ಮನು ಕೃಪಾ ಅಣತಿಯ ಮೇರೆಗೆ ಕಾರ್ಯಾಚರಿಸುತ್ತಿರುವ ಪ್ರಸಕ್ತ ಸರಕಾರಕ್ಕೆ ಯಾವುದೇ ಜನಪರ ಯೋಜನೆಗಳಿಲ್ಲ.
ಹಿಂದುತ್ವ, ಗೋ ಹತ್ಯೆ, ಮತಾಂತರ, ಲವ್ ಜಿಹಾದ್ ಇತ್ಯಾದಿ ಅರೇಬಿಕ್ ಮತ್ತು ಉರ್ದು ಪದಗಳನ್ನು ತನ್ನ ಪ್ರಣಾಳಿಕೆಗೆ ಅಳವಡಿಸಿ, ಈ ದೇಶದ ನೈಜ ಮೂಲ ನಿವಾಸಿಗಳಾದ ದಲಿತರು, ಹಿಂದುಳಿದವರು, ಬುಡಕಟ್ಟು,ಪರಿಶಿಷ್ಟರನ್ನು ಈ ದೇಶದ ಮುಸಲ್ಮಾನರ ಮತ್ತು ಕ್ರೈಸ್ತರ ವಿರುದ್ಧ ಎತ್ತಿಕಟ್ಟಿ ಮತೀಯ ವಿದ್ವೇಶ ಸೃಷ್ಟಿಸಿ ಆಮೂಲಕ ಚುನಾವಣೆ ಗೆದ್ದ ಈ ಮನುವಾದಿ ಪಕ್ಷಕ್ಕೆ, ಮುಂದಿನ ಚುನಾವಣೆಗೆ ತಯಾರಿ ನಡೆಸಬೇಕಿದೆ. ಅದರ ಫಲವಾಗಿದೆ ಹಿಜಾಬ್, ಹಲಾಲ್, ಅಝಾನ್, ಮದರಸ ಎಂಬ ಉರ್ದು ಮತ್ತು ಅರೇಬಿಕ್ ಪದಗಳ ಬಳಕೆ.
ಈಗಾಗಲೇ ಹಿಂದುತ್ವದ ಗುಲಾಮಗಿರಿಗೆ ಶರಣಾದ ಈ ವರ್ಗಕ್ಕೆ ಮನುವಾದಿ ಮುತಾಲಿಕ್ ರ ಷಡ್ಯಂತ್ರದ ಮರ್ಮ ಅರ್ಥವಾಗಲಾರದು. ಮನು, ವೈದಿಕ, ವರ್ಣಬೇಧ ಪ್ರತಿಪಾದಕ ಮುತಾಲಿಕ್ ಗೆ ಏನು ಗೊತ್ತು ಜಗತ್ತಿಗೆ ಸಮಾನತೆಯನ್ನು ಪ್ರತಿಪಾದಿಸುವ ದಿವ್ಯ ಖುರ್ ಆನ್ ಬೋಧನೆಯ, ಅಸಮಾನತೆಯ ಬಹಿಷ್ಕಾರವನ್ನು ತರಬೇತಿ ಗೊಳಿಸುವ ಮದರಸ ವ್ಯವಸ್ಥೆಯ ಬಗ್ಗೆ ?.
ಮುತಾಲಿಕ್ ಗೆ ತಾಕತ್ತಿದ್ದರೆ ತನ್ನ ಆರ್. ಎಸ್. ಎಸ್ ಶಾಖೆಯಲ್ಲಿ ಬೋಧಿಸುವ ಮನುಸ್ಮೃತಿ ಕೃತಿಯನ್ನು ಹಿಡಿದು ಸಂವಾದಕ್ಕೆ ಬರಲಿ. ಮದರಸದಲ್ಲಿ ಭೋದಿಸುತ್ತಿರುವುದು ಭಯೋತ್ಪಾದನೆಯೆ? , ಆರ್. ಎಸ್. ಎಸ್ ಶಾಖೆಯಲ್ಲಿ ಕಲಿಸುತ್ತಿರುವುದು ಭಯೋತ್ಪಾದನೆಯೆ ಎಂಬ ಪಾಠ ತೆಗೆಯುತ್ತೇವೆ.
ಆರ್. ಎಸ್. ಎಸ್, ಅರಗ ಮತ್ತು ಮುತಾಲಿಕನ್ನು ಜಂಟಿಯಾಗಿ ಬಳಸಿ ವಿದ್ವಂಸಕ, ಕೋಮು ಕೃತ್ಯಕ್ಕೆ ಇಳಿದಿದೆ. ಪೊಲೀಸು ವ್ಯವಸ್ಥೆಗೆ ಸ್ವಲ್ಪವಾದರೂ ಶಾಂತಿ ಸುವ್ಯವಸ್ಥೆಯ ಕಾಳಜಿ ಇದ್ದರೆ ಈ ಮುತಾಲಿಕ್ ವಿರುದ್ಧ ಕ್ರಮ ಕೈಗೊಳ್ಳಲಿ. ಸರಕಾರದ ಅಧೀನದಲ್ಲಿ ಹುಚ್ಚಾಸ್ಪತ್ರೆ ಇಲ್ಲವಾದಲ್ಲಿ, ನಾಟಿ ಚಿಕಿತ್ಸೆ ಯಾದರೂ ಮಾಡಿಸಲಿ.
ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
‘ಮೆಟ್ರಾಶ್’ ವರ್ಕ್ ವೀಸಾಕ್ಕೆ ಅರ್ಜಿ ಸಲ್ಲಿಸಲು ಸುಲಭ ವಿಧಾನ- ಕತಾರ್ ಆಂತರಿಕ ಸಚಿವಾಲಯ
DKSC ಮಕ್ಕತುಲ್ ಮುಕರ್ರಮ ವಲಯ ಸಮಿತಿ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ಆಯ್ಕೆ
ದೆಹಲಿಯಲ್ಲಿ ನವಜಾತ ಶಿಶುಗಳನ್ನು ಮಾರುವ ‘ಮಕ್ಕಳ’ ಮಾರುಕಟ್ಟೆ: ಬೃಹತ್ ಮಾಫಿಯಾ ಪತ್ತೆ
ಸಚಿವ ಸಂಪುಟ ವಿಸ್ತರಣೆ: ಅಹಿಂದ, ಮುಸ್ಲಿಂ ಸಮುದಾಯಕ್ಕೆ ಅನ್ಯಾಯ- ದ.ಕ.ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ತೀವ್ರ ಆಕ್ಷೇಪ
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ