janadhvani

Kannada Online News Paper

ಸೂರಿಕುಮೇರು ಎಸ್‌ವೈ‌ಎಸ್ ಎಸ್ಸೆಸ್ಸೆಫ್ ನಿಂದ ರಂಝಾನ್ ಕಿಟ್ ವಿತರಣೆ

ಮಾದರಿ ಯೋಗ್ಯ ಪುಣ್ಯಕಾರ್ಯ ಅಲ್ಲಾಹನು ಸ್ವೀಕರಿಸಲಿ : ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ

ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈ‌ಎಸ್ ಸೂರಿಕುಮೇರು ಬ್ರಾಂಚ್ ಕಮಿಟಿ ಮತ್ತು ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ಇದರ ವತಿಯಿಂದ ಅರ್ಹ ಕುಟುಂಬಗಳಿಗೆ ರಂಝಾನ್ ತಿಂಗಳ ರೇಶನ್ ಕಿಟ್ ವಿತರಿಸಲಾಯಿತು.

ಸಂಜರಿ ಕಾಂಪ್ಲೆಕ್ಸ್ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಬ್ದುಲ್ ಕರೀಂ ಸೂರಿಕುಮೇರು ಅಧ್ಯಕ್ಷತೆ ವಹಿಸಿದರು,ಸೆಂಟರ್ ನಾಯಕರಾದ ಯೂಸುಫ್ ಹಾಜಿ ಸೂರಿಕುಮೇರು ಕಾರ್ಯಕ್ರಮವನ್ನು ಉದ್ಘಾಟಿಸಿದರು,ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ ಪ್ರಾಸ್ತಾವಿಕ ಮಾತುಗಳನ್ನಾಡಿ ದುಆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಎಸ್‌ವೈ‌ಎಸ್ ಮಾಣಿ ಸೆಂಟರ್ ಸಾಂತ್ವನ ಕಾರ್ಯದರ್ಶಿ ಎಸ್ ಆರ್ ಸುಲೈಮಾನ್ ಸೂರಿಕುಮೇರು, ಎಸ್ಸೆಸ್ಸೆಫ್ ನಾಯಕ ಇಸಾಕ್ ಮಾಣಿ,ಸುಲೈಮಾನ್ ನೆಲ್ಲಿ,ಶಮೀರ್ ಸೂರಿಕುಮೇರು, ಮುಹೈಮಿನ್ ಸೂರಿಕುಮೇರು,ಹಮೀದ್ ಮಾಣಿ,ಇಯಾಸ್ ಬಪ್ಪಳಿಗೆ,ಉಪಸ್ಥಿತರಿದ್ದರು, ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com