janadhvani

Kannada Online News Paper

ಕಾರ್ಮಿಕ ದಿನಾಚರಣೆಯ ಭಾಗವಾಗಿ ಕೆಸಿಎಫ್ ಬಹರೈನ್ ವತಿಯಿಂದ ಶುಚಿತ್ವ ಅಭಿಯಾನ

ಕೆ‌ಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಶುಚಿತ್ವ ಅಭಿಯಾನ ಕಾರ್ಯಕ್ರಮವು  ದಿನಾಂಕ 02/05/2025 ರಂದು ಶುಕ್ರವಾರ ಬೆಳಿಗ್ಗೆ 7:30 ರಿಂದ 9:30 ರವರೆಗೆ ಮುಹರ್ರಕ್ ಗವರ್ನರ್ ಸನ್ಮಾನ್ಯ ಸಲ್ಮಾನ್ ಬಿನ್ ಈಶಾ ಬಿನ್ ಹಿಂದಿ ಅಲ್ ಮನ್ನಾಯಿ ಅವರ ಸಹಯೋಗದಲ್ಲಿ ಗೌಸ್ ಕೊರ್ನೀಚ್ ಸಮುದ್ರ ತೀರದಲ್ಲಿ  ಅತ್ಯಂತ ಯಶಸ್ವಿಯಾಗಿ ನಡೆಯಿತು. ಕಾರ್ಮಿಕ ದಿನಾಚರಣೆಯ ಭಾಗವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಸಮಿತಿ ಕಾರ್ಯಕಾರಿ ಸಮಿತಿ  ಸದಸ್ಯರಾದ ಹನೀಫ್ ಉಸ್ತಾದ್ ದುಆ ಮಾಡುವ ಮೂಲಕ  ಚಾಲನೆ ನೀಡಿಲಾಯಿತು.

ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಚಿತ್ವವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸ್ವಚ್ಛತೆಗೆ ಇಸ್ಲಾಂ ಅತ್ಯಂತ ಮಹತ್ವವನ್ನು ನೀಡಿದೆ. ಈ ನಿಟ್ಟಿನಲ್ಲಿ ಕೆಸಿಎಫ್ ಕಳೆದ 5 ವರ್ಷಗಳಿಂದ ಶುಚಿತ್ವ ಅಭಿಯಾನ ಕಾರ್ಯಕ್ರಮವನ್ನು  ನಡೆಸಿಕೊಂಡು  ಬರುತ್ತಿದ್ದು ಮುಹರ್ರಕ್ ಗವರ್ನರೇಟ್’ನಿಂದ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ KMCC ನಾಯಕ ಶಾಫಿ ಪಾರಕಟ್ಟೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಹರ್ರಕ್ ಗವರ್ನರ್ ಕಾರ್ಯದರ್ಶಿ ಹಾಲ, ಹಾಮದ್, ಹಿಲಾಲ್ ಹಾಸ್ಪಿಟಲ್ ಮಾರ್ಕೆಟಿಂಗ್ ಮ್ಯಾನೇಜರ್ ಜೀಜೊ ಗಣ್ಯ ಉಪಸ್ಥಿತರಿದ್ದರು.

ಕೆಸಿಎಫ್ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುಹಾಝ್ ಉಜಿರೆ, ಸಾಂತ್ವನ ಇಲಾಖೆ ಅಧ್ಯಕ್ಷರಾದ ರಝಾಕ್ ಆನೆಕಲ್, ಕಾರ್ಯದರ್ಶಿ ಅಶ್ರಫ್ ಕಿನ್ಯ, ಸಂಘಟನಾ ಇಲಾಖೆ ಅಧ್ಯಕ್ಷರಾದ ಮನ್ಸೂರ್ ಬೆಳ್ಮ, ಕಾರ್ಯದರ್ಶಿ ಸೂಫಿ ಪೈಂಬಚ್ಚಾಲ್, ಇಹ್ಸಾನ್ ಅಧ್ಯಕ್ಷರಾದ ನಝೀರ್ ಹಾಜಿ ದೇರಳಕಟ್ಟೆ, ಕಾರ್ಯದರ್ಶಿ ಮಜೀದ್ ಝುಹ್ರಿ, ಶಿಕ್ಷಣ ಇಲಾಖೆ ಅಧ್ಯಕ್ಷರಾದ ಸುಹೈಲ್ ಬಿಸಿ ರೋಡ್, ಕಾರ್ಯದರ್ಶಿ ಅಶ್ರಫ್ ರೆಂಜಾಡಿ, ಆಡಳಿತ ಇಲಾಖೆ ಅಧ್ಯಕ್ಷರಾದ ಮೂಸಾ ಪೈಂಬಚ್ಚಾಲ್, ಕಾರ್ಯದರ್ಶಿ ಸಿದ್ದೀಕ್ ಎಣ್ಮೂರು, ಪಬ್ಲಿಕೇಶನ್ ಕಾರ್ಯದರ್ಶಿ ಫಝಲ್ ಸುರತ್ಕಲ್, ವೃತ್ತಿಪರ ಇಲಾಖೆ ಅಧ್ಯಕ್ಷರಾದ ಲತೀಫ್ ಪೆರೋಲಿ, ಕಾರ್ಯದರ್ಶಿ ತೌಫೀಖ್ ಬೆಳ್ತಂಗಡಿ, ಹಾಗೂ ರಾಷ್ಟ್ರೀಯ ಸಮಿತಿ, ಝೋನಲ್ ಸೆಕ್ಟರುಗಳ ನಾಯಕರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕೆಸಿಎಫ್ ಐಸಿ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖಲಂದರ್ ಉಸ್ತಾದ್ ಕೆಸಿಎಫ್’ನ ಕಾರ್ಯಚಟುವಟಿಕೆಗಳ ವಿವರಣೆಯನ್ನು ಕಾರ್ಯಕರ್ತರಿಗೆ ನೀಡಿದರು. ಭಾಗವಹಿಸಿದ ಎಲ್ಲರಿಗೂ ವಿಶೇಷ ಪಾರಿದೋಷಕವನ್ನು ನೀಡಲಾಯಿತು. ಸ್ವಾದಿಷ್ಟವಾದ ಬೆಳಗ್ಗಿನ ಉಪಹಾರವನ್ನು ಏರ್ಪಡಿಸಲಾಗಿತ್ತು.