janadhvani

Kannada Online News Paper

ಸೆಪ್ಟಂಬರ್ 29 ಕ್ಕೆ ಕೆ.ಸಿ.ಎಫ್ ಬಹರೈನ್ ವತಿಯಿಂದ ಬೃಹತ್ ಮೀಲಾದ್ ಕಾನ್ಫರೆನ್ಸ್

ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಷನ್ (ಕೆಸಿಎಫ್) ಬಹರೈನ್ ವತಿಯಿಂದ ಸೆಪ್ಟೆಂಬರ್ 29-2022 ಗುರುವಾರ ರಾತ್ರಿ 8 ಗಂಟೆಗೆ ಪಾಕಿಸ್ತಾನ ಕ್ಲಬ್ ಮೈದಾನದಲ್ಲಿ ಬೃಹತ್ ಮೀಲಾದ್ ಸಮಾವೇಶ ನಡೆಯಲಿದೆ.

ನೂರುಸ್ಸಾದಾತ್ ಅಸ್ಸಯ್ಯಿದ್ ಬಾಯಾರ್ ತಂಙಳ್ ಮೀಲಾದ್ ಕ್ಯಾಂಪೈನ್ ಅನ್ನು ಉದ್ಘಾಟಿಸಿದ್ದಾರೆ.

ಕಾರ್ಯಕ್ರಮದಲ್ಲಿ ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಉಸ್ತಾದ್ ಮುಖ್ಯ ಭಾಷಣ ಮಾಡಲಿರುವರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಯ್ಯಿದ್ ಅಲೀ ಬಾಫಖಿ ತಂಙಳ್ ರವರು ಆಗಮಿಸಲಿದ್ದಾರೆ. ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸಂಘಟನಾ ನೇತಾರರು, ಉಲಮಾ, ಸಾದಾತ್ಗಳು ಮತ್ತು ಸಾಮಾಜಿಕ, ರಾಜಕೀಯ ನೇತಾರರು ಕಾರ್ಯಕ್ರಮದಲ್ಲಿ ಬಾಗವಹಿಸಲಿರುವರು ಎಂದು ಕೆಸಿಎಫ್ ಬಹರೈನ್ ಮೀಲಾದ್ ಸ್ವಾಗತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರವಾದಿ ಮುಹಮ್ಮದ್( ﷺِ )ಮಾನವೀಯತೆಯ ಮಹಾನಾಯಕ ಎಂಬ ಶೀರ್ಷಿಕೆಯಲ್ಲಿ ಮೀಲಾದ್ ಕ್ಯಾಂಪೇನ್ ನಡೆಯಲಿದ್ದು, ನೂರುಸ್ಸಾದಾತ್ ಸಯ್ಯಿದ್ ಬಾಯಾರ್ ತಂಙಳ್ ಮೀಲಾದ್ ಕ್ಯಾಂಪೈನ್ ಅನ್ನು ಉದ್ಘಾಟಿಸಲಿದ್ದಾರೆ.

ಕ್ಯಾಂಪೇನ್ ಭಾಗವಾಗಿ ಮೌಲಿದ್ ಜಲ್ಸಾಗಳು, ಅಹ್ಲನ್ ಯಾ ರಬೀಅ್ ಕಾರ್ಯಕ್ರಮ, ಪ್ರಭಾತ ಮೌಲಿದ್, ಮಹಿಳಾ ತರಗತಿಗಳು, ಪ್ರವಾದಿ ಜೀವನ ಚರಿತ್ರೆಯ ಪುಸ್ತಕ ವಿತರಣೆ ,ಸೌಹಾರ್ದ ಕೂಟ ಸೇರಿದಂತೆ ವೈವಿದ್ಯಮಯವಾದ ಕಾರ್ಯಕ್ರಮಗಳನ್ನು ಕೆ.ಸಿ.ಎಫ್ ಬಹರೈನ್ ಹಮ್ಮಿಕೊಂಡಿದೆ.