಬ್ಬ ವಿಶ್ವಾಸಿಯಾಗಿ ನಮಗೆ ಕೆಲವು ಕರ್ತವ್ಯಗಳಿವೆ. ಅವರು ನಮ್ಮ ಸಹೋದರರು. ಅವರನ್ನು ನೆನೆಯುವಾಗ ಕಣ್ಣೀರು ತುಂಬುತ್ತದೆ. ಅವರಿಗಾಗಿ ನಾವು ಪ್ರತಿಯೊಬ್ಬರೂ ಇನ್ನೂ ಹೆಚ್ಚು ಹೃದಯ ತುಂಬಿ ಕಣ್ಣೀರು ಸುರಿಸಿ ರಬ್ಬಿನೊಂದಿಗೆ ಪ್ರಾರ್ಥಿಸಬೇಕಾಗಿದೆ.
ಗಾಝಾ ನಿವಾಸಿಗಳ ಯೋಗಕ್ಷೇಮಕ್ಕಾಗಿ ಮತ್ತು ಶಾಂತಿ ಮರುಸ್ಥಾಪನೆಗಾಗಿ, ಬರುವ ಸೋಮವಾರ (11-08-25) ಮಗ್ರಿಬ್ ನಮಾಝ್ ನಂತರ ನಿಮ್ಮ ಕುಟುಂಬ ಸದಸ್ಯರೊಂದಿಗೆ ಸೇರಿ ವಿಶೇಷ ಪ್ರಾರ್ಥನೆ ನಡೆಸಬೇಕೆಂದು ಎಲ್ಲರೊಂದಿಗೂ ವಿನಂತಿಸುತ್ತೇನೆ. ಪ್ರಾರ್ಥನೆಗೆ ಮುನ್ನ ಸತ್ಕಾರ್ಯಗಳನ್ನು ಮಾಡುವುದೇ ಅದರ ಸ್ವೀಕಾರಾರ್ಹತೆಯ ಮಾನದಂಡವಾಗಿರುವುದರಿಂದ ಸೋಮವಾರ ದಿವಸ ಸುನ್ನತ್ ಉಪವಾಸ ಪಾಲಿಸುವಂತೆಯೂ ನೆನಪಿಸುತ್ತೇನೆ.
ಪ್ಯಾಲಸ್ತೀನ್ ಜನತೆಗೆ ಶೀಘ್ರವೇ ಶಾಂತಿಯ ಜೀವನ ದೊರಕಲಿ.
ಶೈಖ್ ಅಬೂಬಕರ್ ಅಹ್ಮದ್ ಅವರ ಫೇಸ್ಬುಕ್ ಪುಟದಿಂದ
Date : 09/08/2025
https://www.facebook.com/share/p/19LE7yPw7P/
















ಇನ್ನಷ್ಟು ಸುದ್ದಿಗಳು
ಶರಫುಲ್ ಉಲಮಾ ಉಸ್ತಾದ್ 7ನೇ ವಾರ್ಷಿಕ ಅನುಸ್ಮರಣೆ – ಮೇ 13, 14 ರಂದು ಪ್ರಾರ್ಥನಾ ಸಂಗಮ
“ನಿಮ್ಮವರೇ ಹೀಗೆ” – ಕೆಎಸ್ಆರ್ಟಿಸಿ ನಿರ್ವಾಹಕನ ನಡತೆಗೆ ಶಿಕ್ಷಕಿಯ ಮನದ ಅಳಲು
ಸಲಪಿ ಸಿದ್ಧಾಂತದ ಮುಖವಾಡ ಕಳಚಿದ ಕರಾವಳಿ: ಸೈದ್ಧಾಂತಿಕ ಸೋಲನ್ನು ಮುಚ್ಚಿಡಲು ದೈಹಿಕ ಹಲ್ಲೆಗೆ ಮುಂದಾದರೇ ಸಲಪಿಗಳು?
ತೈಲ ಬಿಕ್ಕಟ್ಟು: ‘ವರ್ಕ್ ಫ್ರಮ್ ಹೋಮ್’ ಆರಂಭಿಸಿ; ಚಿನ್ನ ಖರೀದಿಸಬೇಡಿ – ಪ್ರಧಾನಿ ಮೋದಿ ಮನವಿ
ತಮಿಳುನಾಡಿನಲ್ಲಿ ಹೊಸ ಇತಿಹಾಸ: ಮುಖ್ಯಮಂತ್ರಿಯಾಗಿ ‘ದಳಪತಿ’ ವಿಜಯ್ ಅಧಿಕಾರ ಸ್ವೀಕಾರ
ಡಿಕೆಎಸ್ಸಿ ರಿಯಾದ್ ಝೋನಲ್ ಸಮಿತಿಗೆ ನೂತನ ಸಾರಥ್ಯ- ಅಧ್ಯಕ್ಷರಾಗಿ ದಾವೂದ್ ಹಕೀಂ ಕಂದಕ್ ಆಯ್ಕೆ
ಎಸ್ಸೆಸ್ಸೆಫ್ 14ನೇ ಆವೃತ್ತಿಯ ಸಾಹಿತ್ಯೋತ್ಸವ: ರಾಜ್ಯ ನಿರ್ವಹಣಾ ಸಮಿತಿ ಅಸ್ತಿತ್ವಕ್ಕೆ
ವಿಜಯ್ ಮುಖ್ಯಮಂತ್ರಿ; ನಾಳೆ ಪ್ರಮಾಣವಚನ ಸ್ವೀಕಾರ- 120 ಶಾಸಕರ ಬೆಂಬಲ ಖಚಿತಪಡಿಸಿದ TVK
ಹಂತಾವೈರಸ್ ಭೀತಿ; ಹೆಚ್ಚಿನ ಪ್ರಕರಣಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ- ಪ್ರವಾಸಿ ಹಡಗುಗಳ ಮೇಲೆ ತೀವ್ರ ನಿಗಾ
ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ- ಕಲ್ಲಂಗಡಿ ಹಣ್ಣಿನಲ್ಲಿ ಇಲಿ ವಿಷ ಹೇಗೆ ಬಂತು?