ಪೆಹಲ್ಗಾಮ್ ಆಕ್ರಮಕ್ಕೆ ಪ್ರತೀಕಾರವಾಗಿ ಭಾರತದ ಸೈನ್ಯವು ತೋರಿಸಿದ ದಿಟ್ಟತನವು ಭಯೋತ್ಪಾದನೆ ವಿರುದ್ದವಾಗಿ ಭಾರತದ ಶಕ್ತಿ ಪ್ರದರ್ಶನ ಮತ್ತು ದಿಟ್ಟ ಪ್ರತಿಕ್ರಿಯೆಯಾಗಿದೆಯೆಂದು ಎಸ್ ಎಸ್ ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಲಿ ತುರ್ಕಳಿಕೆ ಸಂತೋಷ ಹಂಚಿಕೊಂಡರು.
ದೇಶದ ಸಮಗ್ರತೆ, ಒಗ್ಗಟ್ಟು , ಸಾಮರ್ಥ್ಯವು ಭಯೋತ್ಪಾದಕರ ನಿದ್ದೆಗೆಡಿಸಲಿದೆ. ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ಸರ್ವ ನಾಶ ಮಾಡಿ ಜಾಗತಿಕವಾಗಿ ಭಯೋತ್ಪಾದನೆ ವಿರುದ್ಧ ಸ್ಪಷ್ಟ ಸಂದೇಶವನ್ನು ಭಾರತ ಈ ಮೂಲಕ ನೀಡುವಂತಾಗಲಿ ಎಂಬ ಹಾರೈಕೆಗಳನ್ನು ಇದೇ ಸಂದರ್ಭ ವ್ಯಕ್ತಪಡಿಸಿದರು.