janadhvani

Kannada Online News Paper

ಉಳ್ಳಾಲದ ಮಹಿಳೆ ಜಿದ್ದಾದಲ್ಲಿ ನಿಧನ- ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್

ಕೆಸಿಎಫ್ ಹಿತೈಷಿ ಫಾರೂಖ್ ಉಳ್ಳಾಲ (AL-HAQEEQ TRADERS) ಇವರ ಪತ್ನಿ ಖಮರುನ್ನಿಸಾ ಉಳ್ಳಾಲ ರವರು ದಿನಾಂಕ 25/03/2025 ರಂದು ಜಿದ್ದಾದಲ್ಲಿ ಮರಣಹೊಂದಿದ್ದು ಅವರ ಅಂತ್ಯಕ್ರಿಯೆಯನ್ನು ಜಿದ್ದಾದ ಬಲದ್ ನಲ್ಲಿರುವ ಅಲ್ ಅಸದ್ ಖಬರ್ ಸ್ಥಾನದಲ್ಲಿ ಕೆಸಿಎಫ್ ಶರಫಿಯ್ಯಾ ಸೆಕ್ಟರ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು.

ಅಂತ್ಯಕ್ರಿಯೆಗೆ ಬೇಕಾದ ಹಲವಾರು ಕಾನೂನಾತ್ಮಕ ದಾಖಲೆ ಪತ್ರಗಳು ಅದರಂತೆ ಭಾರತೀಯ ರಾಯಭಾರಿ ಕಚೇರಿ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ ಸೇರಿದಂತೆ ವಿವಿಧ ಕಡೆಗಳಿಂದ ಬೇಕಾದ ಕಡತಗಳನ್ನು ಸರಿಪಡಿಸಲು ಸೌದಿ ಅರೇಬಿಯಾದ ಕೆಸಿಎಫ್ ಶರಫಿಯ್ಯಾ ಸೆಕ್ಟರ್ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಫಾರೂಖ್ ಬಂಟ್ವಾಳ ಮತ್ತು ನಾಸಿರ್ ಹೆಚ್ಕಲ್, ಮುಹಮ್ಮದ್ ಹಾಜಿ ಕುಕ್ಕಾಜೆ ಸಹಿತ ಅನೇಕ ನಾಯಕರು ಸಹಕರಿಸಿದರು.

ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ಮಸೀದಿಯಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿ ಅಲ್ ಅಸದ್ ಖಬರ್ ಸ್ಥಾನದಲ್ಲಿ ದಫನ ಕಾರ್ಯ ನೆರವೇರಿಸಲಾಯಿತು.ಈ ಸಂದರ್ಭಲ್ಲಿ ಮೃತರ ಕುಟುಂಬಸ್ಥರು ಹಾಗೂ ಹಲವಾರು ಕಾರ್ಯಕರ್ತರು, ಸ್ಥಳೀಯರು ದಫನ ಕಾರ್ಯದಲ್ಲಿ ಸಹಕರಿಸಿದರು. ಮೃತರು ಒಂದು ಹೆಣ್ಣು, ಒಂದು ಗಂಡು, ಪತಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.