ದಮ್ಮಾಮ್: ಕಳೆದ ಶನಿವಾರದಂದು ಅಲ್ ಅಹ್ಸಾ ಸಮೀಪ ಸಂಭವಿಸಿದ ಕಾರು ಅಪಘಾತದಲ್ಲಿ ಮರಣ ಹೊಂದಿದ ರಿಝ್ವಾನ್ ಹಳೆಯಂಗಡಿ ಮತ್ತು ನಾಸಿರ್ ಹುಸೈನ್ ಹಾಗೂ ಕೃಷ್ಣಾಪುರದ ಅಕಿಲ್ ನುಅ್ ಮಾನ್ ರವರ ಮಯ್ಯತ್ ದಫನ ಕಾರ್ಯವು ಇಂದು ಇಶಾ ನಮಾಝ್ ಬಳಿಕ ಜುಬೈಲ್ KFC ಮಸ್ಜಿದ್ ಬಳಿ ನಡೆಯಿತು.


ಮೃತ ಯುವಕರು ಕೆಲಸ ನಿರ್ವಹಿಸುತ್ತಿದ್ದ SAQCO ಕಂಪೆನಿಯ ಮಾಲಕರಾದ ಬಶೀರ್ ಸಾಗರ್ ಅವರು ತನ್ನ ಸ್ವಂತ ಸಹೋದರರ ಮಯ್ಯತ್ ಪರಿಪಾಲನೆಗೆ ಸಹಕರಿಸಿದಂತೆ ಸಕ್ರಿಯರಾಗಿದ್ದರು. ಕಂಪೆನಿಯ ಸಹ ಉದ್ಯೋಗಸ್ಥರು ಮತ್ತು ಗೆಳೆಯರು ಸಹಿತ ನೂರಾರು ಮಂದಿ ಆಗಮಿಸಿ, ಮೃತ ಸಹೋದರರ ಜನಾಝವನ್ನು ದರ್ಶಿಸಿದರು. ಬಳಿಕ ಮಗ್ರಿಬ್ ಇಶಾ ನಮಾಝಿನ ನಡುವೆ ಜುಬೈಲ್ KFC ಬಳಿಯ ಜನಾಝ ಮಸೀದಿಯ ಬಳಿ ದಫನ ಕಾರ್ಯ ನೆರವೇರಿಸಲಾಯಿತು.

ಮೃತ ಯುವಕರ ಅಗಲಿಕೆಗಾಗಿ ಮಾಜಿ ಶಾಸಕರಾದ ಮೊಯ್ದಿನ್ ಬಾವಾ, ಕೃಷ್ಣಾಪುರ ಜಮಾಅತ್ ಅಧ್ಯಕ್ಷರಾದ ಜನಾಬ್ ಬಿ ಮಮ್ತಾಜ್ ಅಲಿ ಹಾಗೂ ವಖ್ಫ್ ಅಧ್ಯಕ್ಷರಾದ ಶಾಫಿ ಸಅದಿ ಅವರು ಸಂತಾಪವನ್ನು ಸೂಚಿಸಿದ್ದಾರೆ. ಮೃತರ ಮಗ್ಫಿರತ್ ಮತ್ತು ಮರ್ಹಮತ್ ಗಾಗಿ ಪ್ರತ್ಯೇಕ ದುಆ ನಡೆಸುವಂತೆ ಮೃತರ ಕುಟುಂಬಸ್ಥರು ವಿನಂತಿಸಿದ್ದಾರೆ.
ಕಳೆದ ಶನಿವಾರದಂದು ಕೆಲಸಕ್ಕೆಂದು ಸಂಚರಿಸುತ್ತಿದ್ದ ಕಾರಿಗೆ ಒಂಟೆಯೊಂದು ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಹಳೆಯಂಗಡಿ ಕದಿಕೆಯ ರಿಝ್ವಾನ್, ಕೃಷ್ಣಾಪುರದ ಅಕೀಲ್, ನಾಸಿರ್ ಹಾಗೂ ಬಾಂಗ್ಲಾದೇಶದ ಶಿಹಾಬ್ ಎಂಬ ನಾಲ್ವರು ಯುವಕರು ಮೃತಪಟ್ಟಿದ್ದರು.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ