ಮಂಗಳೂರು :ಇತ್ತೀಚೆಗೆ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಯವರು ಚಾಮರಾಜ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಪಾಕಿಸ್ತಾನಿಗಳು ಹುಟ್ಟಿ ಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡಿ, ಕೇರಳ, ಮಂಗಳೂರು ದೆಹಲಿಯು ಭಯೋತ್ಪಾದನೆ ಕೇಂದ್ರಗಳ ಮೂಲ ಎಂಬಿತ್ಯಾದಿಯಾಗಿ ಶಿಕ್ಷಣ ತವರು ಮಂಗಳೂರು ಅನ್ನು ನಿಂದಿಸಿದ್ದಾರೆ.
ಮತೀಯ ವಿದ್ವೇಶ ಸೃಷ್ಟಿಸುವ ಸರ್ವ ಸಲಕರಣೆಗಳು ತಮ್ಮ ಬತ್ತಳಿಕೆಯಲ್ಲಿ ಖಾಲಿಯಾದಾಗ, ಪರಿವಾರಗಳಿಗಿರುವ ಉಳಿಕೆಯ ಅಸ್ತ್ರ , ಪ್ರಾದೇಶಿಕ ಮತೀಯ ಅಲ್ಪ ಸಂಖ್ಯಾತರನ್ನು ವಿದೇಶಿ ದೇಶಗಳೊಂದಿಗೆ ಸಮೀಕರಿಸಿ, ಈಗಾಗಲೇ ಗುಲಾಮೀಕರಣ ಗೊಳಿಸಿರುವ ಹಿಂದುಳಿದ ವರ್ಗ, ದಲಿತರು ಮತ್ತು ಬುಡಕಟ್ಟು ಜನರು, ತಮ್ಮ ಆಡಳಿತ ವೈಫಲ್ಯ, ಬೆಲೆಯೇರಿಕೆ, ನಿರುದ್ಯೋಗ ಇತ್ಯಾದಿಗಳ ಬಗ್ಗೆ ರೊಚ್ಚಿಗೆ ಏಳದಿರಲಿ ಎಂದು ಅವರ ಒಟ್ಟಾರೆ ಗಮನವನ್ನು ಅನಿವಾರ್ಯವಾಗಿ ಬೇರೆಡೆ ತಿರುಗಿಸುವ ಷಡ್ಯಂತ್ರವಾಗಿದೆ ಕೃಪಾ ಪೋಷಿತ ಲಿಖಿತ ಹೇಳಿಕೆ.
ಆರ್ಯ ಸೃಷ್ಟಿ, ಮುಸ್ಲಿಮ್ ಡಿಫೆನ್ಸ್ ಫೋರ್ಸ್ ಎಂಬ ಸಾಮಾಜಿಕ ಜಾಲ ತಾಣದ ಮೂಲಕ ವಿದ್ವೇಶ ಪ್ರಚಾರಗೊಳಿಸಿ ಆ ಮೂಲಕ ಈಗಾಗಲೇ ಅಸ್ವಸ್ಥಗೊಂಡ ಮಂಗಳೂರಿನಲ್ಲಿ ‘ ಮುತಾಲಿಕ ‘ ನನ್ನು ರಂಗಕ್ಕಿಳಿಸಿ ಮತೀಯ ಗಲಭೆ ಸೃಷ್ಟಿಸುವ ಹುನ್ನಾರ ಆಗಿದೆ. ಈ ಷಡ್ಯಂತ್ರದ ಹಿಂದೆ ಆರ್ಯ ಶಕ್ತಿ ಶ್ರಮವಿದೆ.
ಈ ಜಿಲ್ಲೆಯ ಬಿಲ್ಲವರು,ದಲಿತರು,ಬುಡಕಟ್ಟು ಜನಾಂಗ,ಕ್ರೈಸ್ತರು,ಮುಸ್ಲಿಮರೆಲ್ಲರು ಈ ಆರ್ಯ,ಬನಿಯಾಗಳ ಮಾಹ ಷಡ್ಯಂತ್ರವನ್ನು ಅರ್ಥ ಮಾಡಿಕೊಳ್ಳಬೇಕಿದೆ. ನಿಷ್ಠ ತನಿಖಾ ಸಂಸ್ಥೆಗಳು ಮತ್ತು ಸ್ವತಂತ್ರ ಮಾಧ್ಯಮಗಳು ಈ ‘ ಸಂಘಟನೆಯ ‘ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಮತ್ತು ಈ ಸಂಘಟನೆಯಲ್ಲಿ ಬಳಕೆ ಆಗಿರುವ ‘ ಮುಸ್ಲಿಮ್ ‘ ಪದ ನಕಲಿಯೇ ಎಂದು ಸಾರ್ವಜನಿಕರಿಗೆ ಬಹಿರಂಗ ಪಡಿಸಬೇಕು.
ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ