janadhvani

Kannada Online News Paper

ಸಕಲೇಶಪುರ ಅಯ್ಯೂಬ್ ಖಾನ್ ರಿಯಾದ್ ನಲ್ಲಿ ನಿಧನ- ಅಂತ್ಯಕ್ರಿಯೆಗೆ ಕೆಸಿಎಫ್ ಸಹಕಾರ

ಸೌದಿ ಅರೇಬಿಯಾ : ರಿಯಾದ್ ನಲ್ಲಿ ಕಳೆದ ಎರಡು ವಾರದ ಹಿಂದೆ ಮೃತಪಟ್ಟ ಸಕಲೇಶಪುರ ನಿವಾಸಿ ಅಯ್ಯೂಬ್ ಖಾನ್ ರವರ ಅಂತ್ಯಕ್ರಿಯೆಯು ಡಿಸೆಂಬರ್ 4 ಆದಿತ್ಯವಾರದಂದು ನಸೀಮಿನ ಖಬರ್ ಸ್ಥಾನದಲ್ಲಿ ಕುಟುಂಬಸ್ಥರು, ಸ್ನೇಹಿತರು ಮತ್ತು ಕೆಸಿಎಫ್ ಸದಸ್ಯರ ಸಮ್ಮುಖದಲ್ಲಿ ನಡೆಯಿತು.

ಮೃತರ ಅಂತ್ಯಸಂಸ್ಕಾರಕ್ಕೆ ಬೇಕಾದ ಎಲ್ಲಾ ದಾಖಲೆ ಪತ್ರಗಳು, ರಾಯಭಾರಿ ಕಛೇರಿಗೆ ಬೇಕಾದ ಕಡತಗಳು ಹಾಗೂ ಇನ್ನಿತರ ಎಲ್ಲಾ ವ್ಯವಸ್ಥೆಗಳನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ನಾಯಕರ ನೇತೃತ್ವದಲ್ಲಿ ಸರಿಪಡಿಸಿದ್ದರು.

ಈ ಪುಣ್ಯ ಕಾರ್ಯದಲ್ಲಿ ಕೈ ಜೋಡಿಸಿ ಸಹಕರಿಸಿದ ರಿಯಾದ್ ಝೋನ್ ಸಾಂತ್ವನ ಇಲಾಖೆ ಅಧ್ಯಕ್ಷರಾದ ಮಜೀದ್ ವಿಟ್ಲ, ಕಾರ್ಯದರ್ಶಿ ಅಶ್ರಫ್ ಕೆಎಮ್ಮೆಸ್, ದಮ್ಮಾಮ್ ಸಾಂತ್ವನ ಇಲಾಖೆ ಅಧ್ಯಕ್ಷರಾದ ಬಾಷಾ ಗಂಗಾವಳಿ, ಇಬ್ರಾಹಿಂ ಬಾಯ್ ಹಾಗೂ ಕೆಸಿಎಫ್ ನೇತಾರರಾದ ಫಾರೂಕ್ ಪಾಣೆಮಂಗಳೂರು, ಸಿದ್ದೀಕ್ ಮದನಿ, ಶಿಹಾಬುದ್ದೀನ್ ಹಳೆಯಂಗಡಿ, ಅಝೀಝ್ ಮೂಡಿಗೆರೆ ಮತ್ತು ಸಹಕರಿಸಿದ ಕುಟುಂಬಸ್ಥರು, ಸ್ನೇಹಿತರು ಎಲ್ಲರಿಗೂ ಕೆಸಿಎಫ್ ರಿಯಾದ್ ಝೋನ್ ಸಾಂತ್ವನ ಇಲಾಖೆಯು ಎಲ್ಲಾ ವಿಧದ ಕೃತಜ್ಞತೆ ಸಲ್ಲಿಸಿರುವುದಾಗಿ ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೃತರು ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

error: Content is protected !! Not allowed copy content from janadhvani.com