✍️ಮುನೀರ್ ಕಾಟಿಪಳ್ಳ
ನರೇಂದ್ರ ಮೋದಿಯವರ ಮಂಗಳೂರು “ರೋಡ್ ಶೋ” ಲೇಡಿಹಿಲ್ ವೃತ್ತದಿಂದ ನಾರಾಯಣ ಗುರುಗಳ ಮೂರ್ತಿಗೆ ಹಾರ ಹಾಕುವ ಮೂಲಕ ಆರಂಭ ಆಗುತ್ತದಂತೆ. ಗಣರಾಜ್ಯೋತ್ಸವ ಪರೇಡ್ ನಲ್ಲಿ ಕೇರಳ ಸರಕಾರದ ನಾರಾಯಣ ಗುರುಗಳ ಟ್ಯಾಬ್ಲೊವನ್ನು ನಿರ್ದಯವಾಗಿ ತಿರಸ್ಕರಿಸಿದ ನರೇಂದ್ರ ಮೋದಿಯವರ ಕೇಂದ್ರ ಸರಕಾರದ ನಡೆಯನ್ನು ನಾರಾಯಣ ಗುರುಗಳನ್ನು ಗೌರವಿಸುವ, ಅನುಸರಿಸುವ ಯಾರೂ ಮರೆಯಲು ಸಾಧ್ಯವಿಲ್ಲ. ಅಂದು ಅಷ್ಟು ಪ್ರತಿಭಟನೆ ನಡೆದಿದ್ದರೂ ಮೋದಿ ಹಾಗೂ ಅವರ ಪರಿವಾರವಾದ ಬಿಜೆಪಿಯ ಕಿವಿಗೆ ಅದು ತಲುಪಿರಲಿಲ್ಲ. ಈಗ ಮೋದಿ ಸಾಹೇಬರಿಗೆ ದಿಢೀರ್ ಆಗಿ ಗುರುಗಳ ಮೇಲೆ ಪ್ರೀತಿ ಉಕ್ಕಿದ್ದರೆ ಅದಕ್ಕೆ ಕಾರಣ ಏನೂ ನಿಗೂಢ ಅಲ್ಲ.
ಕರಾವಳಿಯಲ್ಲಿ ನಾರಾಯಣ ಗುರುಗಳ ಬಿಲ್ಲವ ಸಮುದಾಯ ಈ ಚುನಾವಣೆಯಲ್ಲಿ ಬಿಜೆಪಿ ವಿರುಧ್ದ ಮತ ಚಲಾಯಿಸುವ ದೃಢ ತೀರ್ಮಾನಕ್ಕೆ ಬಂದಂತಿದೆ. ಆ ತೀರ್ಮಾನ ದಿನೇ ದಿನೆ ಬಲವಾಗುತ್ತಾ ಸಾಗುತ್ತಿದೆ. ಇದರಿಂದ ವಿಚಲಿತ ಗೊಂಡಿರುವ ಬಿಜೆಪಿಯು ನಾರಾಯಣ ಗುರುಗಳ ಕೊರಳಿಗೆ ಮೋದಿ ಕೈಯಲ್ಲಿ ಹಾರ ಹಾಕಿಸಿ ಬಿಲ್ಲವರನ್ನು ಸಮಾಧಾನ (ಮಂಗ ಮಾಡುವ) ಗೊಳಿಸುವ ಗಿಮಿಕ್ ಗೆ ಮುಂದಾಗಿದೆ. ಇದೆಲ್ಲಾ ಗುರುಗಳ ಅನುಯಾಯಿಗಳಿಗೆ ಅರ್ಥ ಆಗದ ಸಂಗತಿ ಏನಲ್ಲ.
ಅಷ್ಟಕ್ಕೂ ನಾರಾಯಣ ಗುರುಗಳದ್ದು ಜಾತ್ಯಾತೀತ, ಮಾನವೀಯ ಚಿಂತನೆಗಳು. ಅವರು ಯಾವತ್ತು ಪರಧರ್ಮಗಳನ್ನು ದ್ವೇಷಿಸಲಿಲ್ಲ. ಧರ್ಮದಲ್ಲಿ ಮಾನವೀಯ ಸುಧಾರಣೆಗಳಿಗೆ ಒತ್ತುಕೊಟ್ಟರು. ದ್ವೇಷ, ವ್ಯಂಗ್ಯ, ಬಡವರ ಬಗ್ಗೆ ತಾತ್ಸಾರ, ಧಾರ್ಮಿಕ ಅಸಹಿಷ್ಟುತೆಯೇ ಬಂಡವಾಳ ಆಗಿರುವವರು ಮಾನವೀಯತೆಯ ಸಾಕಾರಮೂರ್ತಿಯಾದ ಗುರುಗಳಿಗೆ ಚುನಾವಣಾ ರ್ಯಾಲಿಯ ಸಂದರ್ಭ ಹಾರ ಹಾಕುವುದು ಅರ್ಥ ಆಗದ ಸಂಗತಿ ಏನಲ್ಲ.
ಲೇಡಿಹಿಲ್ ದಾಟಿ ರೋಡ್ ಶೋ ಮುಂದುವರಿಯುವ ಲಾಲ್ ಭಾಗ್ ವೃತ್ತದಲ್ಲಿ ಮಹಾತ್ಮಾ ಗಾಂಧಿಯವರ ಮೂರ್ತಿಯೂ ಇದೆ. ವಿದೇಶಕ್ಕೆ ಹೋದಾಗ ಗಾಂಧಿ ಪುತ್ಥಳಿಗೆ ಹಾರ ಹಾಕುವ ಮೋದಿ ಸಾಹೇಬರು ಮಂಗಳೂರಿನಲ್ಲಿ ನಾರಾಯಣ ಗುರುಗಳ ಮೂರ್ತಿಗೆ ಹಾರ ಹಾಕಿ ಮುಂದಕ್ಕೆ ಸಾಗುವಾಗ ಕೈಯಳತೆಯಲ್ಲಿ ಸಿಗುವ ಮಹಾತ್ಮರ ಮೂರ್ತಿಗೂ ಹಾರ ಹಾಕುತ್ತಾರಾ, ಎಂದು ನೋಡಬೇಕು.
“ಚುನಾವಣಾ ನಿಮಿತ್ತಂ ಬಹುಕೃತ ವೇಷಂ”
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ