ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಜಾತ್ರಾ ಮಹೋತ್ಸವದ ಹೊರಾಂಗಣದ ವಾಣಿಜ್ಯ ಮಳಿಗೆಗಳಲ್ಲಿ ಅನ್ಯ ಕೋಮಿನ ಬೀದಿ ಬದಿ,ಸ್ಟಾಲ್ ವರ್ತಕರಿಗೆ, ವ್ಯಾಪಾರಸ್ತರಿಗೆ ಅವಕಾಶ ನಿರಾಕರಣೆ ಮತ್ತು ಗ್ರಾಹಕರಿಗೆ ಬಹಿಷ್ಕಾರ ಶಪಥ ವಿಷಾದನೀಯ.
ಜಿಲ್ಲೆಯ ಶ್ರದ್ದಾ ಕೇಂದ್ರಗಳಲ್ಲಿನ ಜಾತ್ರೆ, ಮಹೋತ್ಸವಕ್ಕೆ ಅದರದ್ದೇ ಆದ ವಿಶೇಷತೆ, ಸಾಮರಸ್ಯದ ಚರಿತ್ರೆಯೇ ಇದೆ. ಈ ಚರಿತ್ರೆಯು ಕೊಡು ಕೊಳ್ಳುವಿಕೆಯ ಆಧಾರದ ಮೇಲೆ ನೆಲೆ ನಿಂತಿದೆ. ಈ ಉತ್ಸವದ ಪ್ರಮುಖ ಆಕರ್ಷಣೆಯೇ ಅಲ್ಲಿನ ವಾಣಿಜ್ಯ ಸಂತೆ. ದುರದೃಷ್ಟವಶಾತ್ ಈ ವಾಣಿಜ್ಯ ಸಂತೆಯ ಸೌಂದರ್ಯ ಮತೀಯ ಕಾರಣದಿಂದ ವ್ಯತ್ಯಯ ವಾದರೆ ನಮ್ಮ ಸೌಹಾರ್ಧ ಸಂಸ್ಕೃತಿಗೆ ಧಕ್ಕೆ ಹೊರತು, ವ್ಯಾಪಾರ ವ್ಯವಹಾರಕ್ಕೆ ಧಕ್ಕೆ ಇಲ್ಲ ಎಂಬುದನ್ನು ನಾವು ತಿಳಿದು ಕೊಳ್ಳಬೇಕು.
ಕೆಲವು ಮತೀಯ,ಕೋಮು ಪ್ರಚೋದಕ ಶಕ್ತಿಗಳಿಂದ ಒಂದು ನಿರ್ಧಿಷ್ಟ ಸಮುದಾಯದ ವ್ಯಾಪಾರಸ್ಥರನ್ನು, ವರ್ತಕರನ್ನು ಸಂತೆ ವಾಣಿಜ್ಯ ಮಳಿಗೆ ನಿರಾಕರಣೆಯ ಮೂಲಕ ಬಹಿಷ್ಕರಿಸಿದರೆ, ಸ್ಥಳೀಯ ಆರ್ಥಿಕ ವ್ಯವಹರಣೆ ಕುಂಠಿತ ವಾಗಬಹುದು ಹೊರತು, ಬಹಿಷ್ಕರಿತ ವರ್ತಕರ ಆದಾಯವಲ್ಲ.
ಪ್ರತಿ ಮನುಷ್ಯನ ದೈನಂದಿನ ಆಹಾರ ನಿಸರ್ಗ ನಿಯಮ, ಅದು ಎಂದಿಗೂ ವ್ಯತ್ಯಾಸ ಆಗದು. ಮುಸ್ಲಿಮ್ ವರ್ತಕರಿಗೆ ಮಳಿಗೆ ನಿರಾಕರಿಸಿದವರು, ಮುಸ್ಲಿಮ್ ಸಮುದಾಯದ ಗ್ರಾಹಕರನ್ನು ಬಹಿಷ್ಕರಿಸದಿರಲಿ. ಹಾಗೆ ಬಹಿಷ್ಕರಿಸಿದರೆ ಅದಕ್ಕೆ ಪ್ರತಿಯಾಗಿ ಬಹಿಷ್ಕರಿಸುವ ಸಮುದಾಯದ ವರ್ತಕ ರಿಂದಲೇ ಪ್ರತುತ್ತರ ಲಭಿಸಲಿದೆ,ಹಾಗೆ ಆಗದಿರಲಿ ಎಂದು ಹಾರೈಸೋಣ.
ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಮುಸ್ಲಿಮ್ ಮತ ಸ್ಥಿತಿಗತಿ ಇಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಸುದೃಢಗೊಳಿಸಿದೆ,ರಾಜಣ್ಣ ಅರಿಯಲಿ: ಕೆ.ಅಶ್ರಫ್
ಮೊಂಟೆಪದವು ಗುಡ್ಡ ಕುಸಿತ: ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಗು ಮೃತ್ಯು- ತಾಯಿಯ ರಕ್ಷಣೆ
ದೇರಳಕಟ್ಟೆ : ಮನೆಯ ತಡೆಗೋಡೆ ಕುಸಿದು 10 ವರ್ಷದ ಪುಟ್ಟ ಬಾಲಕಿ ಮೃತ್ಯು
ಭಾರೀ ಮಳೆ: ಮೊಂಟೆಪದವು ಮನೆ ಮೇಲೆ ಗುಡ್ಡ ಕುಸಿದು ಪುಟ್ಟ ಮಗು ಸಹಿತ ಇಬ್ಬರು ಮೃತ್ಯು
ಸದಾ ಸಮುದಾಯದ ಪರ ಧ್ವನಿಯೆತ್ತುವ ಅಲ್ಪಸಂಖ್ಯಾತ ಸಚಿವರು ಕರಾವಳಿಗೆ ಭೇಟಿ ನೀಡದಿರಲು ಕಾರಣವೇನು?
ಉಲಮಾ ಒಕ್ಕೂಟದ ವಖ್ಫ್ ಪ್ರತಿಭಟನೆ : ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ ಸಂಘಟಕರು
ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ಜೆಡಿಎಸ್ ಬಂಟ್ವಾಳ ಮೈನಾರಿಟಿ ಅಧ್ಯಕ್ಷ ಮುಹಮ್ಮದ್ ಶಫೀಕ್ ಆಲಡ್ಕ
ಮುಸ್ಲಿಮ್ ಬಸ್ ಪ್ರಯಾಣಿಕನ ಮೇಲೆ ಹಲ್ಲೆ: ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು- ಕೆ.ಅಶ್ರಫ್
ಸರಕಾರದ ಆದೇಶ, ತುಳುನಾಡಿನ ಜನತೆಯ ಒಗ್ಗಟ್ಟಿನ ಹೋರಾಟದ ಫಲ- ಮುನೀರ್ ಕಾಟಿಪಳ್ಳ
ಮುಸ್ಲಿಮ್ ವರ್ತಕರ ಮೇಲೆ ಹಲ್ಲೆ: ಮುಸ್ಲಿಮ್ ಮುಖಂಡರ ಭೇಟಿ, ಗಂಭೀರ ಪರಿಗಣನೆ- ಕೆ.ಅಶ್ರಫ್