ಮಂಗಳೂರು : ಎಸ್.ವೈ.ಎಸ್ ರಾಜ್ಯ ಸಮಿತಿಯು ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಘೋಷಣೆಯೊಂದಿಗೆ ಜುಲೈ 14,15,16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ನಡೆಯುವ ಸೌಹಾರ್ದ ಸಂಚಾರವು ದ.ಕ ವೆಸ್ಟ್ ಜಿಲ್ಲೆಯಲ್ಲಿ ಜುಲೈ 15 ಮಂಗಳವಾರ ನಡೆಯಲಿದೆ.
ಬೆಳಿಗ್ಗೆ 7:30 ಕ್ಕೆ ಕನ್ನಂಗಾರ್ ದರ್ಗಾ ಝಿಯಾರತ್ ನೊಂದಿಗೆ ಆರಂಭವಾಗುವ ಎರಡನೇ ದಿನದ ಸೌಹಾರ್ದ ಸಂಚಾರವು ಬೆಳಿಗ್ಗೆ 8:00 ಗಂಟೆಗೆ ಬಪ್ಪನಾಡುನಿಂದ ಸೌಹಾರ್ದ ಕಾಲ್ನಡಿಗೆ ಜಾಥಾವು ಮುಲ್ಲಿ ತನಕ ಬಂದು,ಮುಲ್ಕಿಯಲ್ಲಿ ಸಂದೇಶ ಭಾಷಣ ನಡೆಯಲಿದೆ.
ಬೆಳಿಗ್ಗೆ 9:00 ಗಂಟೆಗೆ ಗೋವಿಂದದಾಸ್ ಕಾಲೇಜು ಕಡೆಯಿಂದ ಸುರತ್ಕಲ್ ಜಂಕ್ಷನ್ ತನಕ ಸೌಹಾರ್ದ ಕಾಲ್ನಡಿಗೆ ಜಾಥಾವು ಬಂದು,ಸುರತ್ಕಲ್ ಜಂಕ್ಷನ್ ನಲ್ಲಿ ಸಂದೇಶ ಭಾಷಣ ನಡೆಯಲಿದೆ.
ಬೆಳಿಗ್ಗೆ 11:00 ಗಂಟೆಗೆ ಬಾವುಟಗುಡ್ಡೆಯಿಂದ ಕ್ಲಾಕ್ ಟವರ್ ತನಕ ಸೌಹಾರ್ದ ಕಾಲ್ನಡಿಗೆ ಜಾಥಾವು ಬಂದು, ಕ್ಲಾಕ್ ಟವರ್ ನಲ್ಲಿ ಸಂದೇಶ ಭಾಷಣ ನಡೆಯಲಿದೆ.
ಮದ್ಯಾಹ್ನ 2:00 ಗಂಟೆಗೆ ಅರ್ಕುಳದಿಂದ ಪರಂಗಿಪೇಟೆ ತನಕ ಸೌಹಾರ್ದ ಸಂಚಾರ ಜಾಥಾವು ಬಂದು, ಪರಂಗಿಪೇಟೆ ಜಂಕ್ಷನ್ ನಲ್ಲಿ ಸಂದೇಶ ಬಾಷಣ ನಡೆಯಲಿದೆ.
ಸಂಜೆ 4:00 ಗಂಟೆಗೆ ಕೈಕಂಬದಿಂದ ಬಿಸಿರೋಡ್ ತಾಲೂಕು ಕಛೇರಿ ತನಕ ಸೌಹಾರ್ದ ಕಾಲ್ನಡಿಗೆ ಜಾಥಾವು ಬಂದು, ತಾಲೂಕು ಕಛೇರಿ ಮುಂಭಾಗದಲ್ಲಿ ಸಂದೇಶ ಭಾಷಣ ನಡೆಯಲಿದೆ.
ಸಂಜೆ 5:00 ಗಂಟೆಗೆ ಕಲ್ಲಡ್ಕ ಕೆಸಿರೋಡ್ ನಿಂದ ಕಲ್ಲಡ್ಕ ಜಂಕ್ಷನ್ ತನಕ ಸೌಹಾರ್ದ ಕಾಲ್ನಡಿಗೆ ಜಾಥಾವು ಬಂದು ಕಲ್ಲಡ್ಕ ಜಂಕ್ಷನ್ ನಲ್ಲಿ ಸಂದೇಶ ಭಾಷಣ ನಡೆಯಲಿದೆ.
ಈ ಸೌಹಾರ್ದ ಸಂಚಾರದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು,ಕ್ರೈಸ್ತ ಧರ್ಮ ಗುರುಗಳು,ಮುಸ್ಲಿಂ ಧಾರ್ಮಿಕ ನಾಯಕರು,ಹಿಂದು,ಮುಸ್ಲಿಂ,ಕ್ರೈಸ್ತ ಬಾಂಧವರು,ಸಾಮಾಜಿಕ,ಶೈಕ್ಷಣಿಕ ನಾಯಕರು,ಸೌಹಾರ್ದತೆಯ ಸಂದೇಶವನ್ನು ಸಾರುತ್ತಾ ಸ್ನೇಹದ,ಪ್ರೀತಿಯ,ಸಹಬಾಳ್ವೆಯ ದಿಟ್ಟ ಹೆಜ್ಜೆಗಳನ್ನು ಇಟ್ಟು ಮಾನವೀಯತೆಯ ಸಂದೇಶವನ್ನು ಮನುಕುಲಕ್ಕೆ ನೀಡಲಿದ್ದಾರೆ ಎಂದು ಎಸ್.ವೈ.ಎಸ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ