janadhvani

Kannada Online News Paper

KCF ವತಿಯಿಂದ ಸಮಾಜ ಸೇವಕ ಸಾದಿಕ್ ಕಾಟಿಪಳ್ಳ ರವರಿಗೆ ಗೌರವಾರ್ಪಣೆ

KCF ಮತ್ತು ಹಲವಾರು ದೀನಿ ಸ್ಥಾಪನೆಗಳಿಗೆ ಸಹಾಯ ಸಹಕಾರ ನೀಡುತ್ತಿರುವ ಬುರೈದದ ಯುವ ಉದ್ಯಮಿ ಸಮಾಜ ಸೇವಕ ಮುಹಮ್ಮದ್ ಸಾದಿಕ್ ಕಾಟಿಪಳ್ಳ ಅವರನ್ನು KCF ಅಲ್ ಕಸೀಮ್ ಝೋನ್ ವತಿಯಿಂದ ಬುರೈದ ಸೆಕ್ಟರ್ ನಡೆಸಿದ ರಬೀಹ್ -23 ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ನಡೆಸುತ್ತಿರುವ ಇಹ್ಸಾನ್ ಕರ್ನಾಟಕ ಇದರ ಮರ್ಜಾನ್ ಹಟ್ ಮದರಸ ಯೋಜನೆಗೆ ಒಂದು ಸಂಪೂರ್ಣ ಮದರಸ ತನ್ನ ಮರಣ ಹೊಂದಿದ ತಂದೆಯ ಹೆಸರಿನಲ್ಲಿ ಕೊಡುಗೆ ನೀಡಿದ್ದನ್ನು ಹಾಗು ಹಲವಾರು ಸಹಾಯ ಸಹಕಾರಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ವೇದಿಕೆಯಲ್ಲಿ KCF ಸೌದಿ ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಾಲಿಹ್ ಬೆಳ್ಳಾರೆ, ಸಂಘಟನಾ ಇಲಾಖೆ ಅಧ್ಯಕ್ಷರಾದ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು, ಇಹ್ಸಾನ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಕಣ್ಣಂಗಾರ್ , ಶಿಕ್ಷಣ ಇಲಾಖೆ ಕಾರ್ಯದರ್ಶಿ ಯಾಕೂಬ್ ಸಖಾಫಿ , ಝೋನ್ ಕಾರ್ಯದರ್ಶಿ ಬಷೀರ್ ಕನ್ಯಾನ, ಕೋಶಾಧಿಕಾರಿ ಇರ್ಷಾದ್ ಸಚ್ಚರಿಪೇಟೆ , ಬುರೈದ ಸೆಕ್ಟರ್ ಅಧ್ಯಕ್ಷರಾದ ಮುಸ್ತಫಾ ಲತೀಫಿ, ಕಾರ್ಯದರ್ಶಿ ಬಶೀರ್ ಬನ್ನೂರ್ , ಖಯ್ಯುಮ್ ಜಾಲ್ಸೂರ್,
RSC ನ್ಯಾಷನಲ್ ಫೈನಾನ್ಸ್ ಕಂಟ್ರೋಲರ್ ಡಾ. ನವಾಝ್ ಹಸನಿ ಹಾಜರಿದ್ದರು.

error: Content is protected !! Not allowed copy content from janadhvani.com