janadhvani

Kannada Online News Paper

ಎಸ್‌ವೈಎಸ್ ನೇರಳಕಟ್ಟೆ: ತಾಜುಲ್ ಫುಖಹಾಅ್ ದರ್ಸ್ ಹಾಗೂ ದಾರುಲ್ ಖುರ್‌ಆನ್ ತರಗತಿಗೆ ಚಾಲನೆ

ಮಾಣಿ : ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ರಿ.) ನೇರಳಕಟ್ಟೆ ಬ್ರಾಂಚ್ ವತಿಯಿಂದ ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ. ಪಿ. ಉಸ್ತಾದರ ಇಜಾಝತ್ ಪ್ರಕಾರ ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ಹಾಗೂ ಎಸ್‌ವೈಎಸ್ ರಾಜ್ಯ ಸಮಿತಿಯ ನಿರ್ದೇಶನದಂತೆ ಪ್ರತಿ ಬ್ರಾಂಚುಗಳಲ್ಲಿ ಪುರಷರಿಗಾಗಿ ತಾಜುಲ್ ಫುಖಹಾ ದರ್ಸ್ ಮತ್ತು ಮಹಿಳೆಯರಿಗಾಗಿ ದಾರುಲ್ ಖುರ್‌ಆನ್ ತರಗತಿ ಇದರ ಚಾಲನಾ ಸಮಾರಂಭವು ಎಸ್‌ವೈಎಸ್ ರಾಜ್ಯ ಕೌನ್ಸಿಲರಾದ ಖಾಸಿಂ ಹಾಜಿ ಪರ್ಲೋಟುರವರ ನಿವಾಸದಲ್ಲಿ ದಿನಾಂಕ11.07.2022 ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ವೈಎಸ್ ನೇರಳಕಟ್ಟೆ ಬ್ರಾಂಚ್ ಅಧ್ಯಕ್ಷರಾದ ಮುಹಮ್ಮದ್ ನಾಸೀರ್ ಸ‌ಅದಿರವರು ವಹಿಸಿದರು. ಎಸ್‌ವೈಎಸ್ ನೇರಳಕಟ್ಟೆ ಬ್ರಾಂಚಿನ ಗೌರವ ಸಲಹೆಗಾರರಾದ ಅಹ್ಮದ್ ಮದನಿ ಉಸ್ತಾದರು ಮಹ್ಳರತುಲ್ ಬದ್ರಿಯಾ ಮಜ್ಲಿಸಿಗೆ ನೇತೃತ್ವ ವಹಿಸಿ, ತಾಜುಲ್ ಫುಖಹಾ ದರ್ಸಿಗೆ ಚಾಲನೆ ನೀಡಿದರು.

ಎಸ್‌ವೈಎಸ್ ನೇರಳಕಟ್ಟೆ ಬ್ರಾಂಚ್ ದ‌ಅ್‌ವಾ ಕಾರ್ಯದರ್ಶಿ ಹುಸೈನ್ ಮದನಿ ಉಸ್ತಾದರು ದಾರುಲ್ ಖುರ್‌ಆನ್ ತರಗತಿಗೆ ಚಾಲನೆ ನೀಡಿ ಮಾತನಾಡಿ ಖುರ್‌ಆನ್ ನಿನ ಮಹತ್ವವನ್ನು ವಿವರಿಸಿದರು. ದ.ಕ.ಈಸ್ಟ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಿಳಪದವುರವರು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಎಸ್‌ವೈಎಸ್ ಈಸ್ಟ್ ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು, ಜಿಲ್ಲಾ ಮಾದ್ಯಮ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರು, ಮಾಣಿ ಸೆಂಟರ್ ಉಪಾಧ್ಯಕ್ಷ ಯೂಸುಫ್ ಹಾಜಿ ಸೂರಿಕುಮೇರ್, ಸೆಂಟರ್ ಕೋಶಾಧಿಕಾರಿ ದಾವೂದ್ ಕಲ್ಲಡ್ಕ, ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ಹಬೀಬ್ ಶೇರಾ-ಬುಡೋಳಿ, ಸಾಮಾಜಿಕ ಕಾರ್ಯದರ್ಶಿ ಅಬ್ಬಾಸ್ ಗಡಿಯಾರ, ಸದಸ್ಯರಾದ ಹೈದರ್ ಸಖಾಫಿ ಶೇರಾ-ಬುಡೋಳಿ, ಖಾಸಿಂ ಪಾಟ್ರಕೋಡಿ, ಶಾಹುಲ್ ಹಮೀದ್ ಪರ್ಲೋಟು, ಮುಹಮ್ಮದ್ ಮಿತ್ತೂರು, ಸೆಂಟರ್ ಕೌನ್ಸಿಲರಾದ ಜಲೀಲ್ ಮುಸ್ಲಿಯಾರ್ ಶೇರಾ-ಬುಡೋಳಿ, ಎಸ್‌ವೈಎಸ್ ಮಿತ್ತೂರು ಬ್ರಾಂಚ್ ಅಧ್ಯಕ್ಷರಾದ ಸಿದ್ದೀಖ್ ಸ‌ಅದಿ ಮಿತ್ತೂರು, ಹಿರಿಯ ವಿದ್ವಾಂಸರಾದ ಇಸ್ಮಾಯಿಲ್ ಮದನಿ, ಅಬ್ದುಲ್ ಖಾದರ್ ಮದನಿ, ಎಸ್ಸೆಸ್ಸೆಫ್ ವೆಸ್ಟ್ ಜಿಲ್ಲಾ ಸದಸ್ಯರಾದ ಇಬ್ರಾಹಿಂ ಅಹ್ಸನಿ ಮಂಜನಾಡಿ, ಎಸ್ಸೆಸ್ಸೆಫ್ ನೇರಳಕಟ್ಟೆ ಯುನಿಟ್ ಅಧ್ಯಕ್ಷರಾದ ಮುಹಮ್ಮದ್ ಇರ್ಷಾದ್ ಸ‌ಅದಿ ಕಾಪು, ನಾಯಕರಾದ ಇಸ್ಮಾಯಿಲ್ ಪರ್ಲೋಟು, ಸಿದ್ದೀಖ್ ಪರ್ಲೋಟು, ಉಮರ್ ಶಾಫಿ ಪಂತಡ್ಕ, ಅಬ್ದುರ್ರಝ್ಝಾಕ್ ಗಡಿಯಾರ, ಅಬ್ದುಲ್ ಲತೀಫ್ ಪಂತಡ್ಕ ಮೊದಲಾದವರು ಉಪಸ್ಥಿತರಿದ್ದರು.

ಎಸ್‌ವೈಎಸ್ ನೇರಳಕಟ್ಟೆ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿದರು. ಸದಸ್ಯರಾದ ಅಬ್ದುಲ್ ಹಮೀದ್ ಮದನಿ ಕೊಡಾಜೆ ಧನ್ಯವಾದಗೈದರು.

error: Content is protected !! Not allowed copy content from janadhvani.com