ಮಂಗಳೂರು: ಶ್ರೀರಾಮ ಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನ್ನು ಮಂಗಳೂರು ಪೊಲೀಸ್ ಆಯುಕ್ತ ಕಚೇರಿಯಲ್ಲಿ ಕೆಂಪು ಹಾಸು ಸ್ವಾಗತದಂತೆ ಬರ ಮಾಡಿ ಕೊಂಡ ವಿಷಯಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸ್ ಆಯುಕ್ತರು ಸಾರ್ವಜನಿಕ ಹೇಳಿಕೆ ನೀಡಿ ಸ್ಪಷ್ಟೀಕರಣ ನೀಡಬೇಕು ಎಂದು ಮುಸ್ಲಿಮ್ ಒಕ್ಕೂಟದ ದ.ಕ.ಜಿಲ್ಲಾಧ್ಯಕ್ಷರಾದ ಮಾಜಿ ಮೇಯರ್ ಕೆ.ಅಶ್ರಫ್ ಆಗ್ರಹಿಸಿದ್ದಾರೆ.
ಇತ್ತೀಚೆಗೆ , ರಾಜ್ಯಾದ್ಯಂತ ನೂರಾರು ಸಭೆ ಸಮಾರಂಭದಲ್ಲಿ ಮುಸ್ಲಿಮ್,ಕ್ರೈಸ್ತ,ದಲಿತ ಸಮುದಾಯದ ವಿರುದ್ಧ ನಿರಂತರ ಕೋಮು ದ್ವೇಷದ ಭಾಷಣ ಮಾಡುತ್ತಾ, ನೂರಾರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಇವರನ್ನು, ಇದೇ ಪೊಲೀಸು ಇಲಾಖೆಯ ಉಡುಪಿ ಅಧೀಕ್ಷಕರು ಇತ್ತೀಚೆಗೆ ಸಂಭಾವ್ಯ ವಿದ್ವಂಸಕ ಕೃತ್ಯ ಆರೋಪಿಸಿ ಉಡುಪಿ ಜಿಲ್ಲೆಗೆ ಪ್ರವೇಶಿಸದಂತೆ ಪ್ರತಿ ಭಂಧಕ ಆಜ್ಞೆ ವಿಧಿಸಿ ಗಡಿಪಾರು ಮಾಡಿ ಇನ್ನೂ ಒಂದು ತಿಂಗಳು ಪೂರ್ತಿಯಾಗಿಲ್.
ಮಂಗಳೂರು ನಗರ ಪೊಲೀಸು ಆಯುಕ್ತರು, ಮುತಾಲಿಕ್ ಏನೋ ಶಿಷ್ಟಾಚಾರದಂತೆ ಸರಕಾರಿ ಕಚೇರಿಗಳಲ್ಲಿ ಶಾಂತಿ ಸುವ್ಯವಸ್ಥೆಯ ಭಾರೀ ಮೇಲ್ನೋಟ ವಹಿಸಿದಂತೆ ಪ್ರಭಾರ ಹೊಂದುವ ರೀತಿಯಲ್ಲಿ ಭೇಟಿ ನೀಡುವ ಕುಕೃತ್ಯದ ಬಗ್ಗೆ ಪೊಲೀಸು ಆಯುಕ್ತರಾದ ಶಶಿ ಕುಮಾರ್ ಸಾರ್ವಜನಿಕ ಸ್ಪಷ್ಟೀಕರಣ ನೀಡಬೇಕಿದೆ.
ಪೊಲೀಸು ಇಲಾಖೆ ಮತ್ತು ಮತೀಯ ವಿದ್ವೇಶಿ ಆರ್ಯ ಸಂತತಿಯ ಮುತಾಲಿಕ್ ಗೆ ಏನು ಸಂಭಂದ ಎಂದು ಜಿಲ್ಲೆಯ ಜನತೆಗೆ ತಿಳಿಯಬೇಕಿದೆ. ಪೊಲೀಸು ಇಲಾಖೆಯ ಇಂತಹ ನಡೆ ಸ್ಥಳೀಯವಾಗಿ ತೀವ್ರ ಸಂಶಯಕ್ಕೆ ಕಾರಣವಾಗಿದೆ. ಈ ಭೇಟಿಯಲ್ಲಿ ಮಂಗಳೂರಿನ ಸಂಘ ನಿಕೇತನೀಗಳ ನೇರ ಪ್ರಭಾವ ಇದ್ದ ಹಾಗೆ ಕಾಣುತ್ತದೆ ಎಂದು ಜಿಲ್ಲೆಯ ಜನತೆ ಭಾವಿಸ ಬೇಕಾಗುತ್ತದೆ ಎಂದು ಕೆ.ಅಶ್ರಫ್ ಹೇಳಿದ್ದಾರೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ