ಸೌದಿ ಅರೇಬಿಯಾ:- ಜಿದ್ದಾದಲ್ಲಿ ಮೃತಪಟ್ಟ ಜಾವೀದ್ ಬಂಕಾಪುರ ರವರ ಮೂರುವರೆ ತಿಂಗಳ ಮಗು ಮೊಹಮ್ಮದ್ ಆರೀಝ್ ರವರ ಅಂತ್ಯಕ್ರಿಯೆಯು ಡಿಸೆಂಬರ್ 5 ಸೋಮವಾರ ಜಿದ್ದಾದ ಬಾಬ್ ಮಕ್ಕಾದಲ್ಲಿರುವ ಮಖ್ಬರ ಅಲ್ ಅಸದ್ ನಲ್ಲಿ ಕುಟುಂಬಸ್ತರು, ಸ್ನೇಹಿತರು ಹಾಗೂ ಕೆಸಿಎಫ್ ನ ನೇತಾರರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ನಡೆಯಿತು.
ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಡಿಸೆಂಬರ್ 04 ರಂದು ಮೃತಪಟ್ಟಿತು.
ಮರಣ ಹೊಂದಿದ ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತರಾದ ಕೆಸಿಎಫ್ ಜಿದ್ದಾ ಝೋನ್ ಸಾಂತ್ವನ ಇಲಾಖೆಯ ನೇತಾರರಾದ ನಾಸಿರ್ ಹೆಚ್ಕಲ್, ಮನ್ಸೂರ್ ಕಾಟಿಪಳ್ಳ ಹಾಗೂ ಮದೀನಾ ಝೋನ್ ನೇತಾರರಾದ ರಝಾಕ್ ಉಳ್ಳಾಲ ರವರು ಮೃತರ ಅಂತ್ಯ ಸಂಸ್ಕಾರಕ್ಕೆ ಬೇಕಾದ ದಾಖಲೆ ಪತ್ರಗಳು, ಭಾರತೀಯ ರಾಯಭಾರಿ ಕಚೇರಿಗೆ ಬೇಕಾದ ಕಡತಗಳು ಹಾಗೂ ಇನ್ನಿತರ ಎಲ್ಲಾ ವ್ಯವಸ್ಥೆಯನ್ನು ತ್ವರಿತ ಗತಿಯಲ್ಲಿ ಸಿದ್ಧಪಡಿಸಿ ಮಯ್ಯತ್ ದಫನ ಕಾರ್ಯ ಶೀಘ್ರಗತಿಯಲ್ಲಿ ನಡೆಸಲು ಸಹಕರಿಸಿದರು.
ಮಯ್ಯತ್ ದಫನ ಕಾರ್ಯದಲ್ಲಿ ಶರಫಿಯ್ಯಾ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಅಬ್ದುಲ್ ರಹ್ಮಾನ್ ತಂಙಲ್, ರಫೀಕ್ ಯರ್ಮಾಲ್, ಶಬೀರ್ ಅರಶಿನಮಕ್ಕಿ, ಫಾರೂಕ್ ಬಂಟ್ವಾಳ ಸೇರಿದಂತೆ ಕೆಸಿಎಫ್ ಕಾರ್ಯಕರ್ತರು ಹಾಗೂ ಹಿತೈಷಿಗಳು ಭಾಗವಹಿಸಿದ್ದರು.
Masha Allah appreciated the efforts done by KCF team. Allah give more strength to your team.