ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತಮ್ಮ ಶಾಸಕ ಸ್ಥಾನ ತಮ್ಮ ಹಿರಿಯರಿಂದ ಬಂದದ್ದು ಎಂದು ಕೊಂಡಿರಬೇಕು!. ತಾನು ಓರ್ವ ಜನಪ್ರತಿನಿಧಿ ಎಂಬುದನ್ನು ಮರೆತು ಎಲ್ಲೆಂದರಲ್ಲಿ ತನ್ನ ನಾಲಗೆಯನ್ನು ಹರಿಬಿಟ್ಟು ಇತರರೊಡನೆ ರೇಗುವುದು ಒಂದು ಚಾಳಿ ಆಗಿ ಬಿಟ್ಟಿದೆ.
ಬೆಳ್ತಂಗಡಿ ಪೊಲೀಸರು ತಮ್ಮ ಕಾನೂನು ವ್ಯಾಪ್ತಿಯಲ್ಲಿ ಆರೋಪಿತರನ್ನು ಬಂಧಿಸಿರುವುದನ್ನು ತನ್ನ ಮೂಗಿನ ನೇರಕ್ಕೆ ವಿರೋಧಿಸಿ ಪೊಲೀಸರನ್ನು ಗುರಿಯಾಗಿಸಿ, ಕಾನೂನು ಬಾಹಿರ ಮಾತುಗಳನ್ನಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುವುದನ್ನು ವಿರೋಧಿಸಿದ ಪೂಂಜರು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಕೆ.ಅಶ್ರಫ್ (ಮಾಜಿ ಮೇಯರ್) ಕಿಡಿಕಾರಿದ್ದಾರೆ.
ಶಾಸಕ ಪೂಂಜಾ ಹಿಂದೊಮ್ಮೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಇದೇ ರೀತಿ ಅವ್ಯಾಚ್ಯ ಶಬ್ದಗಳಿಂದ ಬೈದು ರಂಪಾಟ ಮಾಡಿದ್ದು , ನಿನ್ನೆ ಬೆಳ್ತಂಗಡಿ ಪಿಎಸ್ ಐ ಯನ್ನು ಬೈದಿದ್ದಾರೆ. ಬಹುಷಃ ಪೂಂಜಾ ಅವರು ತನ್ನಲ್ಲಿರುವ ಶಾಸಕ ಸ್ಥಾನ ತಮ್ಮ ಹಿರಿಯರಿಂದ ಬಳುವಳಿಯಾಗಿ ತನಗೆ ಬಂದದ್ದು ಎಂದು ಭಾವಿಸಿರಬೇಕು. ತಾನು ಈ ದೇಶದ ಸಂವಿಧಾನದ ಅಡಿಯಲ್ಲಿನ ಶಾಸಕಾಂಗದ ಅಡಿಯಲ್ಲಿನ ಓರ್ವ ಜವಾಬ್ದಾರಿಯುತ ಜನಪ್ರತಿನಿಧಿ ಎಂಬುದನ್ನು ಮರೆತು, ತನ್ನ ದುರ್ವರ್ತನೆಯ ಮೂಲಕ ತನ್ನ ಮಾತುಗಾರಿಕೆಯನ್ನು ಉಲ್ಲಂಘಿಸಿದ್ದಾರೆ.
ಅವರಿಗಿರುವ ಶಾಸಕ ಸ್ಥಾನ ನಾಡಿನ ಕಾನೂನು ವ್ಯವಸ್ಥೆಯನ್ನು ಪಾಲನೆಗೊಳಿಸಲು,ಜನರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು, ನಾಡನ್ನು ಅಭಿವೃದ್ಧಿ ಪಡಿಸಲು ಇರುವುದಾಗಿದೆ. ತನ್ನ ಶಾಸಕ ಸ್ಥಾನ ತನ್ನ ಹಿರಿಯರ ಪಾಳೆಗಾರಿಕೆಯನ್ನು ಮೆರೆಯಲು ಅಲ್ಲ ಎಂದು ಅವರು ತಿಳಿಯಬೇಕು. ಪೂಂಜರಿಗೆ ತಮ್ಮ ಬಾಯಲ್ಲಿ ಸೌಮ್ಯ ಸಂವಹನದ ಪದಗಳ ಕೊರತೆ ಇದ್ದಲ್ಲಿ ಈ ಬಗ್ಗೆ ತರಬೇತಿಯನ್ನಾದರೂ ಪಡೆದು ಕೊಳ್ಳಲಿ ಎಂದು ಕೆ.ಅಶ್ರಫ್( ಮಾಜಿ ಮೇಯರ್) ಪ್ರತಿಕ್ರಿಯಿಸಿದರು.
















ಇನ್ನಷ್ಟು ಸುದ್ದಿಗಳು
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಇಂಡಿಯನ್ ಗ್ರಾಂಡ್ ಮುಫ್ತಿ ಜಿಲ್ಲೆಗೆ- ಯಶಸ್ವಿಗಾಗಿ ಸಮಾಲೋಚನಾ ಸಭೆ
ಭಾರತವನ್ನು ‘ನರಕ’ ಎಂದ ಟ್ರಂಪ್ ಪೋಸ್ಟ್- ಮೌನಕ್ಕೆ ಶರಣಾದ ವಿದೇಶಾಂಗ ಇಲಾಖೆ
ಅಲ್ ಮದೀನ ಇಂಗ್ಲಿಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ- ನಾಲ್ವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ