janadhvani

Kannada Online News Paper

ಅಲ್-ಮದೀನತುಲ್‌ ಮುನವ್ವರ ಮೂಡಡ್ಕ: ಸೌದಿ ಅಲ್ ಖೊಬರ್ ಸಮಿತಿಯ ಸಾರಥಿಗಳು

ಮೂಡಡ್ಕ ಅಲ್ ಮದೀನತುಲ್ ಮುನವ್ವರ ಎಜುಕೇಶನಲ್ ಸೆಂಟರ್ ಇದರ ಅಲ್ ಖೊಬರ್ ಸಮಿತಿಯಿಂದ ಗ್ರಾಂಡ್ ಇಫ್ತಾರ್, ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ನಮ್ಮನ್ನಗಲಿದ ಸ್ಥಾಪನೆ, ಸಂಘಟನೆಗಳ ಹಾಗೂ ಕುಟುಂಬದಿಂದ ಮರಣಹೊಂದಿದ ಸದಸ್ಯರ ಮೇಲೆ ತಹ್ಲೀಲ್ ಸಮರ್ಪಣೆ ಹಾಗೂ ದುಆ ಮಜ್ಲಿಸ್ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

KCF ದಮ್ಮಾಮ್ ದವಾಶೀರ್ ಸಂಘಟನೆ ಅಧ್ಯಕ್ಷರು ಸಅದಿಯಾ ಓರ್ಗನೆಝರ್ ಅಬ್ದುಲ್ ಜಬ್ಬಾರ್ ಲತ್ವೀಫಿ ಬಾಕಿಮ್ಮಾರ್ ರವರ ನೆತೃತ್ವದಲ್ಲಿ
ಮನ್ಸೂರ್ ಮುಸ್ಲಿಯಾರ್ ಖಿರಾಹತ್ ಪಠಿಸಿದರು. ಮೂಡಡ್ಕ ಸೌದಿ ರಾಷ್ಟೀಯ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ KCF ದಮ್ಮಾಮ್ ಝೊನ್ ಅಧ್ಯಕ್ಷರು ಉಮರುಲ್ ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ ಯವರು ಉದ್ಘಾಟಿಸಿದರು.

DKSC ದಮ್ಮಾಮ್ ಝೋನ್ ಅಧ್ಯಕ್ಷರು ಅಬ್ದುಲ್ ರಹ್ಮಾನ್ ಹಾಜಿ ಪಾನಾಜೆ ಹಾಗೂ ಸುಳ್ಯ ಅನ್ಸಾರಿ ಯತೀಮ್ ಖಾನ ಗೌರವ ಅಧ್ಯಕ್ಷರು ರಫೀಕ್ ಕದಿಕಡ್ಕ, ಮೂಡಡ್ಕ ನೂತನ ಅಧ್ಯಕ್ಷ ಅಬ್ದುಲ್ ಲತೀಫ್ ಬೆಳ್ಳಾರೆ, ನೂತನ ಕಾರ್ಯದರ್ಶಿ
ಖಲಂರ್ ಶಾಯಿದ್ ಜವಗಲ್
ಹಿತವಚನ ನೀಡಿದರು.

ಸಭಾಧ್ಯಕ್ಷರು ಮೂಡಡ್ಕ ಸೌದಿ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರು ಅಬ್ದುಲ್ ರಶೀದ್ ಬೆಳ್ಳಾರೆ ಅದ್ಯಕ್ಷ ಭಾಷಣದಲ್ಲಿ ಸ್ಥಾಪನೆಯ ಬಗ್ಗೆ ಹಾಗೂ ಕಾರ್ಯಚರಣೆಯ ಬಗ್ಗೆ ವಿವರಿಸಿದರು. ಮೂಡಡ್ಕ ಸೌದಿ ರಾಷ್ಟ್ರೀಯ ಸಮಿತಿಯ ಸದಸ್ಯರಾದ ಬಹು ಉಮರ್ ಹಾಜಿ ಅಳಕೆಮಜಲ್ ನೂತನ ಕಾರ್ಯಕಾರಿ ಸಮಿತಿಗೆ ಪ್ಯಾನಲ್ ಮಂಡಿಸಿ ಅದಕ್ಕೆ ಕೆಲವೊಂದು ಸದಸ್ಯರನ್ನು ಸೇರಿಸಿ 2022-2023ರ ಸಾಲಿಗೆ ಈ ಕೆಳಗಿನ ನೂತನ ಸಮಿತಿಯನ್ನು ರಚಿಸಿದರು.

ಗೌರವ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಹಾಜಿ ಸುಳ್ಯ
ಅಧ್ಯಕ್ಷರು: ಅಬ್ದುಲ್ ಲತೀಫ್ ಬೆಳ್ಳಾರೆ
ಪ್ರದಾನ ಕಾರ್ಯದರ್ಶಿ:ಖಲಂರ್ ಶಾಯಿದ್ ಜವಗಲ್
ಕೋಶಾಧಿಕಾರಿ: ಸುಹೈಲ್ ಕೋಡಿ (ಕರಾಯ)
ಉಪಾಧ್ಯಕ್ಷರು: ಬಾತಿಷ ಮುಕ್ವೆ ಪುತ್ತೂರು
ಜೊತೆ ಕಾರ್ಯದರ್ಶಿ:ಮನ್ಸೂರ್ ಮುಕ್ವೆ
ಸಂಘಟನೆ ಕಾರ್ಯದರ್ಶಿಗಳಾಗಿ ತಾಜುದೀನ್ ಪುರ್ಸರಕಟ್ಟೆ, ಸಪ್ವಾನ್ ಬೆಳ್ಳಾರೆ
ಮೂಡಡ್ಕ ಆಲ್ ಖೋಬರ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಹೈಲ್ ಕೋಡಿ ಕರಾಯ ಸ್ವಾಗತಿಸಿ
DKSC ದಮ್ಮಾಮ್ ಝೊನ್ ಪ್ರದಾನ ಕಾರ್ಯದರ್ಶಿ ಮುಹಮ್ಮದ್ ರೊಯಲ್ ಧನ್ಯವಾದ ಗೈದರು.

error: Content is protected !! Not allowed copy content from janadhvani.com