janadhvani

Kannada Online News Paper

ಶಿವಮೊಗ್ಗ :SMA ವತಿಯಿಂದ ನೂತನ ಮದ್ರಸಕ್ಕೆ ಶಿಲಾನ್ಯಾಸ

ಮಂಗಳೂರು : ಸುನ್ನೀ ಮೆನೇಜ್ ಮೆಂಟ್ ಅಸೋಸಿಯೇಷನ್ ರಾಜ್ಯ ಸಮಿತಿಯ ವತಿಯಿಂದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ರೀಜಿನಲ್ ಗೊಳಪಟ್ಟ ಹೊಸಳ್ಳಿಯಲ್ಲಿ ನಿರ್ಮಿಸಲು ಉದ್ದೇಶಿಸಿದ ನೂತನ ಮದ್ರಸ ಕಟ್ಟಡಕ್ಕೆ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಕೂರ ತಂಙ್ಙಳ್ ರವರಿಂದ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎಂ.ಎ ರಾಜ್ಯಾಧ್ಯಕ್ಷರಾದ ಉಜಿರೆ ಸಯ್ಯಿದ್ ಇಸ್ಮಾಯೀಲ್ ಅಲ್-ಹಾದೀ ತಂಙ್ಙಳ್ ಮದನಿಯವರು ವಹಿಸಿದ್ದರು. ಕರ್ನಾಟಕ ಸರ್ಕಾರದ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಎನ್.ಕೆ.ಎಂ.ಶಾಫೀ ಸಅದಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುರ್ರಹ್ಮಾನ್ ಮದನಿಯವರು ಪ್ರಾಸ್ತಾವಿಕ ಭಾಷಣ ಮಾಡಿದರು. ರಾಜ್ಯ ಕ್ಷೇಮ ಕಾರ್ಯ ವಿಭಾಗದ ಕಾರ್ಯದರ್ಶಿ ಮೂಡಡ್ಕ ಅಶ್ರಫ್ ಸಖಾಫಿ ಮುಖ್ಯ ಪ್ರಭಾಷಣ ನಡೆಸಿದರು.

ಎಸ್.ಎಂ.ಎ. ರಾಜ್ಯ ಕೋಶಾಧಿಕಾರಿ ಕೊಡುಂಗಾಯಿ ಅಬ್ದುಲ್ ಹಮೀದ್ ಹಾಜಿ, ಶಿವಮೊಗ್ಗ ಜಿಲ್ಲಾಧ್ಯಕ್ಷ ಕಡ್ತೂರು ಇಬ್ರಾಹೀಂ ಹಾಜಿ ಶುಭಾಶಂಸಗೈದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಬಿ.ಎಂ. ಸಾದಿಕ್ ಮಲೆಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಸಯ್ಯಿದ್ ಭಾಷಾ ತಂಙ್ಙಳ್ ಸಾಗರ, ರಾಜ್ಯ ಕ್ಷೇಮ ಕಾರ್ಯ ವಿಭಾಗದ ಅಧ್ಯಕ್ಷ ಎ.ಕೆ.ಅಹ್ಮದ್, ಟ್ರೈನಿಂಗ್ ವಿಭಾಗದ ಅಧ್ಯಕ್ಷ ಬೆಜ್ಜವಳ್ಳಿ ಹನೀಫ್, ಪಬ್ಲಿಕ್ ರಿಲೇಷನ್ ಕಾರ್ಯದರ್ಶಿ ಪಿ.ಎಂ.ಮುಹಮ್ಮದ್ ಮದನಿ ಪೂಡಲ್, ಎಸ್.ಎಂ.ಎ. ದ.ಕ. ವೆಸ್ಟ್ ಜಿಲ್ಲಾಧ್ಯಕ್ಷ ಅಡ್ಯಾರ್ ಪದವು ಇಸ್ಮಾಯೀಲ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಎಸ್.ಎಂ.ಎ. ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಮುಸ್ಲಿಯಾರ್ ಸ್ವಾಗತಿಸಿ ಕೊನೆಯಲ್ಲಿ ತೀರ್ಥಹಳ್ಳಿ ರೀಜಿನಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಮದನಿ ಕಡ್ತೂರು ಧನ್ಯವಾದ ಸಮರ್ಪಿಸಿದರು.

error: Content is protected !! Not allowed copy content from janadhvani.com