ಮನಾಮ: ಬಹ್ರೇನ್ಗೆ ಸಂದರ್ಶಕರ ವೀಸಾದಲ್ಲಿ(Visit Visa) ಆಗಮಿಸುವವರು, ಪ್ರಯಾಣದ ಮುಂಚಿತವಾಗಿ ಮಾರ್ಗಸೂಚಿಗಳ ಪ್ರಕಾರವಿರುವ ಅಗತ್ಯ ದಾಖಲೆಗಳನ್ನ ಹೊಂದಿರುವುದಾಗಿ ಖಚಿತಪಡಿಸಿಕೊಳ್ಳುವಂತೆ ಭಾರತದ ರಾಯಭಾರ ಕಚೇರಿಯು ಸಲಹೆ ನೀಡಿದೆ.
ಬಹ್ರೇನ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ನಿಯಮಗಳ ಕುರಿತು ಅಧಿಕಾರಿಗಳು ಮಾರ್ಗದರ್ಶನ ನೀಡಿರುವ ಹಿನ್ನೆಲೆಯಲ್ಲಿ ರಾಯಭಾರ ಕಚೇರಿಯಿಂದ ಪ್ರಕಟಣೆ ಬಂದಿದೆ.
ಸಂದರ್ಶಕ ವೀಸಾದಲ್ಲಿ ಆಗಮಿಸಿ, ವಿಮಾನ ನಿಲ್ದಾಣದಿಂದ ಸ್ವದೇಶಕ್ಕೆ ಮರಳುವಂತಹಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಬಹ್ರೇನ್ ವಿಮಾನ ನಿಲ್ದಾಣ ಕಂಪನಿಯು ನಿಯಮವನ್ನು ಬಿಗಿಗೊಳಿಸಿದ ಕಾರಣ ಭಾರತೀಯ ರಾಯಭಾರ ಕಚೇರಿಯು ಸೂಚನೆಯನ್ನು ನೀಡಿದೆ.
ವಿಸಿಟ್ ವೀಸಾದಲ್ಲಿ ಆಗಮಿಸುವವರು ಪಾಲಿಸಬೇಕಾದ ನಿಯಮಗಳ ಬಗ್ಗೆ ಗಲ್ಫ್ ಏರ್(Gulf Air) ನಿನ್ನೆ ಟ್ರಾವಲ್ ಏಜೆನ್ಸಿಗಳಿಗೆ ಸುತ್ತೋಲೆಯನ್ನು ನೀಡಿದೆ.
ಷರತ್ತುಗಳನ್ನು ಪಾಲಿಸದೆ ವಿವಿಧ ದೇಶಗಳಿಂದ ಬಂದ 100 ಕ್ಕೂ ಹೆಚ್ಚು ಪ್ರಯಾಣಿಕರನ್ನು ಕಳೆದ ದಿನ ವಿಮಾನ ನಿಲ್ದಾಣದಿಂದ ವಾಪಸ್ ಕಳುಹಿಸಲಾಗಿತ್ತು. ಇತ್ತೀಚೆಗೆ ಇಂತಹ ಘಟನೆಗಳು ಮರುಕಳಿಸುತ್ತಿರುವುದರಿಂದ ನಿಯಮಗಳನ್ನು ಬಿಗಿಗೊಳಿಸಲಾಗಿದೆ.
ಬಹ್ರೇನ್ನಲ್ಲಿ ಬಳಸಬಹುದಾದ ಅನುಮೋದಿತ ಕ್ರೆಡಿಟ್ ಕಾರ್ಡ್ ಅನ್ನು ಹೊಂದಿರುವುದು ಅಥವಾ ದಿನಕ್ಕೆ ಕನಿಷ್ಠ 50 ದಿನಾರ್ಗಳನ್ನು ಹೊಂದಿರುವುದು ಮುಖ್ಯ ಅವಶ್ಯಕತೆಯಾಗಿದೆ. ಇದರ ಹೊರತಾಗಿ, ಹೋಟೆಲ್ ಬುಕಿಂಗ್ ದೃಢೀಕರಣ ಅಥವಾ ಬಹ್ರೇನ್ನಲ್ಲಿರುವ ಪ್ರಾಯೋಜಕರ ನಿವಾಸದ ವಿದ್ಯುತ್ ಬಿಲ್, ಕವರಿಂಗ್ ಲೆಟರ್ ಮತ್ತು ಸಿಪಿಆರ್ ರೀಡರ್ ಪ್ರತಿಯೊಂದಿಗೆ ಬಾಡಿಗೆ ಒಪ್ಪಂದದ ದಾಖಲೆ ಹಾಗೂ ರಿಟರ್ನ್ ಟಿಕೆಟ್ ಹೊಂದಿರಬೇಕು ಎಂಬುದಾಗಿದೆ ಸಂದರ್ಶಕರ ವೀಸಾ ಹೊಂದಿರುವವರು ಅನುಸರಿಸಬೇಕಾದ ಇನ್ನೊಂದು ಷರತ್ತು.
ಗಲ್ಫ್ ಏರ್ನ ರಿಟರ್ನ್ ಟಿಕೆಟ್ ಅಲ್ಲದಿದ್ದರೆ, ಬಹ್ರೇನ್ನಲ್ಲಿ ಎಮಿಗ್ರೇಷನ್ ತಪಾಸಣೆಯ ಸಮಯದಲ್ಲಿ ಮಾನ್ಯತೆ ಇರುವ ಟಿಕೆಟ್ ಸಂಖ್ಯೆಯನ್ನು ಹೊಂದಿರಬೇಕು.
















ಇನ್ನಷ್ಟು ಸುದ್ದಿಗಳು
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ