ಮಂಗಳೂರಿನ ಕಂಕನಾಡಿ ಒಳ ರಸ್ತೆಯಲ್ಲಿರುವ ಮಸೀದಿಗೆ ತಾಗಿಕೊಂಡಿರುವ ಬಡಾವಣೆಯ ಸಾರ್ವಜನಿಕ ರಸ್ತೆಯ ಒಂದು ಭಾಗದಲ್ಲಿ ನಮಾಜ್ ನಿರ್ವಹಿಸಿದರು ಎನ್ನುವ ಕಾರಣಕ್ಕೆ ಸುಮಟೊ ಕೇಸು ದಾಖಲಿಸಿರುವುದು ಖಂಡನೀಯ.
ಕೇವಲ ಮೂರು ನಿಮಿಷದ ನಮಾಝಿನಿಂದ ಸಾರ್ವಜನಿಕರಿಗೆ ಯಾವುದೇ ತೊದರೆಯಾಗಿರುವುದಿಲ್ಲ. ಆದರೂ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸು ಹಾಕಿರುವುದು ಸುಮಟೊ ಕೇಸಿನ ದುರ್ಬಳಕೆ ಎತ್ತಿ ತೋರಿಸುತ್ತಿವೆ.
ಈ ಕುರಿತು ಸರಕಾರವು ತಕ್ಷಣ ಸ್ಪಂದಿಸಿ ನ್ಯಾಯ ಒದಗಿಸುವಂತೆ SKSSF ರಾಜ್ಯ ಉಪಾಧ್ಯಕ್ಷ ಇಕ್ಬಾಲ್ ಬಾಳಿಲ ಮುಖ್ಯ ಮಂತ್ರಿಗೆ ಈ ಮೇಲ್ ಮೂಲಕ ಪತ್ರ ಬರೆದಿದ್ದಾರೆ.
ರಸ್ತೆಯಲ್ಲಿ ನಮಾಜ್ ನಿರ್ವಹಿಸುವುದಕ್ಕೆ ನಾವು ಪ್ರೋತ್ಸಾಹಿಸುವುದಿಲ್ಲ. ಆದರೆ ಕೇವಲ ಮೂರು ನಿಮಿಷದ ಪ್ರಾರ್ಥನೆಗೆ ಕೇಸು ದಾಖಲಿಸಿರುವ ವರದಿ ಕೇಳಿ ಗಾಬರಿಗೊಂಡಿದ್ದೇವೆ.
ಮಂಗಳೂರಿನ ನಗರದ ಪ್ರಮುಖ ರಸ್ತೆ, ಟ್ರಾಫಿಕ್ ಜಾಮ್ ಎಂದೆಲ್ಲಾ ಕೆಲವು ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ನೀಡಿ ರಾಜ್ಯದ ಜನರನ್ನು ಕೆರಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಕೇಸು ದಾಖಲೆ ಗೊಂಡಿರುವುದೇ ಇದಕ್ಕೆ ಪ್ರಮುಖ ಕಾರಣ.
ಈ ಮಸೀದಿ ಇರುವುದು ಕಂಕನಾಡಿಯಿಂದ 100 ಮೀಟರ್ ಒಳಗಿನ ಬಡಾವಣೆಯಲ್ಲಿ.
ಅದರಲ್ಲೂ ಇಲ್ಲಿ ವಾಸವಾಗಿರುವುದು ಹೆಚ್ಚು ಮುಸ್ಲಿಮರೇ ಆಗಿರುತ್ತಾರೆ.
ಈ ಒಳ ರಸ್ತೆಯಲ್ಲಿ ಕೇವಲ 3ರಿಂದ 5 ನಿಮಿಷ ಮಾತ್ರ ನಮಾಜ್ ನಿರ್ವಹಿಸಲು ಉಪಯೋಗಿಸಿದ್ದಾರೆ. ಅದರಲ್ಲಿ ರಸ್ತೆಯ ಅರ್ಧ ಭಾಗ ತೆರೆದುಕೊಂಡಿತ್ತು.
ಯಾವುದೇ ಟ್ರಾಫಿಕ್ ಸಮಸ್ಯೆ ಉದ್ಭವಿಸಿಲ್ಲ.
ಮಂಗಳೂರಿನ ಪ್ರಮುಖ ರಸ್ತೆಯಲ್ಲೇ ಧಾರ್ಮಿಕ ಕಾರ್ಯ ನಡೆಸುವ ಹಲವು ಕಾರ್ಯಕ್ರಮಗಳಿವೆ.
ಕೇಸು ದಾಖಲಿಸುವುದಾದರೆ ಎಲ್ಲವನ್ನು ಪರಿಗಣಿಸಲಿ.
ತಕ್ಷಣ ಕೇಸನ್ನು ಹಿಂಪಡೆಯುವ ಮೂಲಕ ದ್ವಿಮುಖ ದೋರಣೆಗೆ ಕಡಿವಾಣ ಬೀಳಲಿ ಎಂದು ಪತ್ರದಲ್ಲಿ ತಿಳಿಸಿರುತ್ತಾರೆ.
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ