janadhvani

Kannada Online News Paper

ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ ವತಿಯಿಂದ 75ನೇ ಗಣರಾಜ್ಯೋತ್ಸವ ಆಚರಣೆ

ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ಭಾರತದ 75ನೇ ಗಣರಾಜ್ಯೋತ್ಸವ ಆಚರಣೆಯು ದಿನಾಂಕ 26-01-2024
ಶುಕ್ರವಾರ ನಸಾತ್ ಸಭಾಂಗಣ ಮುರ್ಗಾಫ್ ಸಿಟಿ ಯಲ್ಲಿ ನಡೆಯಿತು.

ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜನಾಬ್ ಯಾಕೂಬ್ ಕಾರ್ಕಳ ತಮ್ಮ ಸ್ವಾಗತ ಭಾಷಣದಲ್ಲಿ ಗಣರಾಜೋತ್ಸವದ ಬಗ್ಗೆ ಸವಿವರವಾಗಿ ತಿಳಿಸಿ, ಶುಭ ಕೋರಿದರು, ಕೆಸಿಎಫ್ IC ಆಡಳಿತ ಕಾರ್ಯದರ್ಶಿ ಬಹು ಅಬ್ದುಲ್ ರಹ್ಮಾನ್ ಸಖಾಫಿ ಉಪಸ್ಥಿತರಿದ್ದರು. ಪ್ರಚಾರ ಮತ್ತು ಪ್ರಸಾರ ವಿಭಾಗ ಅಧ್ಯಕ್ಷ ರಾದ ಸಾಹುಲ್ ಹಮೀದ್ ಸಅದಿ ಝುಹುರಿ ಉಸ್ತಾದ್,ಶಿಕ್ಷಣ ವಿಭಾಗ ಅಧ್ಯಕ್ಷ ಬಹು ಬಾದುಷಾ ಸಖಾಫಿ ಅಸಂಶಗೈದರು. ಸಾಲ್ಮಿಯ ಸೆಕ್ಟರ್ ಅಧ್ಯಕ್ಷ ಕಾಸಿಂ ಉಸ್ತಾದ್ ಬೆಲ್ಮ ಸಂಘಟನಾ ವಿಭಾಗ ಕಾರ್ಯದರ್ಶಿ ಸಮೀರ್ ಕೆಸಿ ರೋಡ್ ಸಾಂತ್ವನ ವಿಭಾಗ ಅಧ್ಯಕ್ಷ ಇಕ್ಬಾಲ್ ಕಂದಾವರ ಇಹ್ಸಾನ್ ವಿಭಾಗ ಅಧ್ಯಕ್ಷ ರಾದ ಸೌಕತ್ ಶಿರ್ವ ಫೈನಾನ್ಸ್ ಕಂಟ್ರೋಲರ್ ಹಾಜಿ ಮೂಸ ಇಬ್ರಾಹಿಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿ ತಿಯ ನಾಯಕರು ಸೌತ್ ಝೋನ್ ಮತ್ತು ನೋರ್ತ್ ಝೋನ್, ಸೆಕ್ಟರ್ ನಾಯಕರು ಭಾಗವಹಿಸಿದರು ಕೆಸಿಎಫ್ ಪ್ರದಾನ ಕಾರ್ಯದರ್ಶಿಯಾಕೂಬ್ ಕಾರ್ಕಳ ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದಗೈದರು.
ಕೆಸಿಎಫ್ IC ಆಡಳಿತ ವಿಭಾಗ ಕಾರ್ಯದರ್ಶಿ ಬಹುಮಾನ್ಯ ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದ್ ದುಆ ನೆರವೇರಿಸಿದರು.

ವರದಿ :ಇಬ್ರಾಹಿಂ ವೇಣೂರು
ಪ್ರಚಾರ ಮತ್ತು ಪ್ರಸಾರ ವಿಭಾಗ ಕಾರ್ಯದರ್ಶಿ ಕೆಸಿಎಫ್ ಕುವೈಟ್

error: Content is protected !! Not allowed copy content from janadhvani.com