ಮಕ್ಕಾ: ರಂಝಾನ್ ತಿಂಗಳಲ್ಲಿ ಮಕ್ಕಾದಲ್ಲಿನ ಪವಿತ್ರ ಮಸೀದಿಯ ಸುತ್ತ ನಿಯಂತ್ರಣ ಏರ್ಪಡಿಸಲಾಗಿದೆ. ಉಮ್ರಾ ಯಾತ್ರಾರ್ಥಿಗಳಿಗೆ ಅನುಕೂಲವಾಗುಂತೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಪವಿತ್ರ ರಂಝಾನ್ ನಲ್ಲಿ ಉಮ್ರಾ ಯಾತ್ರಾರ್ಥಿಗಳ ದೊಡ್ಡ ಪ್ರಮಾಣದ ವಿಪರೀತ ದಟ್ಟಣೆಯನ್ನು ಆಧರಿಸಿ ಈ ನಿರ್ದೇಶ ನೀಡಲಾಗಿದೆ.
ಕಾಬಾದ ಸುತ್ತಲೂ ತ್ವವಾಫ್ (ಮತ್ವಾಫ್) ಪ್ರವೇಶವನ್ನು ಉಮ್ರಾ ಯಾತ್ರಿಗಳಿಗೆ ಮಾತ್ರ ನಿಜಪಡಿಸಲು ಮಕ್ಕಾ ಗವರ್ನರ್ ಖಾಲೀದ್ ಅಲ್-ಫೈಸಲ್ ರಾಜಕುಮಾರ ಆದೇಶ ಹೊರಡಿಸಿದ್ದಾರೆ.
ಮಗ್ರಿಬ್ ನಮಾಜ್ ನಿಂದ ರಾತ್ರಿಯ ತರಾವೀಹ್ ನಮಾಜ್ ತನಕ ಉಮ್ರಾ ಯಾತ್ರಾರ್ಥಿಗಳನ್ನು ಹೊರತುಪಡಿಸಿ ಯಾರೂ ಮತಾಫ್ಗೆ ಪ್ರವೇಶಿಸುವಂತಿಲ್ಲ.ರಂಝಾನ್ ಕೊನೆಯ 10 ರಲ್ಲಿ ಮಗ್ರಿಬ್ ನಮಾಜ್ ನಿಂದ ಮಧ್ಯರಾತ್ರಿಯ ಖಿಯಾಮುಲ್ಲೈಲಿ ನಮಾಜ್ ವರೆಗೆ ಈ ನಿಯಂತ್ರಣ ಉಂಟಾಗಲಿದೆ.
ಉಮ್ರಾ ಹೊರತುಪಡಿಸಿ ಇತರೆ ಕರ್ಮಗಳಿಗಾಗಿ ಬರುವ ಭಕ್ತರು ಮತ್ವಾಫ್ ಹೊರತು ಇತರ ಕಡೆ ಪ್ರಾರ್ಥನೆ ನಡೆಸುವಂತೆ ಗವರ್ನರ್ ಸೂಚಿಸಿದ್ದಾರೆ.ಈ ನಿರ್ಧಾರ ದಿಂದ ಉಮ್ರಾ ಯಾತ್ರಾರ್ಥಿಗಳಿಗೆ ಸುಗಮವಾಗಿ ತಮ್ಮ ಕರ್ಮವನ್ನು ನಿರ್ವಹಿಸಲು ಸಾಧ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ರಂಝಾನಿನ ಕೊನೆಯ ಹತ್ತು ದಿನಗಳಲ್ಲಿ ಇ ಅ ತಿಕಾಫ್ ಕೂರಲು ಇಚ್ಚಿಸುವವರಿಗೆ ಹೊಸ ಅಭಿವೃದ್ಧಿ ಯೋಜನೆಯು ನಡೆಯುತ್ತಿರುವ ಮಸೀದಿಯ ಉತ್ತರ ಭಾಗದಲ್ಲಿ ಅವಕಾಶ ನೀಡಬಹುದೆಂದು ಖಲೀದ್ ಅಲ್ ಫೈಸಲ್ ಹೇಳಿದರು.
ಕಳೆದ ವರ್ಷ ರಂಝಾನ್ ನಲ್ಲಿ ಏರ್ಪಡಿಸಲಾದ ನಿಯಂತ್ರಣವು ಯಶಸ್ವಿಯಾದ ಕಾರಣ ಈ ವರ್ಷವೂ ನಿಯಂತ್ರಣವನ್ನು ಮುಂದುವರಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ