janadhvani

Kannada Online News Paper

ಎಸ್ ವೈ ಎಸ್ ಮೂವತ್ತನೇ ವಾರ್ಷಿಕ ಸಮ್ಮೇಳನ ಪ್ರಯುಕ್ತ ಆಕ್ಷನ್-24

ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಇದರ ರಾಜ್ಯ ಮಟ್ಟದ ಮಹಾ ಸಮ್ಮೇಳನದ ಪ್ರಚಾರಾರ್ಥ ಆಕ್ಷನ್-24 ಕಾರ್ಯಕ್ರಮವು ಪಾಣೆಮಂಗಳೂರು ಎಸ್ ಎಸ್ ಆಡಿಟೋರಿಯಂ ನಲ್ಲಿ ನಡೆಯಿತು.

ಎಸ್ ವೈ ಎಸ್ ಪ್ರಚಾರ ಸಮಿತಿಯ ಚೇರ್ ಮಾನ್ ಎಂ ಪಿ ಎಂ ಅಶ್ರಫ್ ಸಅದಿ ಮಲ್ಲೂರು ಅಧ್ಯಕ್ಷತೆ ವಹಿಸಿದರು. ಸಮಿತಿಯ ಕೋಆರ್ಡಿನೇಟರ್ ಹಾಫಿಳ್ ಯಾಕೂಬ್ ಸಅದಿ ನಾವೂರು ಮುನ್ನುಡಿಯಾಗಿ ವಿಷಯ ಮಂಡಿಸಿದರು. ಎಸ್ ವೈ ಎಸ್ ರಾಜ್ಯ ನಾಯಕ ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ ಮುಖ್ಯಭಾಷಣ ಮಾಡಿದರು.
ಮುಸ್ಲಿಂ ಜಮಾಅತ್ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹೀಂ ಸಅದಿ ಖತರ್, ಅಬ್ದುಲ್ ಲತೀಫ್ ಮಾಸ್ಟರ್ ಮಾತನಾಡಿದರು.

,ಎಸ್ ವೈ ಎಸ್ ನಾಯಕರಾದ ಬಶೀರ್ ಮದನಿ ಅಲ್ ಕಾಮಿಲಿ, ಹಂಝ ಮದನಿ ತೆಂಕಕಾರಂದೂರು, ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ, ಖಾಲಿದ್ ಹಾಜಿ ಭಟ್ಕಳ, ನವಾಜ್ ಸಖಾಫಿ ಅಡ್ಯಾರ್, ಸಲೀಂ ಕನ್ಯಾಡಿ, ಬಶೀರ್ ಸಖಾಫಿ ಉಳ್ಳಾಲ, ಮಜೀದ್ ಸಖಾಫಿ ಅಮ್ಮುಂಜೆ, ರಝಾಕ್ ಭಾರತ್, ಎಸ್ಸೆಸ್ಸೆಫ್ ನಾಯಕರಾದ ಮುಹಮ್ಮದ್ ಮಿಸ್ಬಾಹಿ ಮರ್ದಾಳ, ಇರ್ಷಾದ್ ಹಾಜಿ ಗೂಡನಬಳಿ ರಶೀದ್ ಹಾಜಿ ವಗ್ಗ ಮುಂತಾದವರು ಭಾಗವಹಿಸಿದರು.

ದ. ಕ ಜಿಲ್ಲಾ ವ್ಯಾಪ್ತಿಯ ಹದಿಮೂರು ಝೋನ್ ಗಳ ಪ್ರಚಾರ ಸಮಿತಿಯನ್ನು ರಚಿಸಲಾಯಿತು. ಜನವರಿ 13ರಿಂದ 17ರ ವರೆಗೆ ಸರ್ಕಲ್ ಪ್ರಯಾಣ ಸಂದೇಶ ಜಾಥಾ ನಡೆಸಲು ತೀರ್ಮಾನಿಸಲಾಯಿತು.
ಪ್ರಚಾರ ಸಮಿತಿಯ ಮಹಬೂಬ್ ಸಖಾಫಿ ಸ್ವಾಗತಿಸಿ ಸಲೀಂ ಕನ್ಯಾಡಿ ವಂದಿಸಿದರು.

error: Content is protected !! Not allowed copy content from janadhvani.com