ಮನು ಕೃಪಾ ಅಣತಿಯ ಮೇರೆಗೆ ಕಾರ್ಯಾಚರಿಸುತ್ತಿರುವ ಪ್ರಸಕ್ತ ಸರಕಾರಕ್ಕೆ ಯಾವುದೇ ಜನಪರ ಯೋಜನೆಗಳಿಲ್ಲ.
ಹಿಂದುತ್ವ, ಗೋ ಹತ್ಯೆ, ಮತಾಂತರ, ಲವ್ ಜಿಹಾದ್ ಇತ್ಯಾದಿ ಅರೇಬಿಕ್ ಮತ್ತು ಉರ್ದು ಪದಗಳನ್ನು ತನ್ನ ಪ್ರಣಾಳಿಕೆಗೆ ಅಳವಡಿಸಿ, ಈ ದೇಶದ ನೈಜ ಮೂಲ ನಿವಾಸಿಗಳಾದ ದಲಿತರು, ಹಿಂದುಳಿದವರು, ಬುಡಕಟ್ಟು,ಪರಿಶಿಷ್ಟರನ್ನು ಈ ದೇಶದ ಮುಸಲ್ಮಾನರ ಮತ್ತು ಕ್ರೈಸ್ತರ ವಿರುದ್ಧ ಎತ್ತಿಕಟ್ಟಿ ಮತೀಯ ವಿದ್ವೇಶ ಸೃಷ್ಟಿಸಿ ಆಮೂಲಕ ಚುನಾವಣೆ ಗೆದ್ದ ಈ ಮನುವಾದಿ ಪಕ್ಷಕ್ಕೆ, ಮುಂದಿನ ಚುನಾವಣೆಗೆ ತಯಾರಿ ನಡೆಸಬೇಕಿದೆ. ಅದರ ಫಲವಾಗಿದೆ ಹಿಜಾಬ್, ಹಲಾಲ್, ಅಝಾನ್, ಮದರಸ ಎಂಬ ಉರ್ದು ಮತ್ತು ಅರೇಬಿಕ್ ಪದಗಳ ಬಳಕೆ.
ಈಗಾಗಲೇ ಹಿಂದುತ್ವದ ಗುಲಾಮಗಿರಿಗೆ ಶರಣಾದ ಈ ವರ್ಗಕ್ಕೆ ಮನುವಾದಿ ಮುತಾಲಿಕ್ ರ ಷಡ್ಯಂತ್ರದ ಮರ್ಮ ಅರ್ಥವಾಗಲಾರದು. ಮನು, ವೈದಿಕ, ವರ್ಣಬೇಧ ಪ್ರತಿಪಾದಕ ಮುತಾಲಿಕ್ ಗೆ ಏನು ಗೊತ್ತು ಜಗತ್ತಿಗೆ ಸಮಾನತೆಯನ್ನು ಪ್ರತಿಪಾದಿಸುವ ದಿವ್ಯ ಖುರ್ ಆನ್ ಬೋಧನೆಯ, ಅಸಮಾನತೆಯ ಬಹಿಷ್ಕಾರವನ್ನು ತರಬೇತಿ ಗೊಳಿಸುವ ಮದರಸ ವ್ಯವಸ್ಥೆಯ ಬಗ್ಗೆ ?.
ಮುತಾಲಿಕ್ ಗೆ ತಾಕತ್ತಿದ್ದರೆ ತನ್ನ ಆರ್. ಎಸ್. ಎಸ್ ಶಾಖೆಯಲ್ಲಿ ಬೋಧಿಸುವ ಮನುಸ್ಮೃತಿ ಕೃತಿಯನ್ನು ಹಿಡಿದು ಸಂವಾದಕ್ಕೆ ಬರಲಿ. ಮದರಸದಲ್ಲಿ ಭೋದಿಸುತ್ತಿರುವುದು ಭಯೋತ್ಪಾದನೆಯೆ? , ಆರ್. ಎಸ್. ಎಸ್ ಶಾಖೆಯಲ್ಲಿ ಕಲಿಸುತ್ತಿರುವುದು ಭಯೋತ್ಪಾದನೆಯೆ ಎಂಬ ಪಾಠ ತೆಗೆಯುತ್ತೇವೆ.
ಆರ್. ಎಸ್. ಎಸ್, ಅರಗ ಮತ್ತು ಮುತಾಲಿಕನ್ನು ಜಂಟಿಯಾಗಿ ಬಳಸಿ ವಿದ್ವಂಸಕ, ಕೋಮು ಕೃತ್ಯಕ್ಕೆ ಇಳಿದಿದೆ. ಪೊಲೀಸು ವ್ಯವಸ್ಥೆಗೆ ಸ್ವಲ್ಪವಾದರೂ ಶಾಂತಿ ಸುವ್ಯವಸ್ಥೆಯ ಕಾಳಜಿ ಇದ್ದರೆ ಈ ಮುತಾಲಿಕ್ ವಿರುದ್ಧ ಕ್ರಮ ಕೈಗೊಳ್ಳಲಿ. ಸರಕಾರದ ಅಧೀನದಲ್ಲಿ ಹುಚ್ಚಾಸ್ಪತ್ರೆ ಇಲ್ಲವಾದಲ್ಲಿ, ನಾಟಿ ಚಿಕಿತ್ಸೆ ಯಾದರೂ ಮಾಡಿಸಲಿ.
ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ