ಮುಂಬೈ | ಸಂವಿಧಾನದ ಬಲದಿಂದ ಭಾರತದ ಸ್ಥಿರತೆ ಮತ್ತು ಸಂವಿಧಾನವು ಒದಗಿಸಿದ ಖಾತರಿಗಳು ನಾಗರಿಕರಿಗೆ ರಕ್ಷಣೆ ಮತ್ತು ಸ್ವಾತಂತ್ರ್ಯವನ್ನು ನೀಡುತ್ತದೆ ಎಂದು ಭಾರತದ ಗ್ರ್ಯಾಂಡ್ ಮುಫ್ತಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು. ಅವರು ಮುಂಬೈನ ಏಕತಾ ಉದ್ಯಾನದಲ್ಲಿ ಎಸ್ಎಸ್ಎಫ್ ಗೋಲ್ಡನ್ ಫಿಫ್ಟಿ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡುತ್ತಿದ್ದರು.

ಸಂವಿಧಾನದ ಜೀವಾಳವಾಗಿರುವ ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯನ್ನು ಕಾಪಾಡಬೇಕು. ಅನೇಕ ಧರ್ಮಗಳು ಮತ್ತು ಜಾತಿ ಉಪಜಾತಿಗಳು ಸೇರಿದಂತೆ ಹಲವು ರೀತಿಯಲ್ಲಿ ವೈವಿಧ್ಯಮಯವಾಗಿರುವ ಭಾರತದಲ್ಲಿ ವೈವಿಧ್ಯತೆಯನ್ನು ಅಂಗೀಕರಿಸಲು ಸಂವಿಧಾನವು ಕರೆ ನೀಡಿದೆ ಎಂದು ಅವರು ನೆನಪಿಸಿದರು.
ಕೇವಲ ಒಂದು ಸಂಸ್ಕೃತಿಯನ್ನು ಪ್ರತಿಬಿಂಬಿಸುವುದು ಮತ್ತು ದೇಶದ ಬಹುಸಂಸ್ಕೃತಿಯ ಜೀವನವನ್ನು ಘಾಸಿಗೊಳಿಸುವುದು ಭಾರತದ ಒಗ್ಗಟ್ಟಿನ ಮೇಲೆ ಪರಿಣಾಮ ಬೀರಲಿದೆ. ಒಕ್ಕೂಟ ವ್ಯವಸ್ಥೆಯನ್ನು ಒಡೆಯುವ ಯಾವುದೇ ಬಲವರ್ಧನೆಯು ದೇಶಕ್ಕೆ ಹಾನಿಯಾಗಿದೆ. ದಲಿತರು, ಅಲ್ಪಸಂಖ್ಯಾತರು ಮತ್ತು ಇತರ ಹಿಂದುಳಿದ ಗುಂಪುಗಳಂತಹ ಅಂಚಿನಲ್ಲಿರುವ ಗುಂಪುಗಳ ಪ್ರಗತಿಗಾಗಿ ಸಂವಿಧಾನವು ಕಲ್ಪಿಸಿರುವ ಎಲ್ಲಾ ಆಲೋಚನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು.
ಸಂವಿಧಾನದ ಪೀಠಿಕೆ, ನಾವು ಭಾರತದ ಜನರು, ಒಂದು ರಾಷ್ಟ್ರವಾಗಿ ನಮ್ಮ ಎಲ್ಲಾ ವೈವಿಧ್ಯತೆಯನ್ನು ಒಪ್ಪಿಕೊಳ್ಳುವ ಘೋಷಣೆಯಾಗಿದೆ. ದೇಶದ ಬಹುತ್ವವನ್ನು ಬಲಪಡಿಸಲು ಎಸ್ಎಸ್ಎಫ್ ಸಮ್ಮೇಳನದ ನಿರ್ಣಯವಾಗಿ ಇದನ್ನು ಅಂಗೀಕರಿಸಲಾಗಿದೆ ಎಂದು ಗ್ರಾಂಡ್ ಮುಫ್ತಿ ಹೇಳಿದರು.
ಸೌಹಾರ್ದತೆ ಮತ್ತು ಪ್ರೀತಿಯಿಂದ ಅರಳುವ ಭಾರತಕ್ಕಾಗಿ ದೇಶದ ಜನತೆ ಪರಸ್ಪರ ಸಹಕಾರ ನೀಡಬೇಕು. ಇಸ್ಲಾಂ ಉಗ್ರವಾದ ಮತ್ತು ಮತೀಯವಾದವನ್ನು ಒಪ್ಪುವುದಿಲ್ಲ.ಶಾಂತಿ ಮಾರ್ಗವನ್ನು ಅಳವಡಿಸಿಕೊಳ್ಳುವುದು ಧರ್ಮದ ಬೋಧನೆ. ಎಲ್ಲಾ ಮುಸ್ಲಿಮರು ಆ ಮಾರ್ಗವನ್ನು ಅನುಸರಿಸುತ್ತಾರೆ. ಇಲ್ಲಿನ ಮುಸ್ಲಿಮರು ದೇಶದ ಏಕತೆ, ಸಮಗ್ರತೆ, ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದವರಾಗಿದ್ದಾರೆ. ಭಾರತದ ಪ್ರಗತಿಗಾಗಿ ಮುಂಚೂಣಿಯಿಂದ ಕೆಲಸ ಮಾಡುವ ಮುಸ್ಲಿಮರು ಎಂದೆಂದೂ ಇರಲಿದ್ದಾರೆ ಎಂದು ಹೇಳಿದರು.
ಕಳೆದ ಶುಕ್ರವಾರ ಆರಂಭವಾದ ಎಸ್ ಎಸ್ ಎಫ್ ಗೋಲ್ಡನ್ ಫಿಫ್ಟಿ ರಾಷ್ಟ್ರೀಯ ಸಮ್ಮೇಳನ ಮುಕ್ತಾಯಗೊಂಡಿದೆ. ಮುಂಬೈನ ಏಕತಾ ಉದ್ಯಾನದಲ್ಲಿ ದೇಶದ 25 ರಾಜ್ಯಗಳಿಂದ ಲಕ್ಷಾಂತರ ಕಾರ್ಯಕರ್ತರು ಜಮಾಯಿಸಿದ್ದರು. ಸಮ್ಮೇಳನವು ದೇಶದ ವೈವಿಧ್ಯತೆಯ ಸಭೆಯ ವೇದಿಕೆಯಾಯಿತು. ಕಳೆದ ಮೂರು ದಿನಗಳಿಂದ ಏಳು ವೇದಿಕೆಗಳಲ್ಲಿ ಸಮಾವೇಶ ನಡೆಯಿತು.
ಪ್ರಮುಖ ವೇದಿಕೆಯಲ್ಲಿ ಇಂದು ಸಂಜೆ
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ