ಕೇರಳದ ಕಳಮಶ್ಶೇರಿ ಎಂಬಲ್ಲಿ ಕ್ರೈಸ್ತ ಸಮುದಾಯದವರ ಸಭೆಯಲ್ಲಿ ಬಾಂಬ್ ಸ್ಪೋಟ ನಡೆದ ಬೆನ್ನಲ್ಲೇ ಈ ಎರಡು ಚಾನೆಲ್ ಗಳು ಮಸ್ಲಿಮರ ಮೇಲೆ ಆರೋಪ ಹೊರಿಸಿ ಸುಳ್ಳು ಬಿತ್ತರಿಸಿದವು. ಎಷ್ಟರ ಮಟ್ಟಿಗೆ ಅದು ಮುಂದುವರಿಯಿತೆಂದರೆ ತಲೆಮೇಲೆ ಟೊಪ್ಪಿ ಹಾಕಿಕೊಂಡಿರುವ ಓರ್ವ ಮುಸ್ಲಿಮನ ಫೋಟೋ ತೋರಿಸಿ ಬಾಂಬ್ ಸ್ಪೋಟಿಸಿದ್ದು ಇವನು ಎಂದು ಪ್ರಚಾರ ಮಾಡಿದುವು.
ಇದೀಗ ಬಾಂಬ್ ಸ್ಪೋಟ ನಡೆಸಿದ್ದು ನಾನೇ ಎಂದು ಕ್ರೈಸ್ತ ಸಮುದಾಯಕ್ಕೆ ಸೇರಿದ ಮಾಟಿನ್ ಎಂಬಾತ ಹೇಳಿಕೆ ನೀಡಿ ಪೊಲೀಸರಿಗೆ ಶರಣಾಗಿದ್ದಾನೆ. ಇದರೊಂದಿಗೆ ಕರ್ನಾಟಕದ ಈ ಎರಡು ಚಾನೆಲ್ ಗಳು ತೀವ್ರ ಮುಖಭಂಗಕ್ಕೀಡಾಗಿವೆ.
ಅಪರಾಧಿ ತಪ್ಪೊಪ್ಪಿಕೊಳ್ಳದಿದ್ದಲ್ಲಿ ಈ ಆರೊಪ ಮುಸ್ಲಿಮರ ಮೇಲೆ ಉಳಿದು ಇಲ್ಲಿ ಏನು ಸಂಭವಿಸುತ್ತಿತ್ತು ಎಂಬುದನ್ನು ಊಹಿಸಿ ನೋಡಿ!
ಈ ಚಾನೆಲ್ ಗಳು ಬಿತ್ತರಿಸುವ ಸುದ್ದಿಗಳು ನಿರಾಧಾರ ಎಂಬುದು ಇದರಿಂದ ಸಾಬೀತಾಗಿದೆ. ಯಾವ ಆಧಾರದಲ್ಲಿ ಇವು ಬಾಂಬ್ ಸ್ಪೋಟ ನಡೆಸಿದ್ದು ಜಿಹಾದಿಗಳು ಎಂಬ ತೀರ್ಮಾನಕ್ಕೆ ಬಂದುವು? ಯಾವ ಆಧಾರದಲ್ಲಿ ಮುಸ್ಲಿಮನ ಫೋಟೋ ಹಾಕಿದುವು? ಇಲ್ಲಿನ ಕೋಮುವಾದಿಗಳ ಅಂಡು ನೆಕ್ಕಿ ಪ್ರಚಾರ ದಕ್ಕಿಸಿಕೊಳ್ಳುವ ತೆವಲಿನಲ್ಲಿ ಅದೆಂತಹ ಅಪಾಯಕಾರಿ ಸುಳ್ಳುಗಳನ್ನು ಬಿತ್ತರಿಸಲೂ ಸಿದ್ಧವಾಗುವ ಈ ಚಾನೆಲ್ ಗಳು ಇಲ್ಲಿ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವುದು ಇದರಿಂದ ಪಕ್ಕಾ ಆಗಿದೆ. ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡಲು ಪಣತೊಟ್ಟ ಕಾಂಗ್ರೆಸ್ ಸರಕಾರದ ಪ್ರಯತ್ನವನ್ನು ಸುಟ್ಟು ಬೂದಿ ಮಾಡಲು ಹೊರಟಿರುವ ಈ ಚಾನೆಲ್ ಗಳನ್ನು ಸರಕಾರ ಶೀಘ್ರದಲ್ಲೇ ಮುಚ್ಚಿಸಬೇಕಾಗಿದೆ.
ಸುಳ್ಳು ಸುದ್ಧಿ ಹಬ್ಬಿಸಿ ಒಂದು ಸಮುದಾಯದ ಮೇಲೆ ವೃಥಾ ಆರೋಪ ಹೊರಿಸಿ ರಾಜ್ಯವನ್ನು ಕೋಮುದಳ್ಳುರಿಯಲ್ಲಿ ಉರಿಸಲೆತ್ನಿಸುತ್ತಿರುವ ಈ ಹಲ್ಕಟ್ ಚಾನೆಲ್ ಗಳು ರಾಜ್ಯಕ್ಕೂ ದೇಶಕ್ಕೂ ದ್ರೋಹ ಬಗೆಯುತ್ತಿವೆ. ಇವೆರಡೂ ತೀವ್ರ ಅಪಾಯಕಾರಿ ಚಾನೆಲ್ ಗಳು. ಹುಡುಗಿಯಿಂದ ಚಪ್ಪಲಿಯಲ್ಲಿ ಪೆಟ್ಟು ತಿಂದ ಪವರ್ ಟಿ.ವಿ. ಯ ರಾಕೇಶ್ ಶೆಟ್ಟಿ ತಾನು ಸಿದ್ಧರಾಮಯ್ಯನವರ ಪರ ಎಂದು ಪೋಸು ಕೊಡುತ್ತಿದ್ದಾನೆ. ಸಿದ್ಧರಾಮಯ್ಯನವರ ಪ್ರಯತ್ನಕ್ಕೆ ಮಣ್ಣೆರಚಿ ರಾಜ್ಯಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವ ಇವನ ಪೋಸು ಬರೀ ಡೋಂಗಿ ಎಂಬುದು ಜಾಹಿರಾಗಿದೆ.
ಸುವರ್ಣ ಚಾನೆಲ್ ಈಗಾಗಲೇ ಸುವ್ವರ್ ಚಾನೆಲ್ ಎಂಬ ಅಪಖ್ಯಾತಿಗೆ ಒಳಗಾಗಿದೆ. ಇಂತಹ ಚಾನೆಲ್ ಗಳು ರಾಜ್ಯಕ್ಕೆ ಯಾಕೆ ಬೇಕು? ಟಿ.ಆರ್. ಪಿ. ಗಾಗಿ ಮಲತಿನ್ನಲೂ ತಯ್ಯಾರಾಗುವ ಇಂತಹ ನಾಚಿಕೆಗೆಟ್ಟ ಚಾನೆಲ್ ಗಳನ್ನು ಮುಂದುವರಿಯಗೊಡುವುದು ಅಪಾಯಕಾರಿಯಾಗಿದೆ. ಮಾನ್ಯ ಸಿದ್ಧರಾಮಯ್ಯನವರು ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕೆಂದು ರಾಜ್ಯದ ಸಮಸ್ತ ಸಭ್ಯ ನಾಗರಿಕರ ಪರವಾಗಿ ಬೇಡಿಕೊಳ್ಳುತ್ತಿದ್ದೇನೆ.
✍️ಡಿ.ಐ. ಅಬೂಬಕರ್ ಕೈರಂಗಳ
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್