janadhvani

Kannada Online News Paper

ಭಾರತೀಯ ಸೈನ್ಯದ ಪರಾಕ್ರಮ, ಭಯೋತ್ಪಾದನೆಯನ್ನು ಸದ್ದಡಗಿಸಲಿದೆ -ಅಲಿ ತುರ್ಕಳಿಕೆ

'ಆಪರೇಷನ್ ಸಿಂಧೂರ' ಯಶಸ್ವಿ ದಾಳಿಯನ್ನು ಶ್ಲಾಘಿಸಿದ ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ.

ಪೆಹಲ್ಗಾಮ್ ಆಕ್ರಮಕ್ಕೆ ಪ್ರತೀಕಾರವಾಗಿ ಭಾರತದ ಸೈನ್ಯವು ತೋರಿಸಿದ ದಿಟ್ಟತನವು ಭಯೋತ್ಪಾದನೆ ವಿರುದ್ದವಾಗಿ ಭಾರತದ ಶಕ್ತಿ ಪ್ರದರ್ಶನ ಮತ್ತು ದಿಟ್ಟ ಪ್ರತಿಕ್ರಿಯೆಯಾಗಿದೆಯೆಂದು ಎಸ್ ಎಸ್ ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಲಿ ತುರ್ಕಳಿಕೆ ಸಂತೋಷ ಹಂಚಿಕೊಂಡರು.

ದೇಶದ ಸಮಗ್ರತೆ, ಒಗ್ಗಟ್ಟು , ಸಾಮರ್ಥ್ಯವು ಭಯೋತ್ಪಾದಕರ ನಿದ್ದೆಗೆಡಿಸಲಿದೆ. ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ಸರ್ವ ನಾಶ ಮಾಡಿ ಜಾಗತಿಕವಾಗಿ ಭಯೋತ್ಪಾದನೆ ವಿರುದ್ಧ ಸ್ಪಷ್ಟ ಸಂದೇಶವನ್ನು ಭಾರತ ಈ ಮೂಲಕ ನೀಡುವಂತಾಗಲಿ ಎಂಬ ಹಾರೈಕೆಗಳನ್ನು ಇದೇ ಸಂದರ್ಭ ವ್ಯಕ್ತಪಡಿಸಿದರು.