janadhvani

Kannada Online News Paper

ಐಸಿಎಫ್ ಕಾರ್ಯಕರ್ತ ಮಕ್ಕಾದಲ್ಲಿ ಹೃದಯಾಘಾತದಿಂದ ನಿಧನ

ರಜೆ ಮುಗಿಸಿ ಎರಡು ತಿಂಗಳ ಹಿಂದೆ ದೇಶದಿಂದ ವಾಪಸ್ಸಾಗಿದ್ದರು

ಜಿದ್ದಾ: ಮಲಪ್ಪುರಂ ಮೂಲದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮಕ್ಕಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಮಲಪ್ಪುರಂ ಅರೀಕೋಡ್ ಕಿಝಿಶ್ಶೇರಿ ವಿಳಯಿಲ್ ಎಳಂಗಾವ್ ನಿವಾಸಿ ನೌಫಲ್ ಆಗಿದ್ದಾರೆ ಮೃತ ವ್ಯಕ್ತಿ.

ಮಕ್ಕಾದ ನವಾರಿಯ್ಯ ಎಂಬ ಸ್ಥಳದಲ್ಲಿ ಮನೆ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಬುಧವಾರ ಬೆಳಗ್ಗೆ ಪ್ರಾರ್ಥನೆಗೆ ತಯಾರಿ ನಡೆಸುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ಸ್ವಲ್ಪದರಲ್ಲೇ ಮೃತಪಟ್ಟಿದ್ದಾರೆ. ರಜೆ ಮುಗಿಸಿ ಎರಡು ತಿಂಗಳ ಹಿಂದೆ ದೇಶದಿಂದ ವಾಪಸ್ಸಾಗಿದ್ದರು. ಐಸಿಎಫ್ ತನ್ಈಮ್ ವಲಯ ಪ್ರಕಾಶನ ಕಾರ್ಯದರ್ಶಿಯಾಗಿದ್ದರು.

ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಮೃತದೇಹವನ್ನು ಮಕ್ಕಾದಲ್ಲಿ ದಫನ ಮಾಡಲಾಗುವುದು ಎಂದು ಐಸಿಎಫ್ ಮಕ್ಕಾ ವೆಲ್ಫೇರ್ ತಂಡ ಮಾಹಿತಿ ನೀಡಿದೆ.

error: Content is protected !! Not allowed copy content from janadhvani.com