janadhvani

Kannada Online News Paper

ಶೈಕ್ಷಣಿಕ ಕ್ಷೇತ್ರದಲ್ಲಿ ಡಿಕೆಯಸ್ಸಿಯ ಪಾತ್ರ ಹಿರಿದು- ದಮ್ಮಾಂನಲ್ಲಿ ಯು.ಟಿ. ಖಾದರ್

ದಮ್ಮಾಮ್: ಸಮುದಾಯಕ್ಕಾಗಿ ಲೌಕಿಕ ಮತ್ತು ಧಾರ್ಮಿಕವಾಗಿ ಶೈಕ್ಷಣಿಕ ರಂಗದಲ್ಲಿ ಮುಂಚೂಣಿಯಲ್ಲಿರುವ ಡಿಕೆಯಸ್ಸಿಯ ಪಾತ್ರ ಅತ್ಯಂತ ಹಿರಿದಾಗಿದ್ದು ಪ್ರಶಂಸನೀಯವಾಗಿದೆ ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.

ಅವರು, ದಮ್ಮಾಮ್ ನಲ್ಲಿ ಡಿಕೆಯಸ್ಸಿ ಏರ್ಪಡಿಸಿದ್ದ ಫ್ಯಾಮಿಲಿ ಮುಲಾಖಾತ್ ಸಭಾಕಾರ್ಯಕ್ರಮವನ್ನು ಗಿಡಕ್ಕೆ ನೀರು ಸುರಿಸುವ ಮೂಲಕ ಉದ್ಘಾಟಿಸಿ, ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಖ್ ರವರು ಡಿಕೆಯಸ್ಸಿ ವಿಷನ್ 30 ಗೆ ಬಟನ್ ಒತ್ತುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.
ಚಾಲನೆಯ ನಂತರ ಡಿಕೆಯಸ್ಸಿ ಹಾಗೂ ಇಹ್ಸಾನ್ ಸಂಸ್ಥೆಯ ಕಾರ್ಯನಿರ್ವಹಣೆಯು ಶ್ಲಾಘನೀಯ ಇದಕ್ಕೆ ಸಹಕರಿಸುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ ಎಂದರು.

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಅಧೀನದ ಮರ್ಕಝ್ ತಅಲೀಮಿಲ್ ಇಹ್ಸಾನ್ ಉಡಪಿ ಜಿಲ್ಲೆಯ ಮೂಳೂರಿನಲ್ಲಿ ಕಾರ್ಯಾಚರಿಸುತ್ತಿದ್ದು ಎರಡು ಸಾವಿರದ ಐನೂರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇದರ ಅಂಗವಾಗಿ ಅಕ್ಟೋಬರ್ 26 ಗುರುವಾರ ದಮ್ಮಾಂನಲ್ಲಿ ಫ್ಯಾಮಿಲಿ ಮುಲಾಖಾತ್ ಏರ್ಪಡಿಸಲಾಗಿತ್ತು.

ಮರ್ಕಝ್ ತಅಲಿಮಿಲ್ ಇಹ್ಸಾನ್ ಮಾಜಿ ಉಪಾಧ್ಯಕ್ಷ ಅಬೂಸುಫ್ಯಾನ್ ಮದನಿ ದುಆಗೈದರು. ಜಾಮಿಅ ಮರ್ಕಝ್ ವೈಸ್ ಚಾನ್ಸ್ ಲರ್ ಅಡ್ವೊಕೇಟ್ ಡಾ!! ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಬೋರ್ಡ್ ಅಧ್ಯಕ್ಷ ಅಬ್ದುನ್ನಾಸಿರ್ ಲಕ್ಕಿಸ್ಟಾರ್, ಹಿರಿಯ ಸಾಹಿತಿ ಬಿ.ಎಂ. ಹನೀಫ್ ಬೆಂಗಳೂರು, ಇಹ್ಸಾನ್ ಕಾಲೇಜ್ ಪ್ರಾಂಶುಪಾಲ ಹಬೀಬುರ್ರಹ್ಮಾನ್, ಮರ್ಕಝ್ ಸಮಿತಿ ಉಪಾಧ್ಯಕ್ಷ ಹಾಜಿ ಇಸ್ಮಾಯೀಲ್ ಕಿನ್ಯ ಆಗಮಿಸಿದ್ದರು.
ಡಿಕೆಯಸ್ಸಿ ಬೆನ್ನೆಲುಬು, ಹಿತೈಷಿ ಹಾಜಿ ಝಕರಿಯ್ಯಾ ಅಲ್ ಮುಝೈನ್ ಡಿಕೆಯಸ್ಸಿ ವಿಷನ್ 30 ಬಗ್ಗೆ ವಿವರಿಸಿದರು.

ಡಿಕೆಯಸ್ಸಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಸೀದಿ ಹಾಜಿ ಬಹ್ರೈನ್, ಕೋಶಾಧಿಕಾರಿ ದಾವೂದು ಕಜೆಮಾರ್, ದಮ್ಮಾಂ ವಲಯ ಅಧ್ಯಕ್ಷ ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ ,ಶರೀಫ್ ಜೋಕಟ್ಟೆ ಅಲ್ ಮುಝೈನ್, ನಝೀರ್ ಅಲ್ ಫಲಾಹ್, ಅಬ್ದುಸ್ಸಲಾಂ ರಕ್ವಾನೀ, ಇಬ್ರಾಹೀಂ ಕಣ್ಣಂಗಾರ್ ಮಕ್ಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದಫ್ ಸ್ಪರ್ಧೆ ಮತ್ತು ಮಕ್ಕಳ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿ ವಿಜೇತರಿಗೆ ಅತ್ಯಾಕರ್ಷಕ ಬಹುಮಾನ ಹಾಗೂ ಸರ್ಟಿಫಿಕೇಟ್ ಗಳನ್ನು ವಿತರಿಸಲಾಯಿತು.
ಫ್ಯಾಮಿಲಿ ಮುಲಾಖಾತ್ ಅಧ್ಯಕ್ಷ ಕೆ.ಎಚ್.ರಫೀಖ್ ಸೂರಿಂಜೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಇಖ್ಬಾಲ್ ಮಲ್ಲೂರು ಸ್ವಾಗತಿಸಿದರು. ಸಾಹಿಲ್ ಮೂಡಬಿದ್ರೆ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಹಮೀದ್ ಉಳ್ಳಾಲ ಧನ್ಯವಾದಗೈದರು.

ದಫ್ಫ್ ಸ್ಫರ್ಧಾ ವಿಜೇತರು:
ಪ್ರಥಮ: ಕೆಸಿಎಫ್ ದಮ್ಮಾಂ ಝೋನ್
ದ್ವಿತೀಯ: ತುಯೂರೇ ತರ್ಬಿಯಾ, ದಮ್ಮಾಂ
ತೃತೀಯ: ಕೆಸಿಎಫ್ ಜುಬೈಲ್ ಝೋನ್

ಸ್ಪರ್ಧೆಯ ವಿಜೇತರು

ಕಿರಾಅತ್-ಜೂನಿಯರ್: (ಹುಡುಗರು)

I ಮುಹಮ್ಮದ್ ರಾಜಿ ಇಬ್ನ್ ಎಂ.ಜಿ. IQBAL

II ಅಹ್ಮದ್ ರಿಲ್ವಾನ್ ಇಬ್ನ್ ನವಾಜ್

III ಅಮೀರ್ ಅಲಿ ಇಬ್ನ್ ಮುಹಮ್ಮದ್ ಹನೀಫ್

(ಹುಡುಗಿಯರು)

I ರೀಮ್ ಫಾತಿಮಾ ಬಿಂತ್ ಮುಹಮ್ಮದ್ ರಿಜ್ವಾನ್

II ಆಯಿಶಾ ಸುಜಾನಾ ಬಿಂತ್ ಮುಹಮ್ಮದ್ ಹನೀಫ್

III ಸಾರಾ ಶಧಾ ಬಿಂತ್ ಶಫಿಯುಲ್ಲಾ

ಸೀನಿಯರ್-(ಹುಡುಗರು)

I ಮುಹಮ್ಮದ್ ಐಮನ್ ಇಬ್ನ್ ಅಬ್ದುಲ್ ಖಾದರ್

II ಹಸನ್ ನಿಯಾಮ್ ಇಬ್ನ್ ಮುಹಮ್ಮದ್ ಇಸ್ಮಾಯಿಲ್

(ಹುಡುಗಿಯರು)

I ಅಕ್ಷಾ ಫಾತಿಮಾ ಬಿಂತ್ ನವಾಜ್

2. ರಿಧಾ ಫಾತಿಮಾ ಬಿಂತ್ ಎಂ.ಜಿ. IQBAL

3. ಐಜಾ ಬಿಂತ್ ನವಾಜ್

ಇಸ್ಲಾಮಿಕ್ ಹಾಡುಗಳು:

ಹುಡುಗರು (ಜೂನಿಯರ್)

I ಮುಹಮ್ಮದ್ ರಾಜಿ ಇಬ್ನ್ ಇಕ್ಬಾಲ್

2. ಅಮೀರ್ ಅಲಿ ಇಬ್ನ್ M. ಹನೀಫ್

3. ಅಹ್ಮದ್ ರಿಲ್ವಾನ್ ಇಬ್ನ್ ನವಾಜ್

ಹುಡುಗಿಯರು (ಜೂನಿಯರ್)

1. ಫರ್ಶೀನಾ ಬಿಂತ್ ಸಿರಾಜ್

2. ಆಯಿಷಾ ಸುಜಾನಾ ಬಿಂತ್ ಎಂ. ಹನೀಫ್

3. ಹಲೀಮಾ ಲುತೈಫಾ ಬಿನ್ತ್ ಖಲಂದರ್

ಹುಡುಗರು (ಸೀನಿಯರ್)

I ಮುಹಮ್ಮದ್ ಐಮನ್ ಇಬ್ನ್ ಅಬ್ದುಲ್ ಖಾದರ್

II ಹಾಸನ ನಿಯಮ ಇಬ್ನ್ M. ಇಸ್ಮಾಯಿಲ್

III ಹಸನ್ ಮುಹಮ್ಮದ್ ಶೆಹಜಾದ್ ಇಬ್ನ್ M. ಹನೀಫ್

ಇಂಗ್ಲೀಷ್ ಭಾಷಣ:

1. ಅಮನ್ ಅಬ್ದುಲ್ಲಾ ಇಬ್ನ್ ಅಬ್ದುಲ್ ಖಾದರ್

2. ಐಜಾ ಬಿಂತ್ ನವಾಜ್

3. ಅಮೀರ್ ಅಲಿ ಇಬ್ನ್ M.ಹನೀಫ್

error: Content is protected !! Not allowed copy content from janadhvani.com