janadhvani

Kannada Online News Paper

ಕುಂಬ್ರ ಮರ್ಕಝುಲ್ ಹುದಾ :ಬಹರೈನ್ ಸಮಿತಿಗೆ ನವ ಸಾರಥ್ಯ

ಮನಾಮ:ಮರ್ಕಝುಲ್ ಹುದಾ ಮಹಿಳಾ ಕಾಲೇಜು ಕುಂಬ್ರ ಇದರ ಬಹರೈನ್ ರಾಷ್ಟ್ರೀಯ ಸಮಿತಿ ಯ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ಮನಾಮ ಕೆಸಿಎಫ್ ಸೆಂಟರ್ ನಲ್ಲಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನೀ ಕಾಮಿಲ್ ಅವರ ಅಧ್ಯಕ್ಷತೆ ಯಲ್ಲಿ ನಡೆಯಿತು.

ನೂತನ ಸಾಲಿನ ಅಧ್ಯಕ್ಷರಾಗಿ ಜಮಾಲುದ್ದೀನ್ ವಿಟ್ಟಲ್, ಪ್ರಧಾನ ಕಾರ್ಯದರ್ಶಿಯಾಗಿ ಖಲಂದರ್ ಶರೀಫ್ ಕಕ್ಕೆಪದವು, ಕೋಶಾಧಿಕಾರಿಯಾಗಿ ಎಸ್.ಎಂ. ಫಾರೂಖ್ ಕುಂಬ್ರ, ಉಪಾಧ್ಯಕ್ಷರುಗಳಾಗಿ ಸಯ್ಯದ್ ಅಲಿ ತಂಬುತಡ್ಕ , ಅಬ್ದುಲ್ ಅಝೀಝ್ ಸುಳ್ಯ, ಹನೀಫ್ ಕಿನ್ಯ ಕಾರ್ಯದರ್ಶಿಗಳಾಗಿ ಫಝಲ್ ಸುರತ್ಕಲ್, ಅಶ್ರಫ್ ರೆಂಜಾಡಿ, ಅಬ್ದುಲ್ ಕರೀಂ ಮಾಝಾ ಕೆ.ಸಿ.ರೋಡ್, ಇವರನ್ನು ಆರಿಸಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ರಿಯಾಝ್ ಸುಳ್ಯ, ಇಖ್ಬಾಲ್ ಮಂಜನಾಡಿ, ಮುಹಮ್ಮದ್ ಬಲ್ಕಾಡ್, ಅಬ್ದುಸಮದ್ ಉಜಿರ್ಬೆಟ್ಟು,, ಅಶ್ರಫ್ ಬೇಂಗಿಲ,ಶಾಫಿ ಕಬಕ, ಝಕರಿಯಾ ಎಣ್ಮೂರ್, ಸುಹೈಲ್ ಮೂಲರಪಟ್ನ, ಮುಹ್ಸಿನ್ ಸುಳ್ಯ, ಮನ್ಸೂರ್ ಬೆಳ್ಮ, ಸಲೀಂ ಕೆ.ಸಿ.ರೋಡ್, ಅಬ್ದುಲ್ ಮಜೀದ್ ಮುಕ್ಕ,ಹಾರಿಸ್ ಒಕ್ಕೆತ್ತೂರ್, ಸೂಫಿ ಪೈಂಬಚಾಲ್, ಮೂಸ ಪೈಂಬಚಾಲ್, ಅಶ್ರಫ್ ಕಿನ್ಯ, ನೌಫಲ್ ವಿಟ್ಲ, ಹನೀಫ್ ಗುರುವಾಯನಕೆರೆ, ಅಬ್ದುಲ್ ರಶೀದ್ ಅಡ್ಯಾರ್,ಅಬ್ದುಲ್ ರಝಾಖ್ ಆನೆಕಲ್ಲು, ಇಸ್ಮಾಯಿಲ್ ತಲಪಾಡಿ, ಅಲಿ ಚೆನ್ನಾವರ,

ಸಲಹೆಗಾರರಾಗಿ ಅಲೀ ಮುಸ್ಲಿಯಾರ್ ಕೊಡಗು, ಅಬೂಬಕರ್ ಮಾದಾಪುರ,ಹೈದರ್ ಸಅದಿ ಮಂಚಿ, ಸಲೀಂ ರಫಾ ತಲಪಾಡಿ, ಫಕ್ರುದ್ದೀನ್ ಸುಳ್ಯ, ಹಾರಿಸ್ ಸಂಪ್ಯ, ಬಶೀರ್ ಕಾರ್ಲೆ, ಅಬ್ದುಲ್ ಮಜೀದ್ ಮಾದಾಪುರ ಇವರನ್ನು ಆರಿಸಲಾಯಿತು

ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಫಾರೂಖ್ ಕುಂಬ್ರ ಸಮಾರಂಭವನ್ನು ಉದ್ಘಾಟಿಸಿದರು, ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ಶುಭ ಹಾರೈಸಿದರು,ಅಝೀಝ್ ಸುಳ್ಯ ಸ್ವಾಗತಿಸಿ ಖಲಂದರ್ ‌ಶರೀಫ್ ಧನ್ಯವಾದ ಸಲ್ಲಿಸಿದರು

error: Content is protected !! Not allowed copy content from janadhvani.com