ಮಂಗಳೂರಿನ ಕಂಕನಾಡಿ ಒಳ ರಸ್ತೆಯಲ್ಲಿರುವ ಮಸೀದಿಗೆ ತಾಗಿಕೊಂಡಿರುವ ಬಡಾವಣೆಯ ಸಾರ್ವಜನಿಕ ರಸ್ತೆಯ ಒಂದು ಭಾಗದಲ್ಲಿ ನಮಾಜ್ ನಿರ್ವಹಿಸಿದರು ಎನ್ನುವ ಕಾರಣಕ್ಕೆ ಸುಮಟೊ ಕೇಸು ದಾಖಲಿಸಿರುವುದು ಖಂಡನೀಯ.
ಕೇವಲ ಮೂರು ನಿಮಿಷದ ನಮಾಝಿನಿಂದ ಸಾರ್ವಜನಿಕರಿಗೆ ಯಾವುದೇ ತೊದರೆಯಾಗಿರುವುದಿಲ್ಲ. ಆದರೂ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸು ಹಾಕಿರುವುದು ಸುಮಟೊ ಕೇಸಿನ ದುರ್ಬಳಕೆ ಎತ್ತಿ ತೋರಿಸುತ್ತಿವೆ.
ಈ ಕುರಿತು ಸರಕಾರವು ತಕ್ಷಣ ಸ್ಪಂದಿಸಿ ನ್ಯಾಯ ಒದಗಿಸುವಂತೆ SKSSF ರಾಜ್ಯ ಉಪಾಧ್ಯಕ್ಷ ಇಕ್ಬಾಲ್ ಬಾಳಿಲ ಮುಖ್ಯ ಮಂತ್ರಿಗೆ ಈ ಮೇಲ್ ಮೂಲಕ ಪತ್ರ ಬರೆದಿದ್ದಾರೆ.
ರಸ್ತೆಯಲ್ಲಿ ನಮಾಜ್ ನಿರ್ವಹಿಸುವುದಕ್ಕೆ ನಾವು ಪ್ರೋತ್ಸಾಹಿಸುವುದಿಲ್ಲ. ಆದರೆ ಕೇವಲ ಮೂರು ನಿಮಿಷದ ಪ್ರಾರ್ಥನೆಗೆ ಕೇಸು ದಾಖಲಿಸಿರುವ ವರದಿ ಕೇಳಿ ಗಾಬರಿಗೊಂಡಿದ್ದೇವೆ.
ಮಂಗಳೂರಿನ ನಗರದ ಪ್ರಮುಖ ರಸ್ತೆ, ಟ್ರಾಫಿಕ್ ಜಾಮ್ ಎಂದೆಲ್ಲಾ ಕೆಲವು ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ನೀಡಿ ರಾಜ್ಯದ ಜನರನ್ನು ಕೆರಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಕೇಸು ದಾಖಲೆ ಗೊಂಡಿರುವುದೇ ಇದಕ್ಕೆ ಪ್ರಮುಖ ಕಾರಣ.
ಈ ಮಸೀದಿ ಇರುವುದು ಕಂಕನಾಡಿಯಿಂದ 100 ಮೀಟರ್ ಒಳಗಿನ ಬಡಾವಣೆಯಲ್ಲಿ.
ಅದರಲ್ಲೂ ಇಲ್ಲಿ ವಾಸವಾಗಿರುವುದು ಹೆಚ್ಚು ಮುಸ್ಲಿಮರೇ ಆಗಿರುತ್ತಾರೆ.
ಈ ಒಳ ರಸ್ತೆಯಲ್ಲಿ ಕೇವಲ 3ರಿಂದ 5 ನಿಮಿಷ ಮಾತ್ರ ನಮಾಜ್ ನಿರ್ವಹಿಸಲು ಉಪಯೋಗಿಸಿದ್ದಾರೆ. ಅದರಲ್ಲಿ ರಸ್ತೆಯ ಅರ್ಧ ಭಾಗ ತೆರೆದುಕೊಂಡಿತ್ತು.
ಯಾವುದೇ ಟ್ರಾಫಿಕ್ ಸಮಸ್ಯೆ ಉದ್ಭವಿಸಿಲ್ಲ.
ಮಂಗಳೂರಿನ ಪ್ರಮುಖ ರಸ್ತೆಯಲ್ಲೇ ಧಾರ್ಮಿಕ ಕಾರ್ಯ ನಡೆಸುವ ಹಲವು ಕಾರ್ಯಕ್ರಮಗಳಿವೆ.
ಕೇಸು ದಾಖಲಿಸುವುದಾದರೆ ಎಲ್ಲವನ್ನು ಪರಿಗಣಿಸಲಿ.
ತಕ್ಷಣ ಕೇಸನ್ನು ಹಿಂಪಡೆಯುವ ಮೂಲಕ ದ್ವಿಮುಖ ದೋರಣೆಗೆ ಕಡಿವಾಣ ಬೀಳಲಿ ಎಂದು ಪತ್ರದಲ್ಲಿ ತಿಳಿಸಿರುತ್ತಾರೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ