ಯೆಮೆನ್: ಯೆಮೆನ್ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಮಲಯಾಳಿ ನರ್ಸ್ ನಿಮಿಷಪ್ರಿಯ ಅವರ ಬಿಡುಗಡೆ ಪರಿಶ್ರಮಗಳಿಗೆ ಸಂಘಟಿತವಲ್ಲದ ಅಭಿಯಾನಗಳು ಮತ್ತು ವೀಡಿಯೊಗಳು ಅಡ್ಡಿಯಾಗಿವೆ. ಇತ್ತೀಚೆಗೆ ಪ್ರಚಾರಗೊಂಡ ಇವಾಂಚಲಿಸ್ಟ್ ಡಾ. ಕೆ ಎ ಪೌಲ್ ಅವರ ವೀಡಿಯೊದಲ್ಲಿ ನಿಮಿಷಪ್ರಿಯಾ ಅವರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇದು ಹತ್ಯೆಯಾದ ತಲಾಲ್ ಕುಟುಂಬವನ್ನು ಕೆರಳಿಸಿದೆ. ತಲಾಲ್ ಅವರ ಸಹೋದರ ಈ ಹೇಳಿಕೆಯನ್ನು ನಿರಾಕರಿಸಿದ್ದಾರೆ.
ಇವಾಂಚಲಿಸ್ಟ್ ಮತ್ತು ಗ್ಲೋಬಲ್ ಪೀಸ್ ಇನ್ಶ್ಯೇಟಿವ್ ಸಂಘಟನೆ ಸಂಸ್ಥಾಪಕರಾದ ಡಾ. ಕೆ ಎ ಪಾಲ್, ನಿಮಿಷಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ ಮತ್ತು ಅವರು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ ಎಂದು ಹೇಳುವ ವೀಡಿಯೊವನ್ನು ಬಿಡುಗಡೆ ಮಾಡಿದ್ದರು. ಇದಕ್ಕೆ ಯಾವುದೇ ಪೋಷಕ ದಾಖಲೆಗಳು ಅಥವಾ ಪುರಾವೆಗಳಿಲ್ಲ. ಈ ವೀಡಿಯೋವನ್ನು ಅವಲಂಬಿಸಿ ಕೆಲವು ಮಾಧ್ಯಮಗಳು ಪ್ರಚಾರಗಿಟ್ಟಿಸುವ ಉದ್ದೇಶದಿಂದ ನಿಮಿಷಪ್ರಿಯ ಬಿಡುಗಡೆ ಎಂದು ವರದಿ ಮಾಡಿತ್ತು.
“ಇದೆಲ್ಲವೂ ನಕಲಿ ಸುದ್ದಿ ಮತ್ತು ಶಿಕ್ಷೆಯನ್ನು ಜಾರಿಗೆ ತರಲು ನಾವು ಕಾಯುತ್ತಿದ್ದೇವೆ” ಎಂದು ತಲಾಲ್ ಅವರ ಸಹೋದರ ಅಬ್ದುಲ್ ಫತ್ತಾಹ್ ಮೆಹ್ದಿ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಉಸ್ತಾದ್ ಅವರ ಕೋರಿಕೆಯ ಮೇರೆಗೆ ಯೆಮೆನ್ನಲ್ಲಿನ ಸೂಫೀ ವಿದ್ವಾಂಸರಾದ ಶೈಖ್ ಹಬೀಬ್ ಉಮರ್ ಬಿನ್ ಹಫೀಝ್ ಅವರ ಮಧ್ಯಸ್ಥಿಕೆಯಿಂದಾಗಿ ಕಳೆದ 16 ರಂದು ಜಾರಿಯಾಗಬೇಕಿದ್ದ ನಿಮಿಷಪ್ರಿಯ ಅವರ ಗಲ್ಲುಶಿಕ್ಷೆಯನ್ನು ಮುಂದೂಡುವಲ್ಲಿ ಯಶಸ್ವಿಯಾಗಿದ್ದರು.
ಗಲ್ಲುಶಿಕ್ಷೆಗೆ ಬದಲಾಗಿ ‘ದಿಯಾ’ಧನವನ್ನು ಸ್ವೀಕರಿಸಿ, ಹಂತಕರಿಗೆ ಕ್ಷಮಾದಾನ ನೀಡುವ ಇಸ್ಲಾಮಿಕ್ ಶರೀಅತ್ತಿನಲ್ಲಿರುವ ಮಾನವೀಯ ನಿಲುವಿನ ಬಗ್ಗೆ ಮೃತ ತಲಾಲ್ ಅವರ ಕುಟುಂಬಕ್ಕೆ ಮನವರಿಕೆ ಮಾಡಿಕೊಡಲು ಯೆಮೆನ್ನ ಸೂಫೀ ವಿದ್ವಾಂಸರ ನೇತೃತ್ವದ ನಿಯೋಗವು ಕಠಿಣ ಶ್ರಮವನ್ನು ಮುಂದುವರಿಸಿದೆ.
ಆದರೆ, ಕಾಂತಪುರಂ ಉಸ್ತಾದರ ಮಧ್ಯಪ್ರವೇಶವನ್ನು ಸಹಿಸದ ಕೆಲವು ಕೇರಳೀಯ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಲಾಲ್ ಕುಟುಂಬವನ್ನು ಮತ್ತಷ್ಟು ಕೆರಳಿಸುವ ಪೋಸ್ಟ್ಗಳನ್ನು ಪ್ರಚಾರಪಡಿಸಿ, ಬಿಡುಗಡೆ ಅಭಿಯಾನಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಈ ಕಿಡಿಗೇಡಿಗಳ ಪೈಕಿ ಕಳ್ಳ ತ್ವರೀಕತ್ ಮತ್ತು ಸಲಫಿ ವಿಭಾಗ ಒಗ್ಗಟ್ಟಾಗಿದೆ. ಇದರಿಂದಾಗಿ ಸಂಧಾನ ಪ್ರಕ್ರಿಯೆಗೆ ಹಿನ್ನಡೆಯಾಗಿದೆ ಎಂದು ತಿಳಿದುಬಂದಿದೆ. ಇದು ಮುಂದಿನ ಚರ್ಚೆಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದು ಕಳವಳಕಾರಿಯಾಗಿದೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಇರಾನ್ ಮೇಲೆ ಮತ್ತೆ ಯುಎಸ್ ದಾಳಿ; ಬಂದರ್ ಅಬ್ಬಾಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಬಾಂಬ್ ದಾಳಿ